ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕರ್ನಾಟಕ, ನೀನೂ ಕೂಡ..!'; ಸೀಜರ್ ಡೈಲಾಗ್ ಹೇಳಿದ ಅಬ್ದುಲ್ಲಾ

|
Google Oneindia Kannada News

ನವದೆಹಲಿ, ಮೇ 15: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಬಿಜೆಪಿ ವಿರೋಧಿಗಳಲ್ಲಿ ಕಳವಳ ಮೂಡಿಸಿದೆ.

ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ ಬಂದಿರುವುದರಿಂದ, ಕಾಂಗ್ರೆಸ್ ಪ್ರಾಬಲ್ಯವಿದ್ದ ರಾಜ್ಯವಾದ ಕರ್ನಾಟಕದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧಿ ಇತರೆ ಪಕ್ಷಗಳು ಈ ಫಲಿತಾಂಶದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದರು.

LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್ LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್

ಕಾಂಗ್ರೆಸ್ ಮತ್ತೆ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ಲೆಕ್ಕಾಚಾರಗಳು ಹುಸಿಯಾಗಿದ್ದು, ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

Karnataka Election Results 2018 omar abdulla tweet

ಕರ್ನಾಟಕದಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನ ಹಾಗೂ ಬಿಜೆಪಿಯ ಯಶಸ್ಸನ್ನು ಕಂಡು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ನಾಟಕಕಾರ ವಿಲಿಯಂ ಶೇಕ್‌ಸ್ಪಿಯರ್‌ನ ಪ್ರಸಿದ್ಧ ನಾಟಕದ ಸಂಭಾಷಣೆಯನ್ನು ಉಸುರಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡರಾಗಿರುವ ಒಮರ್ ಅಬ್ದುಲ್ಲಾ ಅವರು ಮೂರೇ ಪದಗಳಲ್ಲಿ ತಮ್ಮ ಹತಾಷೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಶೇಕ್‌ಸ್ಪಿಯರ್‌ನ ದುರಂತ ನಾಟಕ 'ಜೂಲಿಯಸ್ ಸೀಜರ್'ನಲ್ಲಿ ಸೀಜರ್ ತನ್ನ ಆತ್ಮೀಯ ಗೆಳೆಯ ಬ್ರೂಟಸ್‌ಗೆ 'ಎಟ್ ಟು ಬ್ರೂಟ್' (ಬ್ರೂಟಸ್‌, ನೀನೂ ಕೂಡ) ಎಂದು ನೋವು-ಅಚ್ಚರಿಯಿಂದ ಹೇಳುವ ಮಾತನ್ನು ಕರ್ನಾಟಕಕ್ಕೆ ಅನ್ವಯಿಸಿದ್ದಾರೆ.

'ಎಟ್ ಟು ಕರ್ನಾಟಕ' (ಕರ್ನಾಟಕ; ನೀನೂ ಕೂಡ) ಎಂದು ಒಮರ್ ಅಬ್ದುಲ್ಲಾ, ಕರ್ನಾಟಕದಲ್ಲಿನ ಕಾಂಗ್ರೆಸ್ ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

English summary
Karnataka Election Results 2018: Jammu and Kashmir ex chief minister Omar Abdulla reacted to Karnataka election result by mentioning the popular conversation of the drama Julious Caesar. He tweeted three words 'en tu karnataka'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X