ಜ್ಯೋತಿರಾದಿತ್ಯ ಸಿಂದಿಯಾ ಟ್ವಿಟ್ಟರ್ ಖಾತೆಯಿಂದ 'ಕಾಂಗ್ರೆಸ್' ನಾಪತ್ತೆ!
ಭೋಪಾಲ್, ನವೆಂಬರ್ 25: ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂದಿಯಾ ಕಾಂಗ್ರೆಸ್ ಪಕ್ಷ ತೊರೆಯುತ್ತಾರೆ ಎಂಬ ವದಂತಿ ಹಲವು ದಿನಗಳಿಂದ ಚಾಲ್ತಿಯಲ್ಲಿದೆ.
ಅದಕ್ಕೆ ಪೂರಕ ಎಂಬಂತೆ ಇದೀಗ ತಮ್ಮ ಟ್ವಿಟ್ಟರ್ ಪ್ರೊಫೈಲ್ ನಿಂದ "ಕಾಂಗ್ರೆಸ್" ಎಂಬ ಪದವನ್ನೇ ಜ್ಯೋತಿರಾದಿತ್ಯ ಸಿಂದಿಯಾ ತೆಗೆದುಹಾಕಿದ್ದು, ಮತ್ತಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಕಾಂಗ್ರೆಸ್ ಗೆ ಗುಡ್ ಬೈ ಹೇಳಲಿದ್ದಾರಾ ಜ್ಯೋತಿರಾದಿತ್ಯ ಸಿಂದಿಯಾ?
ಟ್ವಿಟ್ಟರ್ ನಲ್ಲಿ ಸಿಂದಿಯಾ ಪ್ರೊಫೈನ್ ನ ಸ್ಕ್ರೀನ್ ಶಾಟ್ ನೊಂದಿಗೆ ಅವರು ಕಾಂಗ್ರೆಸ್ ತೊರೆಯುವ ವಂದಂತಿ ಮತ್ತೆ ದಟ್ಟವಾಗಿದ್ದು, ಈ ಕುರಿತು ಸಿಂದಿಯಾ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
"ನಾನು ಒಂದು ತಿಂಗ ಹಿಂದೆಯೇ ಟ್ವಿಟ್ಟರ್ ನಲ್ಲಿ ನನ್ನ ಬಯೊಟೆಡಾವನ್ನು ಬದಲಿಸಿದ್ದೆ. ಜನರ ಸಲಹೆಯ ಮೇರೆಗೆ ಬಯೊಡೆಟಾ ಚಿಕ್ಕದಾಗಿರಲಿ ಎಂದು ಹಾಗೆ ಮಾಡಿದ್ದೇನೆ. ಈ ಕುರಿತ ವದಂತಿಗಳು ಆಧಾರ ರಹಿತ" ಎಂದು ಸಿಂದಿಯಾ ಹೇಳಿದ್ದಾರೆ.
ಮೋದಿ ಸರ್ಕಾರ ಬೆಂಬಲಿಸಿದ ರಾಹುಲ್ ಆಪ್ತ ಜ್ಯೋತಿರಾದಿತ್ಯ ಸಿಂದಿಯಾ!
ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದ ಗುನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಜ್ಯೋತಿರಾದಿತ್ಯ ಸಿಂದಿಯಾ ನಂತರ ತಮ್ಮನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ ಎಂದು ದೂರಿದ್ದರು. "ನನ್ನನ್ನು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿ, ಇಲ್ಲವೆಂದರೆ ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ" ಎಂದು ಬಹಿರಂಗವಾಗಿ ಸಿಂದಿಯಾ ಹೇಳಿಕೆ ನೀಡಿದ್ದರು.