'ಬೇಡಿಯವರೇ, ಇದೆಲ್ಲ ಬೇಕಿತ್ತಾ?' ಕಿರಣ್ ವಿರುದ್ಧ ಟ್ರೋಲಾಸ್ತ್ರ!
ಪುದುಚೇರಿ, ಜುಲೈ 16: ಈ ಸೋಶಿಯಲ್ ಮೀಡಿಯಾ ಕಾಲದಲ್ಲಿ ಯಾರೂ ಟ್ರೋಲಾತೀತರಲ್ಲ! ಟ್ರೋಲಿಗೆ ಸಾಮಾನ್ಯ ಮನುಷ್ಯನೂ ಒಂದೇ, ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯೂ ಒಂದೇ!
ಹೌದು, ಪುದುಚೇರಿಯ ರಾಜ್ಯಪಾಲರಾಗಿರುವ ಬಿಜೆಪಿ ನಾಯಕಿ ಕಿರಣ್ ಬೇಡಿ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ! ಜು.15 ರಂದು ನಡೆದ ಫಿಫಾ 2018 ರ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಕ್ರೊವೇಷಿಯಾ ವಿರುದ್ಧ 4-2 ಗೋಲುಗಳ ಭರ್ಜರಿ ಜಯ ದಾಖಲಿಸಿತು. ವಿಶ್ವ ಚಾಂಪಿಯನ್ ಆದ ಫ್ರಾನ್ಸ್ ಗೆ ಅಭಿನಂದನೆ ಸಲ್ಲಿಸುವ ಅವಸರದಲ್ಲಿ ಕಿರಣ್ ಬೇಡಿ ಒಂದು ಎಡವಟ್ಟು ಮಾಡಿದರು!
ಕ್ರೊವೇಷಿಯಾಕ್ಕೆ ಸೋಲು: ಫೀಫಾ ವಿಶ್ವಕಪ್ 2018ಕ್ಕೆ ಫ್ರಾನ್ಸ್ ಚಾಂಪಿಯನ್!
ಅಷ್ಟಕ್ಕೂ ಏನಿದು ವಿವಾದ? ಕಿರಣ್ ಬೇಡಿ ಅವರ ಟ್ವೀಟ್ ನಲ್ಲಿ ವಿವಾದವಾಗುವಂಥದ್ದು ಏನಿತ್ತು? ಮುಂದೆ ಓದಿ...
|
ಕಿರಣ್ ಬೇಡಿ ಟ್ವೀಟ್
'ನಾವು ಪುದುಚೇರಿಗಳು ವಿಶ್ವ ಕಪ್ ಗೆದ್ದಿದ್ದೇವೆ. ಅಭಿನಂದನೆಗಳು ಗೆಳೆಯರೇ' ಎಂದು ಬೇಡಿ ಟ್ವೀಟ್ ಮಾಡಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಪುದುಚೇರಿಯಲ್ಲಿ ಫ್ರೆಂಚರು ವಸಾಹತು ಸ್ಥಾಪಿಸಿದ್ದರು ಎಂಬ ಕಾರಣಕ್ಕೆ ಬೇಡಿ ಈ ರೀತಿ ಟ್ವೀಟ್ ಮಾಡಿದ್ದರು. ಆದರೆ ಅವರ ಈ ಟ್ವೀಟ್ ಗೆ ಟ್ವಿಟ್ಟರ್ ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
|
ಈ ಮಾತನ್ನು ಕಾಂಗ್ರೆಸ್ಸಿಗರು ಹೇಳಿದ್ದರೆ?
ಕಲ್ಪಿಸಿಕೊಳ್ಳಿ. ಕಿರಣ್ ಬೇಡಿ ಅವರು ಹೇಳಿದ ಮಾತನ್ನೇ ಕಾಂಗ್ರೆಸ್ಸಿಗರ್ಯಾರಾದರೂ ಹೇಳಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಬಿಜೆಪಿಯವರು ಆ ವ್ಯಕ್ತಿಯನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು ಎಂದು ವಿಜಿ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಎಲ್ಲವನ್ನೂ ಅವರು ಮರೆತಿರಬೇಕು!
