ಶಾಲಾ ವಾಹನ ಕಂದಕಕ್ಕೆ ಉರುಳಿದ್ದು ಗಾಳಿಸುದ್ದಿ : ಪೂಂಚ್ ಪೊಲೀಸರು
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್ ನ ಮಾನ್ಸ ಮೊರ್ ಬಳಿ ಭೀಕರ ದುರಂತ ಸಂಭವಿಸಿದೆ. 40 ವಿದ್ಯಾರ್ಥಿಗಳಿದ್ದ ಶಾಲಾ ವಾಹನವೊಂದು ಕಂದಕಕ್ಕೆ ಉರುಳಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ, ಜನತೆ ಆತಂಕ ಪಡುವ ಅಗತ್ಯವಿಲ್ಲ
ಶ್ರೀನಗರ, ಮೇ 25 : ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್ ನ ಮಾನ್ಸ ಮೊರ್ ಬಳಿ ಭೀಕರ ದುರಂತ ಸಂಭವಿಸಿದೆ. 40 ವಿದ್ಯಾರ್ಥಿಗಳಿದ್ದ ಶಾಲಾ ವಾಹನವೊಂದು ಕಂದಕಕ್ಕೆ ಉರುಳಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ, ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್ ನ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆದರೆ,
ಇದೊಂದು
ಗಾಳಿಸುದ್ದಿಯಿಂದ
ಹಬ್ಬಿದ್ದ
ಸಮಾಚಾರವಾಗಿದ್ದು,
ಸುದ್ದಿ
ಏಜೆನ್ಸಿಗಳ
ಮೂಲಕ
ಎಲ್ಲಾ
ಪ್ರಮುಖ
ವೆಬ್
ಸೈಟ್
ಗಳಲ್ಲಿ
ಪ್ರಕಟವಾಗಿತ್ತು.
ಈ
ಸಂಜೆ
ಈ
ಮುಂಚೆ
ಬಂದಿದ್ದ
ವರದಿ
ಹೀಗಿತ್ತು..
***
ಜಮ್ಮು
ಮತ್ತು
ಕಾಶ್ಮೀರದ
ಪೂಂಚ್
ಸೆಕ್ಟರ್
ನ
ಮಾನ್ಸ
ಮೊರ್
ಬಳಿ
ಭೀಕರ
ದುರಂತ
ಸಂಭವಿಸಿದೆ.
40
ವಿದ್ಯಾರ್ಥಿಗಳಿದ್ದ
ಶಾಲಾ
ವಾಹನವೊಂದು
ಕಂದಕಕ್ಕೆ
ಉರುಳಿದೆ.
ರಜೌರಿ
ಜಿಲ್ಲೆಯ
ಮಂಜಾಕೋಟ್
ನ
ಗರೀಬ್
ನವಾಜ್
ಶಾಲೆಯ
ವಿದ್ಯಾರ್ಥಿಗಳು
ಸೇರಿದಂತೆ
40
ಮಂದಿ
ಬಸ್
ನಲ್ಲಿ
ಪ್ರಯಾಣಿಸುತ್ತಿದ್ದರು.ಚಾಲಕನ
ನಿಯಂತ್ರಣ
ತಪ್ಪಿ
ಬಸ್
ಕಂದಕಕ್ಕೆ
ಉರುಳಿದೆ.
ಪ್ರಯಾಣಿಕರು
ಬದುಕುಳಿದಿರುವ
ಸಾಧ್ಯತೆ
ಕಡಿಮೆ
ಎನ್ನಲಾಗಿದೆ.
ವಿದ್ಯಾರ್ಥಿಗಳೆಲ್ಲರೂ ಪಿಕ್ನಿಕ್ ಗೆ ತೆರಳಿದ್ದರು. ಮೊಘಲ್ ರಸ್ತೆಯ ಪಿರ್ ಕಿ ಘಲಿ ಬಳಿ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ 12ಕ್ಕೂ ಅಧಿಕ ಆಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.