ಜೂನ್ 23 ವಿಶ್ವ ವಿಧವೆಯರ ದಿನ, ಬನ್ನಿ ಅವರಿಗೆ ಧೈರ್ಯ ತುಂಬೋಣ
ನವ ದೆಹಲಿ, ಜೂನ್ 23: ಪುರುಷರು ಮರು ಮದುವೆ ಆಗುವುದಾದರೆ ಮಹಿಳೆಯರು ಏಕೆ ಆಗುವಂತಿಲ್ಲ ಹೀಗೆಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಹೀಗೆ ಹೇಳುವುದಕ್ಕೆ ಕಾರಣ ಇಂದು ಅಂತರರಾಷ್ಟ್ರೀಯ ವಿಧವೆಯರ ದಿನ.
ಹೌದು ಜೂನ್ 23 ಅಂತರಾಷ್ಟ್ರೀಯ ವಿಧವೆಯರ ದಿನ. ಪತಿಯನ್ನು ಕಳೆದುಕೊಂಡು ಒಂಟಿ ಜೀವನ ನಡೆಸುತ್ತಿರುವವರಿಗಾಗಿಯೇ ಈ ದಿನ ಮೀಸಲು.
RAPID ಮೂಲಕ ವಿಧವೆಯರ ಬದುಕಿಗೆ ಬೆಳಕಾದ ಧಾರವಾಡದ ವಾಣಿ ಪುರೋಹಿತ್
ಪತಿಯನ್ನು ಕಳೆದು ಒಂಟಿಯಾದ ಮಹಿಳೆಯರಿಗೆ ಮತ್ತು ಅವರ ಮಕ್ಕಳಿಗೆ ಧೈರ್ಯ ತುಂಬಲೆಂದೇ ಅಂತರಾಷ್ಟ್ರೀಯ ವಿಧವೆಯರ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
ಜೂನ್ 23ರಂದೇ ಆಚರಣೆ ಏಕೆ
1954 ರಲ್ಲಿ ಮೊದಲ ಬಾರಿಗೆ ವಿಶ್ವ ವಿಧವೆಯರ ದಿನ ಆಚರಿಸಲಾಯಿತು. ಲೂಂಬಾ ಫೌಂಡೇಶನ್ ಮೊದಲ ಬಾರಿಗೆ ಇದನ್ನು ಚಾಲ್ತಿಗೆ ತಂದಿತು. ಇದೇ ದಿನದಂದು ಆಚರಿಸಲು ಕಾರಣ ಇದೇ ದಿನ ಲೂಂಬಾ ಫೌಂಡೇಶನ್ ಸಂಸ್ಥಾಪಕರ ತಾಯಿ ವಿಧವೆಯಾಗಿದ್ದರು ಹಾಗಾಗಿ ಜೂನ್ 23ರನ್ನೇ ವಿಶ್ವ ವಿಧವೆಯರ ದಿನ ಆಚರಿಸಲಾಗುತ್ತಿದೆ.
ಕರ್ನಾಟಕ ಸೇರಿದಂತೆ ವಿಧವೆಯರ ರಕ್ಷಣೆಗೆ ವಿಫಲವಾದ ರಾಜ್ಯಗಳ ಮೇಲೆ ಸುಪ್ರೀಂ ದಂಡ
ಭಾರತೀಯರಿಂದ ಆಚರಣೆಗೆ ಬಂದ ದಿನ
ವಿಶ್ವ ವಿಧವೆಯರ ದಿನ ಆಚರಣೆಯ ಹಿಂದೆ ಇರುವುದು ಭಾರತೀಯರ ಇಚ್ಛಾಶಕ್ತಿ ಮತ್ತು ಕಳಕಳಿ. ಹೌದು ವಿಧವೆಯರ ದಿನ ಆಚರಣೆಗೆ ಬರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಲೂಂಬಾ ಫೌಂಡೇಶನ್ನ ಮುಖ್ಯಸ್ಥ ಲಾರ್ಡ್ ಲೂಂಬಾ ಪಂಜಾಬ್ನವರು. ಅವರ ತಾಯಿ ಪುಷ್ಪವತಿ ಲೂಂಬಾ ಅವರು ವಿಧವೆಯಾದ ದಿನವೇ ವಿಧವೆಯರ ದಿನ ಆಚರಿಸಲಾಗುತ್ತದೆ.
