ಕರ್ನಾಟಕ ಎಫೆಕ್ಟ್; ಗೋವಾ, ಬಿಹಾರ ರಾಜಕೀಯದಲ್ಲಿ ಸಂಚಲನ
ಪಣಜಿ/ಪಾಟ್ನಾ, ಮೇ 17: ಕರ್ನಾಟಕ ರಾಜಕೀಯದಲ್ಲಿ ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ರಾಜಕಾರಣ ಪಕ್ಕದ ಗೋವಾ ಮತ್ತು ಬಿಹಾರದ ರಾಜಕೀಯದ ಮೇಲೂ ಪರಿಣಾಮ ಬೀರಿದೆ.
ಕರ್ನಾಟಕದಲ್ಲಿ ಅತೀದೊಡ್ಡ ಪಕ್ಷಕ್ಕೆ ಸರಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಿದ ಬೆನ್ನಿಗೆ ಗೋವಾದಲ್ಲಿ ಅತೀ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಮತ್ತು ಬಿಹಾರದಲ್ಲಿ ಅತೀ ದೊಡ್ಡ ಪಕ್ಷವಾಗಿರುವ ಆರ್.ಜೆ.ಡಿ ಸರಕಾರ ರಚನೆಗೆ ಹಕ್ಕು ಮಂಡಿಸಲು ಮುಂದಾಗಿವೆ.
ಗೋವಾ,ಮಣಿಪುರದಲ್ಲಿ ತಾನೇ ಹೆಣೆದ ತಂತ್ರ ಕರ್ನಾಟಕ ಬಿಜೆಪಿಗೆ ಮುಳುವಾಯ್ತೇ?
ಗೋವಾದ 40 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 17 ಶಾಸಕರನ್ನು ಹೊಂದಿದ್ದು ಅತೀ ದೊಡ್ಡ ಪಕ್ಷವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ರಾಜ್ಯಪಾಲರ ತೀರ್ಮಾನ ಉಲ್ಲೇಖಿಸಿ ನಮಗೆ ಸರಕಾರ ರಚನೆಗೆ ಅವಕಾಶ ಕೊಡಿ ಎಂದು ರಾಜ್ಯಪಾಲರ ಮುಂದೆ ಶಾಸಕರ ಪೆರೇಡ್ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ಇಲ್ಲಿ 13 ಶಾಸಕರನ್ನು ಹೊಂದಿರುವ ಬಿಜೆಪಿ ಎಂಜಿಪಿಯ ಮೂರು ಶಾಸಕರ ಬೆಂಬಲದೊಂದಿಗೆ ಸರಕಾರ ನಡೆಸುತ್ತಿದ್ದು, ಮನೋಹರ್ ಪರಿಕ್ಕರ್ ಗೋವಾದ ಮುಖ್ಯಮಂತ್ರಿಯಾಗಿದ್ದಾರೆ.
ಬಿಹಾರದಲ್ಲೂ
ಕರ್ನಾಟಕದ
ಸದ್ದು
ಅತ್ತ
ಬಿಹಾರದಲ್ಲೂ
ಕರ್ನಾಟಕ
ಮಾದರಿಯಲ್ಲೇ
ನಮಗೆ
ಸರಕಾರ
ರಚನೆಗೆ
ಅವಕಾಶ
ನೀಡಬೇಕು
ಎಂದು
ಆರ್.ಜೆ.ಡಿ
ಪಕ್ಷದ
ನಾಯಕ
ತೇಜ್
ಪ್ರತಾಪ್
ಯಾದವ್
ಆಗ್ರಹಿಸಿದ್ದಾರೆ.
243
ಸದಸ್ಯ
ಬಲದ
ಬಿಹಾರ
ವಿಧಾನಸಭೆಯಲ್ಲಿ
80
ಶಾಸಕರನ್ನು
ಹೊಂದಿದ್ದು
ಆರ್.ಜೆ.ಡಿ
ಅತೀ
ದೊಡ್ಡ
ಪಕ್ಷವಾಗಿದೆ.
ಆದರೆ
70
ಶಾಸಕರನ್ನು
ಹೊಂದಿರುವ
ಜೆಡಿಯು
ಇಲ್ಲಿ
ಬಿಜೆಪಿ
ಬೆಂಬಲದೊಂದಿಗೆ
ಸರಕಾರ
ರಚಿಸುತ್ತಿದೆ.
ಈ ಹಿನ್ನೆಲೆಯಲ್ಲಿ ತಮ್ಮ ಶಾಸಕರನ್ನು ರಾಜ್ಯಪಾಲರ ಮುಂದೆ ಪೆರೇಡ್ ನಡೆಸಿ ಸರಕಾರ ರಚನೆಗೆ ಹಕ್ಕು ಮಂಡಿಸಲು ತೇಜ್ ಪ್ರತಾಪ್ ಯಾದವ್ ಮುಂದಾಗಿದ್ದಾರೆ.