ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಾಲ ಬಿಚ್ಚಿದ ಉಗ್ರರು: 5 ಯೋಧರು ಹುತಾತ್ಮ
ಶ್ರೀನಗರ, ಜೂನ್ ,25: ಬಾಲ ಮುದುರಿಕೊಂಡಿದ್ದ ಉಗ್ರರು ಸೇನೆಯನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಿದ್ದಾರೆ. ಶನಿವಾರ ಮಧ್ಯಾಹ್ನ ನಡೆದ ಉಗ್ರರ ದಾಳಿಗೆ ಸಿಆರ್ ಪಿಎಫ್ ಯೋಧರ ಬಸ್ ಗುರಿಯಾಗಿದ್ದು 5 ಯೋಧರು ಪ್ರಾಣತ್ಯಾಗ ಮಾಡಿದ್ದಾರೆ.
20 ಜನ ಯೋಧರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೈನಿಕರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಇನ್ನೊಂದೆಡೆ ಉಗ್ರರು ಮತ್ತು ಸಿಆರ್ ಪಿಎಫ್ ಯೋಧರ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ.[ಗುಜರಾತಿನ ದೇಗುಲ ಧ್ವಂಸಗೊಳಿಸಲು ಉಗ್ರರ ಎಂಟ್ರಿ?]
ದಾಳಿಯಲ್ಲಿ ಸಾವನ್ನಪ್ಪಿದ ಇಬ್ಬರು ಉಗ್ರರು ಪಾಕಿಸ್ತಾನದ ಲಷ್ಕರ್ ಇ ತೋಯ್ಬಾ ಸಂಘಟನೆಗೆ ಸೇರಿದವರು ಎಂದು ಸಿಆರ್ ಪಿಎಫ್ ಐಜಿ ನಳೀನ್ ಪ್ರಭಾತ್ ತಿಳಿಸಿದ್ದಾರೆ.[ಅಷ್ಟಕ್ಕೂ.. ತಮಿಳುನಾಡಿನ ಯುವಕ ತ್ರಿವರ್ಣ ಧ್ವಜ ಸುಟ್ಟಿದ್ದೇಕೆ?]
ದಾಳಿಯ ನಂತರ ಸೈನಿಕರು ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದ್ದು ಅಡಗಿಕೊಂಡಿರುವ ಉಗ್ರರ ಪತ್ತೆಗೆ ಕಾರ್ಯಾಚರಣೆ ಆರಂಭಮಾಡಿದ್ದಾರೆ.
Comments
jammu and kashmir terrorist soldier pakistan indian army ಜಮ್ಮು ಮತ್ತು ಕಾಶ್ಮೀರ ಉಗ್ರಗಾಮಿ ಪಾಕಿಸ್ತಾನ ಸೈನಿಕ ಭಾರತೀಯ ಸೇನೆ
English summary
Two militants and 5 Central Reserve Police Force (CRPF) jawans were killed on Saturday in a gunfight after the terrorists ambushed a CRPF convoy on the Srinagar-Jammu national highway in Jammu and Kashmir's Pulwama district on 25, June 2015.