ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅನಾರೋಗ್ಯದ ಹಿನ್ನೆಲೆ: ಲಾಲೂಗೆ ಆರು ವಾರಗಳ ತಾತ್ಕಾಲಿಕ ಜಾಮೀನು
ರಾಂಚಿ, ಮೇ 11: ವೈದ್ಯಕೀಯ ಕಾರಣಗಳಿಗಾಗಿ ಬಹುಕೋಟಿ ಮೇವು ಹಗರಣದ ಆರೋಪಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ತಾತ್ಕಾಲಿಕ ಜಾಮೀನು ನೀಡಿದೆ.
ಪುತ್ರ ತೇಜ್ ಪ್ರತಾಪ್ ಯಾದವ್ ಅವರ ಮದುವೆ(ಮೇ 12 ರಂದು)ಯ ಸಲುವಾಗಿ ಈಗಾಗಲೇ 3 ದಿನಗಳ ಪೆರೋಲ್ ನಲ್ಲಿ ಜೈಲಿನಿಂದ ಹೊರಗಿದ್ದ ಯಾದವ್ ಅವರಿಗೆ ಆರು ವಾರಗಳ ತಾತ್ಕಾಲಿಕ ಜಾಮೀನು ನೀಡಲಾಗಿದೆ.
ಏಮ್ಸ್ ಆಸ್ಪತ್ರೆಯಲ್ಲಿ ಲಾಲೂ ಪ್ರಸಾದ್-ರಾಹುಲ್ ಗಾಂಧಿ ಭೇಟಿ
ಬಹು ಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದ ನಾಲ್ಕು ಆರೋಪಗಳಲ್ಲಿ ದೋಷಿಯಾಗಿರುವ ಲಾಲು ಪ್ರಸಾದ್ ಯಾದವ್ ಅವರು ನಾಲ್ಕು ಪ್ರಕರಣಗಳಿಂದ ಒಟ್ಟು 20.5 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಿದೆ.
ರಾಂಚಿಯ ಜೈಲಿನಲ್ಲಿದ್ದ ಲಾಲೂ ಪ್ರಸಾದ್ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ವೈದ್ಯಕೀಯ ಕಾರಣದಿಂದಲೇ ಅವರಿಗೆ ತಾತ್ಕಾಲಿಕ ಜಾಮೀನು ಮಂಜೂರು ಮಾಡಲಾಗಿದೆ.
Comments
English summary
The Jharkhand High Court has granted six-week provisional bail to Rashtriya Janata Dal Supremo Lalu Prasad on medical grounds. Earlier in the week, Lalu Prasad was granted a three-day parole to attend the wedding of his elder son Tej Pratap Yadav on May 12.
Story first published: Friday, May 11, 2018, 15:47 [IST]