ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲೂ ಮಗನಿಗೆ ಆರು ತಿಂಗಳಿನಿಂದ 'ಭೂತ' ಕಾಟ

By Mahesh
|
Google Oneindia Kannada News

ಪಾಟ್ನಾ, ಫೆಬ್ರವರಿ 22: ಆರ್​ಜಿಡಿ ಮುಖಂಡ, ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್​ ಯಾದವ್ ಅವರು ಮೇವು ಹಗರಣದಲ್ಲಿ ಅಪರಾಧಿ ಎನಿಸಿ ಜೈಲು ಪಾಲಾಗಿದ್ದಾರೆ.

ಆದರೆ, ಅವರ ಹಿರಿಯ ಮಗ ತೇಜ್​ ಪ್ರತಾಪ್​ ಯಾದವ್​ ಅವರು ಇನ್ನೂ ಸಕ್ರಿಯ ರಾಜಕೀಯದಲ್ಲಿದ್ದು, ಸಚಿವರಾಗಿದ್ದಾಗ ಸಿಕ್ಕ ಬಂಗಲೆಯಲ್ಲಿ ಭೂತಕಾಟವಿದೆ ಎಂದು ಆರೋಪಿಸಿದ್ದಾರೆ.

Lalu Prasad Son Pratap Yadav vacates Ghost Bungalow

ಇದೇ 'ಭೂತ' ದ ಕಾಟಕ್ಕೆ ಹೆದರಿ ಸರ್ಕಾರಿ ಬಂಗಲೆಯನ್ನೇ ತೊರೆದಿದ್ದಾಗಿ ಹೇಳಿದ್ದಾರೆ. ಆರ್​ಜಿಡಿ, ಜೆಡಿ(ಯು) ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದ ಕಾಲದಲ್ಲಿ ಲಾಲೂ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಆರೋಗ್ಯ ಸಚಿವರಾಗಿದ್ದರು. ತೇಜ್​ ಪ್ರತಾಪ್​ ಯಾದವ್​ ಅವರಿಗೆ ಪಾಟ್ನಾದ ದೇಶರತ್ನಾ ಮಾರ್ಗ್​ ನಲ್ಲಿ ಸರ್ಕಾರಿ ಬಂಗಲೆ ನೀಡಲಾಗಿತ್ತು.

Lalu Prasad Son Pratap Yadav vacates Ghost Bungalow

ಆದರೆ, ರಾಜಕೀಯ ಬೆಳವಣಿಗೆಯಾಗಿ ಬಿಜೆಪಿ ಮತ್ತು ಜೆಡಿ(ಯು) ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಇದಾದ ಕೂಡಲೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ತೇಜ್​ ಪ್ರತಾಪ್​ಗೆ ನಿತೀಶ್ ಕುಮಾರ್ ಸರ್ಕಾರ ಆದೇಶಿಸಿತ್ತು.

ಸರ್ಕಾರಿ ಆದೇಶದ ವಿರುದ್ಧ ಪಾಟ್ನ ಹೈ ಕೋರ್ಟ್​ ಮೊರೆ ಹೋಗಿ ಆದೇಶದ ವಿರುದ್ಧ ತಡೆ ತರುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಬಾಡಿಗೆ ನೀಡುವಂತೆ ನಿತೀಶ್ ಕುಮಾರ್ ಸೂಚಿಸಿದ್ದರು.

ಆದರೆ ಆ ನಂತರ ಭೂತದ ಕಾಟದಿಂದಾಗಿ ಬಂಗಲೆಯನ್ನು ತೊರೆದೆ ಎಂದು ತೇಜ್​ ಪ್ರತಾಪ್​ ಯಾದವ್​ ಪ್ರತಿಕ್ರಿಯೆ ನೀಡಿದ್ದಾರೆ. ಜತೆಗೆ ಸರ್ಕಾರಿ ಬಂಗಲೆಯಲ್ಲಿ ದೆವ್ವದ ಕಾಟ ಸೃಷ್ಟಿಸಿದ್ದು ಸ್ವತಃ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಮತ್ತು ಸುಶೀಲ್​ ಮೋದಿ ಎಂದು ಆರೋಪಿಸಿದ್ದಾರೆ.

ಸರ್ಕಾರಿ ಬಂಗಲೆಯಿಂದ ಲಾಲು ಪುತ್ರನ ಎತ್ತಂಗಡಿ ಸರ್ಕಾರಿ ಬಂಗಲೆಯಿಂದ ಲಾಲು ಪುತ್ರನ ಎತ್ತಂಗಡಿ

English summary
RJD chief Lalu Prasad’s elder son Tej Pratap Yadav said he vacated his official bungalow complaining about Ghost which is released by CM Nitish Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X