ಕೊಲ್ಲಂ ದೇವಾಲಯದ ಬಳಿ ಪಟಾಕಿ ತುಂಬಿದ 3 ಕಾರು ಪತ್ತೆ
ತಿರುವನಂತಪುರಂ, ಏಪ್ರಿಲ್ 11 : ಪಟಾಕಿಗಳು ತುಂಬಿದ್ದ ಮೂರು ಕಾರುಗಳನ್ನು ಕೇರಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲ್ಲಂ ಜಿಲ್ಲೆಯ ಪುತ್ತಿಂಗಲ್ ಮೂಕಾಂಬಿಕ ದೇವಸ್ಥಾನದ ಬಳಿ ಈ ಕಾರುಗಳು ಪತ್ತೆಯಾಗಿವೆ.
ಸೋಮವಾರ
ಮಧ್ಯಾಹ್ನ
ದೇವಾಲಯದ
ಸಮೀಪ
ಕಾರುಗಳಲ್ಲಿ
ಪಟಾಕಿ
ಪತ್ತೆಯಾಗಿದೆ.
ಮೂರು
ಕಾರುಗಳಲ್ಲಿ
ಪಟಾಕಿಗಳಿದ್ದು,
ಈ
ಕಾರುಗಳು
ಯಾರಿಗೆ
ಸೇರಿದ್ದು
ಎಂಬುದು
ಇನ್ನೂ
ಪತ್ತೆಯಾಗಿಲ್ಲ.
[ಪಟಾಕಿ
ಹೊಡೆಯಬೇಡಿ
ಎಂಬ
ಅಜ್ಜಿ
ಮಾತು
ಕೇಳಲಿಲ್ಲ]
ದೇವಾಲಯದ ಸುತ್ತ-ಮುತ್ತಲಿನ ಜನರು ಕಾರ್ಯಾಚರಣೆ ಮುಗಿಯುವ ತನಕ ದೂರದ ಸ್ಥಳಗಳಿಗೆ ತೆರಳಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಎಲ್ಲಾ ಪಟಾಕಿಗಳನ್ನು ನಿಷ್ಕ್ರೀಯಗೊಳಿಸಿ ಸ್ಥಳ ಸುರಕ್ಷಿತವಾಗಿದೆ ಎಂದು ಘೋಷಣೆ ಮಾಡುವ ತನಕ ಜನರು ಕಾರುಗಳ ಹತ್ತಿರ ಬರಬಾರದು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. [ಕೇರಳ ಪಟಾಕಿ ದುರಂತ, 5 ಜನರ ಬಂಧನ]
ಮತ್ತೊಂದು
ಕಡೆ
ಭಾನುವಾರ
ಮುಂಜಾನೆ
ಮೂಕಾಂಬಿಕ
ದೇವಸ್ಥಾನದ
ಜಾತ್ರೆಯಲ್ಲಿ
ನಡೆದ
ಅಗ್ನಿ
ದುರಂತಕ್ಕೆ
ಕಾರಣವಾದ
ಪಟಾಕಿಗಳಲ್ಲಿ
ನಿಷೇಧಿತ
ರಸಾಯನಿಕಗಳನ್ನು
ಬಳಕೆ
ಮಾಡಲಾಗಿತ್ತು
ಎಂದು
ತಿಳಿದುಬಂದಿದೆ.
ಈ
ಕುರಿತು
ಹೆಚ್ಚಿನ
ಮಾಹಿತಿ
ಪಡೆಯಲು
ಪೊಲೀಸರು,
ವಿಧಿ
ವಿಜ್ಞಾನ
ಪ್ರಯೋಗಾಲಯದ
ವರದಿಗಾಗಿ
ಕಾಯುತ್ತಿದ್ದಾರೆ.[ದೇವರ
ನಾಡು
ಕೇರಳದ
ಮೇಲೆ
ಮೂಕಾಂಬಿಕೆಯ
ಮುನಿಸು!]