ಸಂಭ್ರಮಿಸುವುದು ಒಂದು ವಿಷಯ. ಆದರೆ ನಮ್ಮ ದೇಶದಲ್ಲಿ ವಸಾಹತು ಸ್ಥಾಪಿಸಿದವರ ಬಗ್ಗೆ ಹೆಮ್ಮೆ ಪಡುವುದು ಎಂದರೆ ಅದನ್ನು ಏನೆಂದು ಕರೆಯಬೇಕು? ಬಹುಶಃ ವಸಾಹತುಶಾಹಿಗಳು ನಮಗೇನು ಮಾಡಿದರು ಎಂಬುದನ್ನು ಮೇಡಂ ಅವರು ಮರೆತಿರಬೇಕು! ಎಂದಿದ್ದಾರೆ ರಾಹುಲ್ ಕಪೂರ್
|
ಜಸ್ಟ್ ಆಸ್ಕಿಂಗ್!
ಕಿರಣ್ ಬೇಡಿ ಅವರ ಈ ಟ್ವೀಟ್ ಅನ್ನು ರಾಷ್ಟ್ರದ್ರೋಹ ಎಂದು ಕರೆಯಬಹುದೇ ಎಂದು ಪ್ರಶ್ನಿಸಿದ್ದಾರೆ ವೆಂಕಟೇಶ್ ಬಾಳಿಗಾ.
|
ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಹೊರಟಿದ್ದೆವು!
"ನಾವು ಫ್ರೆಂಚ್ ವಸಾಹತುಶಾಹಿಗಳು ಎಂದು ವೀವು ಖುಷಿಪಡುತ್ತಿದ್ದೀರಿ. ನಾವು ಮೂರ್ಖಜನರು ನಿಮ್ಮನ್ನು ದೆಹಲಿಯ ಮುಖ್ಯಮಂತ್ರಿಯನ್ನಾಗಿ ಮಾಡುವ ಕನಸು ಕಂಡಿದ್ದೆವು. ಏನೇ ಆಗಲಿ ನೀವೀಗ ಭಾರತೀಯ ನೆಲದಲ್ಲಿಯೇ ರಾಜ್ಯಪಾಲರಾಗಿದ್ದೀರಿ" ಎಂದಿದ್ದಾರೆ ಅಭಿಷೇಕ್ ರಾಜಾ.
|
ನಾವು ಒಂದೇ ಕುಟುಂಬದಂತೆ!
ಯಾರ್ಯಾರು ಇಲ್ಲಿ ಟ್ರೋಲ್ ಮಾಡುತ್ತಿದ್ದಾರೋ, ಅವರಿಗೆಲ್ಲ ಒಂದು ಮಾತು. ಪಾಂಡಿಚೇರಿಯಲ್ಲಿ ಸಾಕಷ್ಟು ಜನ ಫ್ರೆಂಚರು ವಾಸವಿದ್ದಾರೆ. ನಾವೆಲ್ಲ ಒಂದೇ ಕುಟುಂಬದಂತಿದ್ದೇವೆ. ಆದ್ದರಿಂದ ನಾವೆಲ್ಲ ಫ್ರಾನ್ಸ್ ನ ಜಯವನ್ನು ಸಂಭ್ರಮಿಸಿದ್ದೇವೆ. ನಾವೆಲ್ಲ ಹೆಮ್ಮೆಯ ಭಾರತೀಯರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ಫ್ರೆಂಚ್ ಜನರು ನಮಗೆ ಕುಟುಂಬವಿದ್ದಂತೆ. ಹೀಗೆ ಎಲ್ಲರನ್ನೂ ಪ್ರೀತಿಸುವುದನ್ನು ನಾವು ಕಲಿಯಬೇಕು ಎಂದು 'ಯುನೈಟೆಡ್ ವಿ' ಎಂಬ ಟ್ವೀಟ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.