ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ಶಶಿ ತರೂರ್ ಟ್ವೀಟ್: ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡಿತೇ ಕಾಂಗ್ರೆಸ್!?

|
Google Oneindia Kannada News

ನವದೆಹಲಿ, ಮೇ 13: ಆರನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಮುಗಿದ ಕೂಡಲೇ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಮಾಡಿರುವ ಟ್ವೀಟ್, ಹಲವು ಪ್ರಶ್ನೆಯನ್ನು ಹುಟ್ಟುಹಾಕಿದೆ.

ಶಶಿ ತರೂರ್ ಅವರ ಟ್ವೀಟ್, ಕಾಂಗ್ರೆಸ್ ಚುನಾವಣೆಯಲ್ಲಿ ಉತ್ತಮ ಸಾಧನೆಯನ್ನು ಮಾಡುವ ಸಾಧ್ಯತೆ ಕಮ್ಮಿಯಿದೆಯಾ ಎನ್ನುವ ಅನುಮಾನ ಅವರಿಗೆ ಕಾಡುತ್ತಿದೆಯಾ ಎನ್ನುವಂತಿದೆ. ತರೂರ್ ಟ್ವೀಟಿಗೆ ಬಂದಿರುವ ಕಾಮೆಂಟುಗಳು ಕೂಡಾ ಅದೇ ರೀತಿಯಿದೆ.

'ತಮಿಳುನಾಡು ಅಥವಾ ಕೇರಳದಲ್ಲಿ ಸ್ಪರ್ಧಿಸುವ ಧೈರ್ಯ ಮೋದಿಗೆ ಇದೆಯಾ?' 'ತಮಿಳುನಾಡು ಅಥವಾ ಕೇರಳದಲ್ಲಿ ಸ್ಪರ್ಧಿಸುವ ಧೈರ್ಯ ಮೋದಿಗೆ ಇದೆಯಾ?'

'ಹಿಂದೊಮ್ಮೆ ವಿಶ್ವಕಪ್ ಕ್ರಿಕೆಟಿನ ರಿಸಲ್ಟ್ ಬಗ್ಗೆ ವಾದಿಸಿದ್ದೆವು, ಭಾರತಕ್ಕೆ ಸ್ವದೇಶದಲ್ಲಿ ಅಲ್ಲದಿದ್ದರೂ ಇಂಗ್ಲೆಂಡಿನಲ್ಲಿ ಅಚ್ಚೇದಿನ್ ಬರಲಿ ಎಂದು ಆಶಿಸೋಣ' ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಈ ಬಾರಿಯ ವಿಶ್ವಕಪ್ ಇಂಗ್ಲೆಂಡ್ ನಲ್ಲಿ ಆಡಲಾಗುತ್ತಿದೆ.

Lets hope “achhe din” come for India in England if not at home: Shashi Tharoor tweet

ಕೇರಳದ ರಾಜಧಾನಿ ತಿರುವನಂತಪುರಂನ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ತರೂರ್ ಅವರ ಟ್ವೀಟ್, ಕಾಂಗ್ರೆಸ್ ಆಶಾದಾಯಕ ಫಲಿತಾಂಶ ಬರುವ ನಂಬಿಕೆಯನ್ನು ಕಳೆದುಕೊಂಡಿದೆಯಾ ಎಂದು ಪ್ರಶ್ನಿಸುವಂತಿದೆ.

'ಹೃದಯದಲ್ಲಿನ ಮಾತು ಬಾಯಿಯಿಂದ ಕೊನೆಗೂ ಹೊರಬಿತ್ತು, ತರೂರ್ ಅವರ ಟ್ವೀಟ್, ಎಲ್ಲಕ್ಕಿಂತ ದೊಡ್ಡ ಎಕ್ಸಿಟ್ ಪೋಲ್', 'ಕಾಂಗ್ರೆಸ್ ಸೋಲು ಒಪ್ಪಿಕೊಳ್ಳುತ್ತಿರುವ ಮೊದಲ ಸೂಚನೆಯಿದು' ಈ ರೀತಿ ಕೆಣಕುವ ಉತ್ತರಗಳು ತರೂರ್ ಅವರಿಗೆ ಟ್ವೀಟಿಗೆ ಬರುತ್ತಿದೆ.

ಶಶಿ ತರೂರ್ ಅವರ ವಿರುದ್ದ ಬಿಜೆಪಿಯಿಂದ ಕೆ ರಾಜಶೇಖರನ್, ಸಿಪಿಐನಿಂದ ಸಿ ದಿವಾಕರನ್ ಸ್ಪರ್ಧಿಸಿದ್ದಾರೆ. ಮೇ 23ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.

English summary
'Lets hope “achhe din” come for India in England if not at home' Congress leader and parties Thirvananthapuram candidate Shashi Tharoor tweet. Is this Early signals of Congress accepting defeat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X