ಪಟಾಕಿ ಹೊಡೆಯಬೇಡಿ ಎಂಬ ಅಜ್ಜಿ ಮಾತು ಕೇಳಲಿಲ್ಲ
ತಿರುವನಂತಪುರಂ, ಏಪ್ರಿಲ್ 11 : ಜಾತ್ರೆಯಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಿ ಎಂದು ಹೋರಾಟ ಮಾಡುತ್ತಿದ್ದವರ ಮನೆ ಅಗ್ನಿ ದುರಂತದಲ್ಲಿ ಹಾನಿಗೊಳಗಾಗಿದೆ. ಇದು ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್ನ ದೇವಾಲಯದಲ್ಲಿ ನಡೆದ ಅಗ್ನಿ ದುರಂತದ ಕಥೆ. [ಸುದ್ದಿದನಿ : ಅಜ್ಜಿಯ ಮಾತು ಯಾರಿಗೂ ಕೇಳಲಿಲ್ಲ]
ಭಾನುವಾರ
ಮುಂಜಾನೆ
ಕೊಲ್ಲಂ
ಜಿಲ್ಲೆಯ
ಪರವೂರ್ನ
ದೇವಾಲಯದಲ್ಲಿ
ನಡೆದ
ಅಗ್ನಿ
ದುರಂತದಲ್ಲಿ
100ಕ್ಕೂ
ಅಧಿಕ
ಭಕ್ತರು
ಸಾವನ್ನಪ್ಪಿದ್ದು,
300ಕ್ಕೂ
ಅಧಿಕ
ಜನರು
ಗಾಯಗೊಂಡಿದ್ದಾರೆ.
ಈ
ದುರಂತಕ್ಕೆ
ಸಂಬಂಧಿಸಿದಂತೆ
5
ಜನರನ್ನು
ಬಂಧಿಸಲಾಗಿದೆ.
[ಕೇರಳ
ಪಟಾಕಿ
ದುರಂತ,
5
ಜನರ
ಬಂಧನ]
ಪಂಕಜಾಕ್ಷಿ ಹೋರಾಟ : ದೇವಾಲಯದ ಜಾತ್ರೆಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕು ಎಂದು 80 ವರ್ಷ ವಯಸ್ಸಿನ ಪಂಕಜಾಕ್ಷಿ ಅವರು ಕಳೆದ 4 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಭಾನುವಾರ ನಡೆದ ದುರಂತದ ಸುದ್ದಿ ಕೇಳಿ ಅವರು ಬೆಚ್ಚಿಬಿದ್ದಿದ್ದಾರೆ. [ಕೇರಳ ಪಟಾಕಿ ಅವಘಡದ ಕರಾಳ ಚಿತ್ರಗಳು]
ಪಂಕಜಾಕ್ಷಿ ಅವರ ಮನೆ ದೇವಾಲಯದಿಂದ ಸುಮಾರು 50 ಮೀಟರ್ ದೂರದಲ್ಲಿದೆ. 4 ವರ್ಷದಿಂದ ಪಟಾಕಿ ಹೊಡೆದರೆ ಆಗಬಹುದಾದದ ದುರಂತದ ಬಗ್ಗೆ ಪಂಕಜಾಕ್ಷಿ ಅವರು ದೂರು ನೀಡುತ್ತಲೇ ಇದ್ದಾರೆ. ಆದರೆ, ಪಟಾಕಿ ಹೊಡೆಯುವುದು ನಿಂತಿಲ್ಲ. ಏ.10ರಂದು ನಡೆದ ದುರಂತದಲ್ಲಿ ಅವರ ಮನೆಗೂ ಹಾನಿ ಉಂಟಾಗಿದೆ. [ದೇವರ ನಾಡು ಕೇರಳದ ಮೇಲೆ ಮೂಕಾಂಬಿಕೆಯ ಮುನಿಸು!]
ಪಂಕಜಾಕ್ಷಿ
ಮತ್ತು
ಆಕೆಯ
ಮನೆಯವರು
ಪ್ರತಿಬಾರಿ
ಪಟಾಕಿ
ನಿಷೇಧದ
ಬಗ್ಗೆ
ಮಾತನಾಡಿದಾಗ
ದೇವಾಲಯದ
ಆಡಳಿತ
ಮಂಡಳಿ
ಸಂಪ್ರದಾಯವನ್ನು
ವಿರೋಧಿಸುತ್ತಾರೆ
ಎಂದು
ಹೇಳಿ,
ಅದನ್ನು
ಮುಚ್ಚಿಹಾಕುತ್ತಿತ್ತು.
ಇಂತಹ
ದುರಂತ
ನಡೆಯಬಹುದು
ಎಂದು
ಅವರು
ಎಚ್ಚರಿಕೆ
ನೀಡುತ್ತಿದ್ದರು
ಎಂಬುದನ್ನು
ಯಾರೂ
ಅರ್ಥಮಾಡಿಕೊಳ್ಳಲಿಲ್ಲ.
[ಪಟಾಕಿ
ಸಿಡಿದು
ಭಾರೀ
ಅಗ್ನಿ
ದುರಂತ,
105
ಸಾವು]
'ಉತ್ಸವದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಿ ಎಂದು ಕೊಲ್ಲಂ ಜಿಲ್ಲಾಡಳಿತಕ್ಕೆ ಪಂಕಜಾಕ್ಷಿ ಪ್ರತಿ ವರ್ಷವೂ ಮನವಿ ಮಾಡುತ್ತಿದ್ದರು. ಪ್ರತಿ ಬಾರಿ ಜಾತ್ರೆ ನಡೆದಾಗ ಅವರ ಮನೆಗೆ ಹಾನಿಯಾಗುತ್ತಿತ್ತು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ' ಎಂದು ಪಂಕಜಾಕ್ಷಿ ಅಳಿಯ ಪ್ರಕಾಶ್ ಹೇಳಿದ್ದಾರೆ.
ಅಂದಹಾಗೆ ಭಾನುವಾರ ನಡೆದ ದುರಂತಕ್ಕೆ ಸಂಬಂಧಿಸಿದಂತೆ 30 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಟಾಕಿ ಹೊಡೆಯಲು ಬಂದಿದ್ದ 5 ಜನರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. [ಕೇರಳ ದುರಂತದ ಚಿತ್ರಗಳು]