ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೋದಿ ನಪುಂಸಕ: ಸಲ್ಮಾನ್ ಹೇಳಿಕೆಗೆ ಖಂಡನೆ'

By Mahesh
|
Google Oneindia Kannada News

ಫಾರುಕಾಬಾದ್,ಉ.ಪ್ರ. ಫೆ.26: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು 'ಬಾವಿಯೊಳಗಿನ ಕಪ್ಪೆ' ಎಂದು ಕರೆದಿದ್ದ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಈಗ ಮತ್ತೊಮ್ಮೆ ಬಾಯಿ ಚಪಲ ತೀರಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಒಬ್ಬ ನಪುಂಸಕ ವ್ಯಕ್ತಿ ಎಂದಿದ್ದಾರೆ. ಆದರೆ, ಸಲ್ಮಾನ್ ಹೇಳಿಕೆಗೆ ಬಿಜೆಪಿಯಿಂದ ತಣ್ಣನೆಯ ಪ್ರತಿಕ್ರಿಯೆ ಬಂದಿದೆ. ಸಲ್ಮಾನ್ ಅವರ ಬಗ್ಗೆ ಮರುಕ ಪಡುತ್ತೇವೆ ಎಂದಷ್ಟೇ ಪ್ರತಿ ಹೇಳಿಕೆ ಸಿಕ್ಕಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಮಾತ್ರ ಸಲ್ಮಾನ್ ಹೇಳಿಕೆಗೆ ಪರ ವಿರೋಧ ಪ್ರತಿಕ್ರಿಯೆಗಳ ಮಹಾಪೂರ ಹರಿದು ಬಂದಿದೆ.

ಫಾರುಕಾಬಾದ್ ಚುನಾವಣಾ ಭಾಷಣ ಮಾಡುವ ವೇಳೆ 2002ರ ಗುಜರಾತ್ ಗೋಧ್ರಾ ಹತ್ಯಾಕಾಂಡ ಬಗ್ಗೆ ಮಾತನಾಡಿದ ಸಲ್ಮಾನ್ ಖುರ್ಷಿದ್, ಗಲಭೆಗಳನ್ನು ನಿಯಂತ್ರಿಸುವಲ್ಲಿ ನರೇಂದ್ರ ಮೋದಿಯ ವೈಫಲ್ಯವಾಗಿದ್ದರು. ಗಲಭೆ ನಿಯಂತ್ರಿಸಲಾಗದ ಮೋದಿ ಒಬ್ಬ ಕೈಲಾಗದ ಅಥವಾ ನಪುಂಸಕ ವ್ಯಕ್ತಿ ಎಂದು ಮೂದಲಿಸಿದರು.

"ಕೆಲ ಜನರು ಬಂದು, ಪ್ರಹಾರ ಮಾಡಿದರು ಮತ್ತು ಹೊರಟುಹೋದರು. ರಕ್ಷಣೆ ಮಾಡಲು ನಿಮಗೆ ಸಾಧ್ಯವಾಗಲಿಲ್ಲ. ನೀವೊಬ್ಬ ಬಲಶಾಲಿಯೇ?" ಎಂದು ಮೋದಿಯನ್ನ ಖುರ್ಷಿದ್ ಪ್ರಶ್ನಿಸಿದ್ದಾರೆ. "ನೀವು ಜನರನ್ನ ಕೊಂದಿದ್ದೀರೆಂದು ನಾವು ಆರೋಪಿಸುತ್ತಿಲ್ಲ. ನೀವು ನಪುಂಸಕರಿದ್ದೀರಿ ಎಂಬುದು ನಮ್ಮ ಆರೋಪ. ನಿಮಗೆ ಹಂತಕರನ್ನ ತಡೆಯಲು ಸಾಧ್ಯವಾಗಲಿಲ್ಲ" ಎಂದು ಸಲ್ಮಾನ್ ಟೀಕಿಸಿದ್ದಾರೆ.

ಬಿಜೆಪಿ ಖಂಡನೆ ಸಲ್ಮಾನ್ ಖುರ್ಷಿದ್ ಅವರ ಈ ಹೇಳಿಕೆಯನ್ನ ತೀರಾ ಅಸಭ್ಯ. ಲೋಕಸಭೆ ಚುನಾವಣೆಯಲ್ಲಿ ಸೋಲು ಮೈಮೇಲೆ ಎರಗುವ ಸಂಭವ ಹೆಚ್ಚಾಗಿರುವುದರಿಂದ ಹತಾಶೆಯಲ್ಲಿ ಕಾಂಗ್ರೆಸ್ ಮುಖಂಡರು ಇಂಥ ನೀಚ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಮುಖಂಡರು ಪ್ರತಿಕ್ರಿಯಿಸಿದ್ದಾರೆ. [ಎಲೆಕ್ಟ್ರಾನಿಕ್ ಮಾಧ್ಯಮ ಹೊಸಕಿಹಾಕುತ್ತೇನೆ]