ಸೇನೆಯಲ್ಲಿ ತಪ್ಪದೆ ಆಚರಣೆ
ಭಾರತೀಯ ಸೇನೆಯಲ್ಲಿ ವಿಶ್ವ ವಿಧವೆಯರ ದಿನವನ್ನು ತಪ್ಪದೆ ಆಚರಿಸಲಾಗುತ್ತದೆ. ದೇಶಕ್ಕಾಗಿ ಪತಿಯನ್ನು ಕಳೆದುಕೊಂಡು ಒಂಟಿಯಾದ ಮಹಿಳೆಯರನ್ನು ಅಂದು ಸೇನೆ ನೆನೆಸಿಕೊಳ್ಳುತ್ತದೆ. ವಿಧವೆಯರನ್ನು ಕರೆಸಿ ಉಡುಗೊರೆಗಳನ್ನು ಕೊಡುವ ವಾಡಿಕೆ ಇದೆ.
ಬೃಂದಾವನದ ವಿಧವೆಯರು
ಮಥುರಾ ಪ್ರಮುಖವಾಗಿಸಿಕೊಂಡು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬೃಂದಾವನದ ವಿಧವೆಯರು ಎಂಬ ಆಚರಣೆಯನ್ನೇ ಮಾಡಿಕೊಂಡು ಬರಲಾಗಿದೆ. ಇದು ವಿಧವೆಯರ ದಿನದಂದು ಮಾಡದಿದ್ದರೂ ಸಹಿತ ಅವರನ್ನೂ ಸಂಸ್ಕೃತಿಯ ಭಾಗವಾಗಿಸಿಕೊಳ್ಳುವ ಪ್ರಯತ್ನದಿಂದ ಈ ಆಚರಣೆ ಚಾಲ್ತಿಯಲ್ಲಿದೆ.
ಸುಖಗಳಿಂದ ದೂರ ಇಟ್ಟಿದ್ದೇವೆ
ವಿಧವೆಯರನ್ನು ಎಲ್ಲಾ ರೀತಿಯ ಸುಖಗಳಿಂದ ದೂರವೇ ಇಟ್ಟಿದೆ ನಮ್ಮ ಸಂಸ್ಕೃತಿ. ಅಲಂಕಾರ, ಸಂಸರ ಸುಖ, ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳದಂತೆ ಮಾಡುವ ಸಂಪ್ರದಾಯಗಳು ನಮ್ಮಲ್ಲಿ ಈಗಲೂ ಚಾಲ್ತಿಯಲ್ಲಿವೆ. ನಮ್ಮೊಳಗೆ ನೀವು ಒಬ್ಬರು ಎಂದು ಅವರಿಗೆ ಧೈರ್ಯ ತುಂಬುವ ಉದ್ದೇಶದಿಂದಲೇ ವಿಶ್ವ ವಿಧವೆಯರ ದಿನ ಅವಶ್ಯಕ.
ಇಂದು ನಡೆದಿದೆ ಕಾರ್ಯಕ್ರಮ
ಇಂದು (ಜೂನ್ 23) ನವ ದೆಹಲಿಯಲ್ಲಿ ಲೂಂಬಾ ಫೌಂಡೇಶನ್ ವತಿಯಿಂದ ನಡೆದ ವಿಧವೆಯರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಭಾಗವಹಿಸಿದ್ದರು. ಸೇರಿದ್ದ ನೂರಾರು ವಿಧವೆಯರನ್ನುದ್ದೇಶಿಸಿ ಧೈರ್ಯದ ಮಾತುಗಳನ್ನಾಡಿದರು. ಪುರುಷರು ಮರುವಿವಾಹ ಆಗುವುದಾದರೆ ಮಹಿಳೆಯರೇಕೆ ಆಗುವಂತಿಲ್ಲ ಎಂದರು ಅವರು.