ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಯಾ ಕೇಸ್ : ಕರ್ನಾಟಕದ ವಕೀಲರಿಗೆ ಸಂದಾಯವಾದ ಮೊತ್ತ ಬಹಿರಂಗ
ತಮಿಳುನಾಡಿನ 'ಅಮ್ಮ' ದಿವಂಗತ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಕರ್ನಾಟಕದ ಪರವಾಗಿ ಕೋರ್ಟಿನಲ್ಲಿ ವಾದ ಮಂಡಿಸಿದ ವಕೀಲರಿಗೆ ರಾಜ್ಯ ಸರಕಾರದಿಂದ ಪಾವತಿಯಾಗಿರುವ ಒಟ್ಟಾರೆ ಶುಲ್ಕದ ಮೊತ್ತ ಈಗ ಬಹಿರಂಗವಾಗಿದೆ.
ಬೆಂಗಳೂರು, ಮೇ 23: ತಮಿಳುನಾಡಿನ 'ಅಮ್ಮ' ದಿವಂಗತ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಕರ್ನಾಟಕದ ಪರವಾಗಿ ಕೋರ್ಟಿನಲ್ಲಿ ವಾದ ಮಂಡಿಸಿದ ವಕೀಲರಿಗೆ ರಾಜ್ಯ ಸರಕಾರದಿಂದ ಪಾವತಿಯಾಗಿರುವ ಒಟ್ಟಾರೆ ಶುಲ್ಕದ ಮೊತ್ತ ಈಗ ಬಹಿರಂಗವಾಗಿದೆ.
ಹಿರಿಯ ಬಿ.ವಿ.ಆಚಾರ್ಯ ಹಾಗೂ ಅವರ ತಂಡಕ್ಕೆ ಸರಿ ಸುಮಾರು 1,85,12,500 ರುಪಾಯಿ (ಒಂದು ಕೋಟಿಯ ಎಂಬತ್ತೈದು ಲಕ್ಷದ ಹನ್ನೆರಡು ಸಾವಿರದ ಐನೂರು ರುಪಾಯಿ) ಸಂದಾಯವಾಗಿದೆ. ಬಿ.ವಿ ಆಚಾರ್ಯ ಅವರ ಫೀಜು 40,75,000 ರು ಎಂದು ಆರ್ ಟಿಐ ಅರ್ಜಿ ಮೂಲಕ ತಿಳಿದು ಬಂದಿದೆ.
ಬರಂದ್ ಬೆಂಚ್(BarandBench) ವರದಿಯಂತೆ ಆರ್ ಟಿಐ ಅರ್ಜಿದಾರರಿಗೆ ಲಭ್ಯ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಭವಾನಿ ಸಿಂಗ್ ಪಬ್ಲಿಕ್ ಪ್ರಾಸಿಕ್ಯೂಟರ್ ಗೆ 96,80,00 ರು, ಸಹಾಯಕ ವಕೀಲರಾದ ಸಂದೇಶ್ ಚೌಟಾಗೆ 24,00,00ರು, ಸಿಂಗ್ ಅವರ ಸಹಾಯಕ ಮುರ್ಗೇಶ್ ಮರಡಿಗೆ 23,47,500 ರು ನೀಡಲಾಗಿದೆ.
Comments
jayalalithaa karnataka supreme court tamil nadu bv acharya ಜಯಲಲಿತಾ ಕರ್ನಾಟಕ ಸುಪ್ರೀಂ ಕೋರ್ಟ್ ತಮಿಳುನಾಡು ಬಿವಿ ಆಚಾರ್ಯ
English summary
The state of Karnataka spent Rs 1,85,12,500 on advocate fees to conduct the trial in the Jayalalithaa Disproportionate Assets case. B V Acharya who was the first special public prosecutor in the case charged Rs 40,75,000, an RTI response has revealed.
Story first published: Tuesday, May 23, 2017, 16:04 [IST]