ಸಲ್ಮಾನ್ ಖುರ್ಷಿದ್ ಅವರ ಈ ಹೇಳಿಕೆಗೆ ಖಂಡನೆ

ಸಲ್ಮಾನ್ ಖುರ್ಷಿದ್ ಅವರ ಈ ಹೇಳಿಕೆಗೆ ಖಂಡನೆ

ಸಲ್ಮಾನ್ ಖುರ್ಷಿದ್ ಅವರ ಈ ಹೇಳಿಕೆಯನ್ನ ತೀರಾ ಅಸಭ್ಯ ಎಂದು ಬಿಜೆಪಿ ಖಂಡಿಸಿದೆ. ಲೋಕಸಭೆ ಚುನಾವಣೆಯಲ್ಲಿ ಸೋಲು ಮೈಮೇಲೆ ಎರಗುವ ಸಂಭವ ಹೆಚ್ಚಾಗಿರುವುದರಿಂದ ಹತಾಶೆಯಲ್ಲಿ ಕಾಂಗ್ರೆಸ್ ಮುಖಂಡರು ಇಂಥ ನೀಚ ಹೇಳಿಕೆ ನೀಡಿದ್ದಾನ್ನನ್ನ ತಾನು ಸುಶಿಕ್ಷಿತ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ತಲೆಕೆಟ್ಟವನಂತೆ ಇಂಥ ಹೇಳಿಕೆ ನೀಡಿರುವುದು ದುರದೃಷ್ಟಕರ ಎಂದು ಭಾರತೀಯ ಜನತಾ ಪಕ್ಷದ ನಾಯಕರು ಖೇದ ವ್ಯಕ್ತಪಡಿಸಿದ್ದಾರೆ.

ನಪುಂಸಕ ಮಾನದಂಡವಾದರೆ ಕೇಜ್ರಿವಾಲ್ ಕಥೆ?

ನಪುಂಸಕ ಮಾನದಂಡವಾದರೆ ಕೇಜ್ರಿವಾಲ್ ಕಥೆ?

ನಪುಂಸಕ ಮಾನದಂಡವಾದರೆ ಕೇಜ್ರಿವಾಲ್ ಪ್ರಧಾನಿ ಮಂತ್ರಿ ಪಟ್ಟಕ್ಕೆ ಮೊದಲ ಅಭ್ಯರ್ಥಿ

ಕಾಂಗ್ರೆಸ್ ಕಚೇರಿಗಳನ್ನು ಬಂದ್ ಮಾಡಿ ಆಸ್ಪತ್ರೆ

ಕಾಂಗ್ರೆಸ್ ಕಚೇರಿಗಳನ್ನು ಬಂದ್ ಮಾಡಿ ಆಸ್ಪತ್ರೆ ತೆರೆಯುವುದು ಒಳ್ಳೆಯದು ಸಲ್ಮಾನ್ ರಂಥ ಡಾಕ್ಟರ್ ಗಳು ಸಿಗುತ್ತಾರೆ

ಸಲ್ಮಾನ್ ಅವರು ಏನು ತಪ್ಪು ಹೇಳಿಲ್ಲ,

ಸಲ್ಮಾನ್ ಅವರ ಹೇಳಿಕೆಯನ್ನು ತಿರುಚಲಾಗಿದೆ. ಇದು ಮಾಧ್ಯಮಗಳ ಕೆಲಸ.

ಸಲ್ಮಾನ್ ಯಾವಾಗ ತಿವಾರಿ ಕ್ಲಾಸ್ ಗೆ ಸೇರಿದ್ರು

ಸಲ್ಮಾನ್ ಯಾವಾಗ ಎನ್ ಡಿ ತಿವಾರಿ ಪುರುಷತ್ವ ಪರೀಕ್ಷೆ ಕ್ಲಾಸ್ ಗೆ ಸೇರಿದ್ರು

ಸಲ್ಮಾನ್ ಖುರ್ಷಿದ್ ಅವರಿಗೆ ಪಾಪ ಕನ್ ಫ್ಯೂಸ್

ಸಲ್ಮಾನ್ ಖುರ್ಷಿದ್ ಅವರಿಗೆ ಪಾಪ ಕನ್ ಫ್ಯೂಸ್ ಆಗಿದೆ.

ಮಾನಸಿಕ ಅಸ್ವಸ್ಥರನ್ನು ಏನು ಮಾಡಬೇಕು

ಸಲ್ಮಾನ್ ಖುರ್ಷಿದ್ ಅವರಂಥ ಮಾನಸಿಕ ಅಸ್ವಸ್ಥರನ್ನು ಏನು ಮಾಡಬೇಕು

ಇಂಗ್ಲೀಷ್ ಗೊತ್ತಿದ್ದರೆ ಸಂಸ್ಕಾರ ಬರುತ್ತಾ?

ಸಲ್ಮಾನ್ ಖುರ್ಷಿದ್ ಅವರೇ ಇಂಗ್ಲೀಷ್ ಗೊತ್ತಿದ್ದರೆ ಸಂಸ್ಕಾರ ಬರುತ್ತಾ? ನಂಗ್ಯಾಕೋ ಡೌಟು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X