ಜಾರ್ಖಂಡ್: ಮೋಟರ್ ಸೈಕಲ್ ಕದ್ದ ಎಂದು ಹೊಡೆದು ಕೊಂದ ಜನ
ಜೇಮ್ಶೆಡ್ಪುರ, ಜೂನ್ 24: ಮೋಟರ್ ಸೈಕಲ್ ಕದ್ದಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯನ್ನು ಜನರೇ ಹೊಡೆದು ಕೊಂದ ಬರ್ಬರ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಶಾಮ್ಸ್ ತಬ್ರೇಝ್ ಎಂಬ 24 ವರ್ಷ ವಯಸ್ಸಿನ ಯುವಕನನ್ನು ಕೆಲವರು ಗಂಟೆಗಟ್ಟಲೆ ಹೊಡೆದು, ಹಿಂಸಿಸಿದ್ದರು ಕೆಲವು ಮೂಲಗಳ ಪ್ರಕಾರ 'ಜೈ ಶ್ರೀರಾಮ್', 'ಜೈ ಹನುಮಾನ್' ಎಂದು ಹೇಳುವಂತೆ ಅವನನ್ನು ಒತ್ತಾಯಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಘಟನೆಗೆ ಸಾಕ್ಷ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.
ಯುವಕನನ್ನು ಥಳಿಸಿದ ಘಟನೆ ಕಳೆದ ಮಂಗಳವಾರ ನಡೆದಿದ್ದು, ಆತನನ್ನು ಬುಧವಾರ ಪೊಲೀಸ್ ವಶಕ್ಕೆ ನೀಡಲಾಗಿತ್ತು. ಆದರೆ ಆತನ ಚಿಕಿತ್ಸೆಗೆ ಪೊಲೀಸರು ಸಹಕಾರ ನೀಡದ ಕಾರಣ ಗಂಭೀರವಾಗಿ ಗಾಯಗೊಂಡು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ತಬ್ರೇಜ್ ಶನಿವಾರ ಸಾವಿಗೀಡಾಗಿದ್ದ.
ಆತ ಸಾವಿಗೀಡಾಗಿದ್ದಾನೆಂದು ಘೋಷಿಸಿದರೂ ಅದನ್ನು ಒಪ್ಪಲು ಕುಟುಂಬಸ್ಥರು ಸಿದ್ಧರಿರಲಲಿಲ್ಲ. ಆತನ್ನು ಜೆಮ್ಶೆಡ್ಪುರದ ಟಾಟಾ ಮೈನ್ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯಲಾಗಿತ್ತು. ಆದರೆ ಆತ ಸತ್ತಿದ್ದಾನೆಂದು ಅಲ್ಲಿನ ವೈದ್ಯರೂ ಘೋಷಿಸಿದ್ದರು.