ರಾಜಕೀಯದಿಂದ ಕ್ರಿಮಿನಲ್ ಗಳನ್ನು ದೂರವಿರಸಲು ಕಪಿಲ್ 'ಬಿಲ್'
ನವದೆಹಲಿ, ನ.10: ಎಲ್ಲವೂ ನಿರೀಕ್ಷೆಯಂತೆ ನಡೆದರೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವವ ಕ್ರಿಮಿನಲ್ ಗಳು ಇನ್ನು ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ತಡೆಹಿಡಿಯಲು ಕೇಂದ್ರ ಸರ್ಕಾರ ನೂತನ ಮಸೂದೆ ಜಾರಿ ಮಾಡಲು ಮುಂದಾಗಿದೆ. ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಹೊಸ ಮಸೂದೆ ವಿಷಯವನ್ನು ಖಚಿತಪಡಿಸಿದ್ದಾರೆ.
ಈ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಸಚಿವ ಕಪಿಲ್ ಸಿಬಲ್ ಕರಡು ಮಸೂದೆ ಮಂಡಿಸುವ ಸಂಬಂಧ ಆಭಿಪ್ರಾಯ ತಿಳಿಸುವಂತೆ ಕೋರಿಕೊಂಡಿದ್ದಾರೆ.
ಮುಂಬರುವ
ಚಳಿಗಾಲದ
ಅಧಿವೇಶನದಲ್ಲಿ
ಮಸೂದೆಯನ್ನು
ಸಂಸತ್ತಿನ
ಉಭಯ
ಸದನಗಳಾದ
ಲೋಕಸಭೆ
ಮತ್ತು
ರಾಜ್ಯಸಭೆಯಲ್ಲಿ
ಮಂಡಿಸಲು
ಕೇಂದ್ರದ
ಯುಪಿಎ
ಸರ್ಕಾರ
ತೀರ್ಮಾನಿಸಿದೆ.
ಕ್ರಿಮಿನಲ್
ಹಿನ್ನೆಲೆಯುಳ್ಳ
ಸಂಸದರು
ಮತ್ತು
ಶಾಸಕರನ್ನು
ಸದಸ್ಯತ್ವದಿಂದ
ಅನರ್ಹಗೊಳಿಸುವಂತೆ
ಸುಪ್ರೀಂಕೋರ್ಟ್
ಇತ್ತೀಚೆಗಷ್ಟೆ
ಮಹತ್ವದ
ತೀರ್ಪು
ನೀಡಿತ್ತು.
ಇದನ್ನೇ ಆಧಾರವಾಗಿಟ್ಟುಕೊಂಡಿರುವ ಕೇಂದ್ರ ಸರ್ಕಾರ ಹೀನ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳು ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಗಟ್ಟಲು ಹೊಸ ಮಸೂದೆಯನ್ನು ಸಿದ್ಧಪಡಿಸಿದೆ.
ಒಂದು ವೇಳೆ ಕಾನೂನು ಆಯೋಗವು ಕೇಂದ್ರ ಸರ್ಕಾರದ ಈ ಉದ್ದೇಶಿತ ಮಸೂದೆಗೆ ಬೆಂಬಲ ಸೂಚಿಸಿದರೆ ಚಳಿಗಾಲದ ಅಧಿವೇಶನದಲ್ಲಿ ಈ ಕರಡು ಮಸೂದೆ ಮಂಡಿಸಲಾಗುವುದು ಎಂದು ಸಿಬಲ್ ಅವರು ಭಾನುವಾರ(ನ.10) ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕೊಲೆ, ಅತ್ಯಾಚಾರ, ಅಪಹರಣ ಸೇರಿದಂತೆ ಹೀನ ಕೃತ್ಯಗಳಲ್ಲಿ ಭಾಗಿಯಾಗಿರುವವರಿಗೆ ಕನಿಷ್ಠ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇಂಥವರನ್ನು ಚುನಾವಣಾ ಕಣದಿಂದ ಸ್ಪರ್ಧಿಸದಂತೆ ತಡೆಯೊಡ್ಡುವುದು ಇದರ ಮೂಲ ಉದ್ದೇಶವಾಗಿದೆ ಎಂದು ಕಪಿಲ್ ವಿವರಿಸಿದರು.
ಮಸೂದೆ ಮಂಡಿಸುವ ಸಂಬಂದ ಸದ್ಯದಲ್ಲೇ ಪ್ರಧಾನಮಂತ್ರಿ ಡಾ.ಮನಮೋಹನ್ಸಿಂಗ್ ಸೇರಿದಂತೆ ಸಂಪುಟದ ಸಹೋದ್ಯೋಗಿಗಳ ಚತೆ ಚರ್ಚಿಸಲಾಗುವುದು. ಬಳಿಕ ಸಂಪುಟದಲ್ಲಿ ಚರ್ಚಿಸಿ ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡಲಾಗುವುದು ಎಂದು ನುಡಿದಿದ್ದಾರೆ.
ಕಳೆದ ಜು.10ರಂದು ಸುಪ್ರೀಂಕೋರ್ಟ್ ಕೊಲೆ, ಅತ್ಯಾಚಾರ, ಅಪಹರಣ ಸೇರಿದಂತೆ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಭಾಗಿಯಾಗಿ ಎರಡು ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಗೆ ಗುರಿಯಾದರೆ ಅಂಥವರ ಸದಸ್ಯತ್ವವನ್ನು ತಕ್ಷಣವೇ ಅನರ್ಹಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ನ್ಯಾಯಾಲಯದ ಈ ತೀರ್ಪು ಬಂದ ನಂತರ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ಸಂಸದರಾದ ಶರ್ಮ ಮತ್ತು ರಶೀದ್ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು.
ಇದೀಗ ಚುನಾವಣೆಯನ್ನು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಚುನಾವಣೆ ಕಣದಿಂದ ಸ್ಪರ್ಧಿಸದಂತೆ ನೂತನ ನಿಯಮಗಳನ್ನು ಜಾರಿ ಮಾಡಲು ಮುಂದಾಗಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. (ಪಿಟಿಐ)