ಈಶಾನ್ಯ ರಾಜ್ಯಗಳ ಮೇಲೆ ಲಷ್ಕರ್ ಕಣ್ಣು: ಅಪಾಯಕಾರಿ ಯೋಜನೆ ಬಯಲು
ನವದೆಹಲಿ, ಜುಲೈ 25: ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಕದಡುವ ಅಪಾಯಕಾರಿ ಯೋಜನೆಯೊಂದಕ್ಕೆ ಲಷ್ಕರ್ ಇ ತೊಯ್ಬಾ ಸಿದ್ಧತೆ ನಡೆಸುತ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಭಾರತೀಯ ಗುಪ್ತಚರ ದಳ ನೀಡಿದೆ.
ಅಸ್ಸಾಮಿನಲ್ಲಿ ಒಬ್ಬ ಭಯೋತ್ಪಾದಕನನ್ನು ಬಲಿಹಾಕಿದ ಭಾರತೀಯ ಸೇನೆ
ಭಾರತೀಯ ಗುಪ್ತಚರ ಇಲಾಖೆಗೆ ಸಿಕ್ಕ ವಿಡಿಯೋ ಒಂದರಲ್ಲಿ, ಸಿಕ್ಕಿಂ ಮತ್ತು ಡಾರ್ಜಿಲಿಂಗ್ ನಲ್ಲಿ ಶಾಂತಿ ಕದಡುವ ಕೆಲಸವನ್ನು ಲಷ್ಕರ್ ಇ ತೊಯ್ಬಾ ನಾಯಕ ಅಮಿರ್ ಹಜ್ಮಾ ತನ್ನ ಸಹಚರರಿಗೆ ನೀಡಿದ್ದು ದಾಖಲಾಗಿದೆ.
ಈ ವಿಡಿಯೋವನ್ನು ಜುಲೈ 19 ರಂದು ಲಾಹೋರ್ ನಲ್ಲಿ ಚಿತ್ರೀಕರಿಸಲಾಗಿದೆ. ಈ ವಿಡಿಯೋದಲ್ಲಿ ದೋಕ್ಲಾಂ ಕುರಿತೂ ಹಜ್ಮಾ ಮಾತನಾಡಿದ್ದಾನೆ. ಅಷ್ಟೇ ಅಲ್ಲ, ತಾವು ಸಿಕ್ಕಿಂ, ಭೂತಾನ್ ಮತ್ತು ದಾರ್ಜಿಲಿಂಗ್ ನಲ್ಲಿ ದಾಳಿ ನಡೆಸುವುದಾಗಿ ಹೇಳಿಕೊಂಡಿದ್ದಾನೆ.
ಬಾಂಗ್ಲಾದೇಶಕ್ಕಾಗಿ ನಾವು ಈಶಾನ್ಯದಲ್ಲಿರುವ ಏಳು ರಾಜ್ಯಗಳನ್ನು ವಶಪಡಿಸಿಕೊಳ್ಳುತ್ತೇವೆ ಎಂದೂ ಹೇಳಿದ್ದಾನೆ. 2012, 26/11 ಬಾಂಬೆ ಸ್ಫೋಟದಲ್ಲೂ ಹಜ್ಮಾ ಹೆಸರು ಕೇಳಿಂದಿತ್ತು. ಸದ್ಯಕ್ಕೆ ಲಷ್ಕರ್ ನ ಕಮಾಂಡರ್ ಆಗಿ ಬಡ್ತಿ ಪಡೆದಿರುವ ಹಜ್ಮಾ ಈಶಾನ್ಯ ರಾಜ್ಯಗಳ ಮೇಲೆ ಕಣ್ಣಿಟ್ಟಿರುವುದು ಭಾರತ ಎಚ್ಚರಿಕೆಯಿಂದಿರಬೇಕೆಂಬ ಸೂಚನೆ ನೀಡಿದೆ.