ಮ್ಯಾಗ್ಸೆಸೆ ಪ್ರಶಸ್ತಿ: ಅರ್ನಬ್ V/S ರವೀಶ್ ಕುಮಾರ್ ಟ್ವಿಟರ್ ಟ್ರಾಲ್!
ಬೆಂಗಳೂರು, ಆಗಸ್ಟ್ 05 : 2019ನೇ ಸಾಲಿನ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರಕಟವಾಗಿದೆ. ರವೀಶ್ ಕುಮಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಅರ್ನಬ್ ಗೋಸ್ವಾಮಿಗೆ ಏಕೆ ಪ್ರಶಸ್ತಿ ಸಿಕ್ಕಿಲ್ಲ? ಎಂದು ಟ್ರಾಲ್ ಮಾಡಲಾಗುತ್ತಿದೆ.
ಎನ್ಡಿಟಿವಿ ಇಂಡಿಯಾದ ಕಾರ್ಯಕಾರಿ ಸಂಪಾದಕರಾದ 44 ವರ್ಷದ ರವೀಶ್ ಕುಮಾರ್ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದಿದ್ದಾರೆ. ಏಷ್ಯಾ ಖಂಡದ ನೊಬೆಲ್ ಪ್ರಶಸ್ತಿ ಎಂದು ಕರೆಯಲಾಗುವ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಅರ್ನಬ್ಗೆ ಏಕೆ ಸಿಕ್ಕಿಲ್ಲ ಎಂಬುದು ಟ್ವಿಟರ್ನಲ್ಲಿ ಸಿಕ್ಕಾಪಟ್ಟೆ ಚರ್ಚೆಯ ವಿಷಯ.
ಲೋಕ ಚುನಾವಣೆ ಸಂದರ್ಭದಲ್ಲಿ ಹರಿದಾಡಿದ್ದು, 1.30 ಲಕ್ಷ ಫೇಕ್ ಸುದ್ದಿಗಳು!
ಅರ್ನಬ್ ಗೋ ಸ್ವಾಮಿ ಪ್ರಸಿದ್ಧ ಪಂಚ್ ನೇಷನ್ ವಾಂಟ್ಸ್ ಟು ನೋ ಲೈನ್ ಇಟ್ಟುಕೊಂಡು ಟ್ವಿಟರ್ನಲ್ಲಿ ಟ್ರಾಲ್ ಮಾಡಲಾಗುತ್ತಿದೆ. "Nation wants to know" ಅರ್ನಬ್ಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಏಕೆ ಸಿಕ್ಕಿಲ್ಲ? ಎಂದು ಕಾಲೆಳೆಯಲಾಗುತ್ತಿದೆ.
ಮಾಧ್ಯಮಗಳಿಗೆ ನೋ ಎಂಟ್ರಿ! ಬಿಕ್ಕಟ್ಟಿನ ನಂತರ ಕಾಂಗ್ರೆಸ್ ನಿಂದ ಖಡಕ್ ನಿರ್ಧಾರ
ರವೀಶ್ ಕುಮಾರ್ ಬಿಹಾರದ ಜಿತ್ವಾರ್ಪುರ್ ಗ್ರಾಮದವರು. ಜಿಲ್ಲಾ ವರದಿಗಾರರಾಗಿ ಕೆಲಸ ಆರಂಭಿಸಿದ ಅವರು ಇಂದು ಕಾರ್ಯಕಾರಿ ಸಂಪಾದಕ ಹುದ್ದೆಗೇರಿದ್ದಾರೆ. 1996ರಲ್ಲಿ ರವೀಶ್ ಕುಮಾರ್ ಎನ್ಡಿಟಿವಿ ಸೇರಿದ್ದರು.
ವಿಡಿಯೋ: ಮೋದಿ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಹೆದರಿದ ಪಾಕಿಸ್ತಾನ
ಅರ್ನಬ್ಗೆ ಭಾರತ ರತ್ನ ಪ್ರಶಸ್ತಿ
ರವೀಶ್ ಕುಮಾರ್ ರಾಮನ್ ಮ್ಯಾಗ್ಸೆಸೆ, ನೋಬೆಲ್ ಯಾವ ಪ್ರಶಸ್ತಿಯನ್ನು ಬೇಕಾದರೂ ಪಡೆಯಲಿ. ಅರ್ನಬ್ಗೆ ಭಾರತ ರತ್ನ ಸಿಗಲಿದೆ ಎಂದು ಕಾಲೆಳೆಯಲಾಗಿದೆ.
ಅರ್ನಬ್ ಗೋ ಸ್ವಾಮಿ ಕೊಡುಗೆ ಏನು?
ಪತ್ರಿಕೋದ್ಯಮಕ್ಕೆ ಅರ್ನಬ್ ಗೋ ಸ್ವಾಮಿ ಕೊಡುಗೆ ಏನು ಎಂದು ರವೀಶ್ ಕುಮಾರ್ ಕೇಳುವ ಪ್ರಶ್ನೆಯನ್ನು ಇಟ್ಟುಕೊಂಡು ಟ್ರಾಲ್ ಮಾಡಲಾಗಿದೆ. ರವೀಶ್ ಕುಮಾರ್ ಅರ್ನಬ್ಗೆ ಕಣ್ಣು ಮುಚ್ಚಿ ಎಂದು ಹೇಳುವ ಟ್ರಾಲ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅರ್ನಬ್ ಗೋ ಸ್ವಾಮಿ ಕಣ್ಣೀರು
ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಕೈ ತಪ್ಪಿದ್ದಕ್ಕೆ ಅರ್ನಬ್ ಗೋಸ್ವಾಮಿ ಕಣ್ಣೀರು ಹಾಕುತ್ತಿದ್ದಾರೆ ಎಂದು ಮಗುವಿನ ವಿಡಿಯೋ ಹಾಕಿ ಟ್ರಾಲ್ ಮಾಡಲಾಗಿದೆ.
ಅರ್ನಬ್ ಗೋ ಸ್ವಾಮಿ ನಡೆ
ಅರ್ನಬ್ಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಸಿಕ್ಕಿಲ್ಲ. ಆದ್ದರಿಂದ, ಇನ್ನು ಮುಂದೆ ಅವರು ಎಚ್ಚರಿಕೆ ಹೆಜ್ಜೆ ಇಡಲಿದ್ದಾರೆ ಎಂದು ಗೂಬೆಯ ಚಿತ್ರವನ್ನು ಹಾಕಿ ಟ್ರಾಲ್ ಮಾಡಲಾಗಿದೆ.
ಈಗ ಭೂಗತರಾಗುವ ಸಮಯ ಬಂದಿದೆ
ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಅರ್ನಬ್ಗೆ ಸಿಕ್ಕಿಲ್ಲ. ಅರ್ನಬ್ ಈಗ ಭೂಗತರಾಗುವ ಸಮಯ ಬಂದಿದೆ ಎಂದು ಟ್ವಿಟರ್ನಲ್ಲಿ ಟ್ರಾಲ್ ಮಾಡಲಾಗುತ್ತಿದೆ.