ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೈತನನ್ನು ಅಮಾನವೀಯವಾಗಿ ಥಳಿಸಿದ ಮಹಾರಾಷ್ಟ್ರ ಶಾಸಕ
ಔರಂಗಾಬಾದ(ಮಹಾರಾಷ್ಟ್ರ), ಜೂನ್ 15: ಮಧ್ಯಪ್ರದೇಶದಂತೇ ಮಹಾರಾಷ್ಟ್ರದಲ್ಲೂ ಭುಗಿಲೆದ್ದಿದ್ದ ರೈತರ ಹೋರಾಟ, ಸಾಲಮನ್ನಾ ಮಾಡುವುದಾಗಿ ಇಲ್ಲಿನ ರಾಜ್ಯ ಸರ್ಕಾರ ನೀಡಿದ ಭರವಸೆಯಿಂದಾಗಿ ಕೊಂಚ ತಣ್ಣಗಾಗಿದೆ. ಹೀಗಿರುವಾಗ ಇಲ್ಲಿನ ಔರಂಗಾಬಾದ ನ ಸಿಲ್ಲೋಡ್ ಎಂಬ ಪ್ರದೇಶದ ಕಾಂಗ್ರೆಸ್ ಶಾಸಕನೊಬ್ಬ ತನ್ನ ಪಕ್ಕದ ಮನೆಯ ರೈತನೊಬ್ಬನಿಗೆ ಅಮಾನವೀಯವಾಗಿ ಥಳಿಸಿದ ಘಟನೆ ನಡೆದಿದೆ.
ಮಧ್ಯಪ್ರದೇಶದಲ್ಲಿ ಇನ್ನೂ ತಣ್ಣಗಾಗಿಲ್ಲ ಅನ್ನದಾತನ ಕ್ರೋಧದ ಕಿಚ್ಚು
ಶಾಸಕ ಅಬ್ದುಲ್ ಸತ್ತರ್ ಅಬ್ದುಲ್ ನಬಿ, ನೆರೆಮನೆಯ ರೈತನೊಬ್ಬನೊಂದಿಗೆ ಜಮೀನಿಗೆ ಸಂಬಂಧಿಸಿದ ವಿವಾದದಿಂದಾಗಿ ಜಗಳ ಆರಂಭಿಸಿದ್ದಾರೆ. ಈ ಸಮಯದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ರೈತನನ್ನು ಅಮಾನವೀಯವಾಗಿ ಥಳಿಸಿದ ವಿಡಿಯೋ ಸಹ ಎಲ್ಲೆಡೆ ಹರಿದಾಡಿ, ವೈರಲ್ ಆಗಿದೆ.
ಆ ಜಮೀನು ದಲಿತ ಸಹೋದರರಿಬ್ಬರಿಗೆ ಸೇರಿದ್ದು, ಅದಕ್ಕೂ ನನಗೂ ಸಂಬಂಧವಿಲ್ಲ, ಜಗಳಕ್ಕೆ ಕಾರಣ ಬೇರೆಯೇ ಇದೆ. ಆ ಸಂದರ್ಭದಲ್ಲಿ ನಾನು ಹಾಗೆ ವರ್ತಿಸುವುದು ಅನಿವಾರ್ಯವಾಗಿತ್ತು ಎಂದು ಶಾಸಕ ಸಮಜಾಯಿಷಿ ನೀಡಿದ್ದಾರೆ.
Comments
English summary
Even as the maharastra Government assuaged the anger of farmers by waiving off thier loans, a video of a farmer getting beaten up by Congress MLA from Sillod along with his supporters has gone viral. MLA Abdul Sattar Abdul Nabi allegedly beat up farmers over a land dispute.
Story first published: Thursday, June 15, 2017, 12:08 [IST]