ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೇರಳದಲ್ಲಿ ರೈಲ್ವೇ ಸೇತುವೆ ಕೆಳಗೆ ಸಜೀವ ಬಾಂಬ್ ಪತ್ತೆ
ತಿರುವನಂತಪುರಂ, ಜನವರಿ 5: ಕೇರಳ ಪೊಲೀಸರು ಪ್ರಮುಖ ಭಯೋತ್ಪಾದಕ ದುರಂತವೊಂದನ್ನು ತಪ್ಪಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಇಲ್ಲಿನ ಮಲಪ್ಪುರಂ ಜಿಲ್ಲೆಯ ರೈಲ್ವೇ ಸೇತುವೆ ಸಮೀಪ ಮಿಲಿಟರಿ ದರ್ಜೆಯ ಸ್ಪೋಟಕಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು ಪ್ರಮುಖ ದಾಳಿಯನ್ನು ತಪ್ಪಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
ಭಾರತಪುಝದಲ್ಲಿರುವ ಕುಟ್ಟಿಪುರಂ ರೈಲ್ವೇ ಸೇತುವೆ ಕೆಳಗೆ 5 ಕಂಟೈನರ್ ಗಳಲ್ಲಿ ಸ್ಪೋಟಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾಗಿ ಎಎನ್ಐ ವರದಿ ಮಾಡಿದೆ. ಇವುಗಳು ಮಿಲಿಟರಿ ದರ್ಜೆಯ ಸ್ಪೋಟಕಗಳು ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಈ ಸ್ಫೋಟಕಗಳನ್ನು ಸ್ಫೋಟಿಸಲೆಂದೇ ಉಗ್ರರು ಇಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಫೋಟಕಗಳನ್ನು ಪತ್ತೆ ಹಚ್ಚಿರುವುದರಿಂದ ಪ್ರಮುಖ ಭಯೋತ್ಪಾದಕ ದಾಳಿಯೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
Comments
English summary
Kerala: Police found 5 metal containers containing explosives, under Kuttippuram Railway bridge in Bharathappuzha.
Story first published: Friday, January 5, 2018, 18:52 [IST]