'ಉಡುಗೊರೆ ಪಡೆಯುವುದಕ್ಕೆ ತಮಿಳುನಾಡಲ್ಲಿ ನಿಯಮವಿಲ್ಲ'
ನವದೆಹಲಿ, ಏಪ್ರಿಲ್, 07: ರಾಜಕೀಯ ಮುಖಂಡರು ಉಡುಗೊರೆ ಪಡೆದಿದ್ದನ್ನು ದಾಖಲಿಸಬೇಕು ಎಂಬ ನಿಯಮ ತಮಿಳುನಾಡಿನಲ್ಲಿ ಇಲ್ಲ ಎಂಬ ವಾದವನ್ನು ಸುಪ್ರೀಂ ಕೋರ್ಟ್ ಮುಂದೆ ಇಡಲಾಗಿದೆ.
ಅಕ್ರಮ ಆಸ್ತಿ ಗಳಿಕೆ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ನಾಗೇಶ್ವರ ರಾವ್ ವಾದ ಮಂಡನೆ ಮುಂದುವರಿಸಿದರು. ಪಕ್ಷದ ಅನುಯಾಯಿಗಳು ಎಷ್ಟು ಉಡುಗೊರೆಯನ್ನಾದರೂ ನೀಡಬಹುದು ಎಂದು ವಾದ ಮಂಡಿಸಿದರು.
ಪಿಜಿ ಘೋಷ್ ಮತ್ತು ಅಮಿತ್ವ ರಾಯ್ ಅವರ ಪೀಠದ ಮುಂದೆ ವಾದ ಮಂಡನೆ ಮಾಡಿದ್ದಾರೆ. ರಾಜಾರಣಿಗಳು ಪಡೆದುಕೊಂಡ ಉಡುಗೊರೆಯ ಮೂಲವನ್ನು ಬಹಿರಂಗ ಮಾಡಬೇಕು ಎಂದು ಕರ್ನಾಟಕ ವಾದ ಮುಂದಿಟ್ಟಿದ್ದಕ್ಕೆ ಜಯಾ ಪರ ವಕೀಲರು ಉತ್ತರ ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 19ಕ್ಕೆ ನಿಗದಿ ಮಾಡಲಾಗಿದೆ.[ಬೇರೆಯವರ ಆಸ್ತಿ ಬಗ್ಗೆ ಜಯಾ ಯಾಕೆ ಲೆಕ್ಕ ಕೊಡಬೇಕು?]
ಉಡುಗೊರೆ
ವಿರುದ್ಧ
ಯಾವ
ಕಾನೂನು
ಇಲ್ಲ
*
ಜಯಾ
ಪಡೆದುಕೊಂಡ
ಉಡುಗೊರೆಗಳೆಲ್ಲವೂ
ಕಾನೂನು
ಬದ್ಧವಾಗಿಯೇ
ಇದೆ.
*
ಉಡುಗೊರೆಯನ್ನು
ನೆಪವಾಗಿರಿಸಿಕೊಂಡು
ಜಯಾ
ಅವರನ್ನು
ಹಿಂಸಿಸಲಾಗಿದೆ.
ಬೇಡದ
ಪ್ರಶ್ನೆಗಳನ್ನು
ಕೇಳಲಾಗಿದೆ.
*
ಮ್ಯಾಗಝಿನ್
ವೊಂದು
ಹಣ
ಪಡೆದುಕೊಳ್ಳುವುದಕ್ಕೂ
ಜಯಾ
ಅವರಿಗೂ
ಸಂಬಂಧವಿಲ್ಲ.[ತಮಿಳುನಾಡು
ಚುನಾವಣೆಗೆ
ಮುನ್ನ
ಜಯಾ
ಕೇಸ್
ತೀರ್ಪು?]
*
ಆದಾಯ
ತೆರಿಗೆ
ಇಲಾಖೆಯೇ
ಜಯಾ
ಅವರ
ಲೆಕ್ಕವನ್ನು
ಒಪ್ಪಿಕೊಂಡಿರುವಾಗ
ಕರ್ನಾಟಕ
ಸಲ್ಲದ
ಕ್ಯಾತೆ
ತೆಗೆಯುತ್ತಿದೆ.
*
ಸುಧಾಕರನ್
ಮದುವೆಗೆ
ಮಾಡಿದ
ಎಲ್ಲ
ಖರ್ಚನ್ನು
ಜಯಾ
ಅವರೇ
ಭರಿಸಿದ್ದಾರೆ
ಎಂಬುದಕ್ಕೆ
ಯಾವ
ಆಧಾರಗಳು
ಇಲ್ಲ.