ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ಮುಂದುವರೆದ ಹೆಸರು ಬದಲಾವಣೆ ರಾಜಕೀಯ

By Manjunatha
|
Google Oneindia Kannada News

ಲಕ್ನೋ, ಆಗಸ್ಟ್‌ 06: ಉತ್ತರ ಪ್ರದೇಶ ರಾಜ್ಯದಲ್ಲಿ ಹೆಸರು ಬದಲಾವಣೆ ರಾಜಕೀಯ ಮುಂದುವರೆದಿದೆ. ಇಂದು ಲಕ್ನೋದ ಮೊಘಲ್ ಸರಾಯ್ ರೈಲ್ವೆ ನಿಲ್ದಾಣದ ಹೆಸರನ್ನು ಬದಲಾಯಿಸಿ ದೀನದಯಾಳ್ ಉಪಾಧ್ಯಾಯ ಎಂದು ಮರುನಾಮಕರಣ ಮಾಡಲು ಒಪ್ಪಿಗೆ ಸೂಚಿಸಲಾಗಿದೆ.

ಈ ಮುಂಚೆಯೂ ಹಲವು ಸ್ಥಳ, ಕಟ್ಟಡಗಳ ಮುಸ್ಲಿಂ ಹೆಸರುಗಳನ್ನು ಹಿಂದೂ ಹೆಸರುಗಳನ್ನಾಗಿ ಮರು ನಾಮಕರಣ ಮಾಡಲಾಗಿತ್ತು. ಅದಕ್ಕೆ ವಿರೋಧವೂ ವ್ಯಕ್ತವಾಗಿತ್ತು. ಆದರೆ ಈಗ ಮತ್ತೆ ಹೆಸರು ಬದಲಾವಣೆ ಮುಂದುವರೆದಿದೆ.

ಮೊಘಲ್ ಚಕ್ರವರ್ತಿಗಳ ಮೇಲೆ ಮತ್ತೆ ಯೋಗಿ ಆದಿತ್ಯನಾಥ್ ವಾಗ್ದಾಳಿಮೊಘಲ್ ಚಕ್ರವರ್ತಿಗಳ ಮೇಲೆ ಮತ್ತೆ ಯೋಗಿ ಆದಿತ್ಯನಾಥ್ ವಾಗ್ದಾಳಿ

ಲಕ್ನೋದ ಮುಘಲ್ ಸರಾಯ್ ರೈಲ್ವೆ ನಿಲ್ದಾಣವನ್ನು ದೀನ್‌ದಯಾಳ್ ಉಪಾಧ್ಯಯ್ ರೈಲ್ವೆ ನಿಲ್ದಾಣ ಎಂದು ಮರುನಾಮಕಾರಣ ಮಾಡುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರದ ಪ್ರಸ್ತಾವನೆಗೆ ಈಗಾಗಲೇ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ.

Lucknow railway station name changed by Yogi government

ರಾಜ್ಯಪಾಲರ ಒಪ್ಪಿಗೆ ದೊರೆತ ಬೆನ್ನಲ್ಲೆ ರೈಲ್ವೆ ನಿಲ್ದಾಣಕ್ಕೆ ಕೇಸರಿ ಬಣ್ಣ ಬಳಿಯಲಾಗಿದ್ದು, ಕೆಲವೇ ದಿನಗಳಲ್ಲಿ ಮರು ನಾಮಕರಣ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ಪ್ರಮುಖರು ಭಾಗವಹಿಸಲಿದ್ದಾರೆ.

ಅಲಹಾಬಾದ್ ಅಲ್ರೀ, ಅದು ಪ್ರಯಾಗರಾಜ್!ಅಲಹಾಬಾದ್ ಅಲ್ರೀ, ಅದು ಪ್ರಯಾಗರಾಜ್!

ಬಿಜೆಪಿಯ ಮಾತೃ ಪಕ್ಷವಾದ ಭಾರತೀಯ ಜನಸಂಘದ ಸಂಸ್ಥಾಪಕ ಆಗಿರುವ ದೀನ ದಯಾಳ್ ಉಪಾಧ್ಯಾಯ ಅವರು ಇದೇ ರೈಲ್ವೆ ನಿಲ್ದಾಣದ ಬಳಿಯೇ ಶವವಾಗಿ ಪತ್ತೆಯಾಗಿದ್ದರು. ಹಾಗಾಗಿ ಈ ನಿಲ್ದಾಣಕ್ಕೆ ಅವರ ಹೆಸರು ಇಡಲಾಗಿದೆ. ಅವರೊಬ್ಬ ಕಠಿ ಆರ್‌ಎಸ್‌ಎಸ್‌ ಚಿಂತಕರಾಗಿದ್ದರು ಹಾಗಾಗಿ ವಿರೋಧ ಪಕ್ಷಗಳು ಈ ನಿರ್ಧಾರಕ್ಕೆ ವಿರೋಧವನ್ನೂ ವ್ಯಕ್ತಪಡಿಸಿವೆ.

English summary
Lucknow's Mughalsarai railway station name changed to Deen Dayal Upadyay railway station. Uttar Pradesh governer signed the proposal of name changing sent by Yogi government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X