ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಒಂದು ತಿಂಗಳ ವೇತನ ದೇಣಿಗೆ ನೀಡಿ: ಮಲಯಾಳಿಗಳಿಗೆ ಕೇರಳ ಸಿಎಂ ಮನವಿ
ತಿರುವನಂತಪುರಂ, ಆಗಸ್ಟ್ 27: ಎಲ್ಲಾ ಮಲಯಾಳಿಗಳೂ ತಮ್ಮ ಒಂದು ತಿಂಗಳ ವೇತನವನ್ನು ಕೇರಳ ಪ್ರವಾಹ ಸಂತ್ರಸ್ಥ ನಿಧಿಗೆ ದೇಣಿಗೆ ನೀಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ.
ವಿಶ್ವದಾದ್ಯಂತ ಇರುವ ಮಲಯಾಳಿಗಳು ಈ ಸಂಕಷ್ಟದ ಸಮಯದಲ್ಲಿ ಒಗ್ಗಟ್ಟಾದರೆ ಖಂಡಿತ ನಾವು ಈ ದುರಂತದಿಂದ ಹೊರಬರಬಹುದು ಎಂದು ಪಿಣರಾಯಿ ವಿಜಯನ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಕೇರಳ ಪ್ರವಾಹ: ಹವಾಮಾನ ವೈಪರೀತ್ಯದ ಗಂಡಾಂತರದ ಮುನ್ಸೂಚನೆಯೇ?
"ತಮ್ಮ ಒಂದು ತಿಂಗಳ ವೇತನವನ್ನು ಒಂದೇ ಸಲಕ್ಕೆ ನೀಡುವುದು ಎಲ್ಲರಿಗೂ ಸಾಧ್ಯವಾಗದಿರಬಹುದು. ಆದ್ದರಿಂದ ಪ್ರತಿ ತಿಂಗಳೂ ಕಂತಿನಂತೆ ಎಲ್ಲರೂ ತಮ್ಮ ಸಂಬಳದ ಕೆಲ ಭಾಗವನ್ನು ನೀಡಿ, ಸಂತ್ರಸ್ಥ ಮಲಯಾಳಿಗಳಿಗೆ ಬೆಂಬಲವಾಗಿ ನಿಲ್ಲಿ" ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಕೇರಳದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಆರಂಭವಾದ ಪ್ರವಾಹಕ್ಕೆ ಇದುವರೆಗೂ 350 ಕ್ಕೂ ಹೆಚ್ಚು ಜನ ಮೃತರಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
Comments
English summary
Kerala Chief Minister Pinarayi Vijayan, on Monday, urged 'Malayalis' all over the world to contribute their one month salary to rebuild the flood-hit state.
Story first published: Monday, August 27, 2018, 12:54 [IST]