ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ವಿಷಯದಲ್ಲಿ ಕಾಂಗ್ರೆಸ್ಸಿಗರು ಪಾಕಿಸ್ತಾನಕ್ಕೆ ನೆರವಾದರು: ಮೋದಿ

|
Google Oneindia Kannada News

ಗೋಹಾನಾ(ಹರ್ಯಾಣಾ), ಅಕ್ಟೋಬರ್ 18: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರನ್ನು ಖಂಡಿಸುವ ಮೂಲಕ ಕಾಂಗ್ರೆಸ್ಸಿಗರು ಪಾಕಿಸ್ತಾನಕ್ಕೆ ನೆರವಾದರು ಎಂದು ಪ್ರಧಾನಿ ನರೇಂದ್ರ ಮೋದಿ ದೂರಿದರು.

ಹರ್ಯಾಣದ ಗೊಹಾನಾ ಎಂಬಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಕಾಶ್ಮೀರ ವಿವಾದ: ಮಹಾರಾಷ್ಟ್ರದ ವಿಪಕ್ಷಗಳ ಮೇಲೆ ಕಿಡಿಕಾರಿದ ಮೋದಿಕಾಶ್ಮೀರ ವಿವಾದ: ಮಹಾರಾಷ್ಟ್ರದ ವಿಪಕ್ಷಗಳ ಮೇಲೆ ಕಿಡಿಕಾರಿದ ಮೋದಿ

ಕಾಶ್ಮೀರದ ಕುರಿತಂತೆ ಕಾಂಗ್ರೆಸ್ ನ ಕೆಲವು ಮುಖಂದರು ನೀಡಿದ ಹೇಳಿಕೆ ಪಾಕಿಸ್ತಾನ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ನೆರವಾಯಿತು ಎಂದು ಮೋದಿ ಹೇಳಿದರು.

Jammu And Kashmir Issue: Narendra Modi In Haryana Blames Congress leaders

"ನಾವು ಯಾವಾಗ ಸ್ವಚ್ಛ ಭಾರತ, ಸರ್ಜಿಕಲ್ ಸ್ಟ್ರೈಕ್, ಬಾಲಕೋಟ್ ಏರ್ ಸ್ಟ್ರೈಕ್ ಎಂದು ಮಾತನಾಡುತ್ತೇವೋ, ಆಗೆಲ್ಲ ಕಾಂಗ್ರೆಸ್ ಗೆ ನೋವಾಗುತ್ತದೆ. ಕಾಶ್ಮೀರದ ಬಗ್ಗೆಯೂ ಹಾಗೇ ಆಯ್ತು. ಅವರು ನೀಡಿದ ಹೇಳಿಕೆ ಪಾಕಿಸ್ತಾನಕ್ಕೆ ನೆರವಾಯ್ತು. ಇಂಥ ನಡೆಯನ್ನು ಏನೆಂದು ಕರೆಯಬೇಕು?" ಎಂದು ಅವರು ಪ್ರಶ್ನಿಸಿದರು.

ಜಮ್ಮು ಕಾಶ್ಮೀರ ಮತ್ತು ಲಡಾಖ್ ಗಳ ಬೆಳವಣಿಗೆಗೆ ಅಡ್ಡಿಯಾಗಿದ್ದ ಸವಿಧಾನದ 370 ನೇ ವಿಧಿಯನ್ನು ರದ್ದು ಮಾಡಿದ್ದೇವೆ. ಇಡೀ ದೇಶ ಇದಾಗುವುದೇ ಇಲ್ಲ ಎಂದು ಭರವಸೆ ಕಳೆದುಕೊಂದಿದ್ದ ಕೆಲಸವನ್ನು ನಾವು ಮಾಡಿದ್ದೇವೆ.ಕಾಂಗ್ರೆಸ್ ನ ಆಡಳಿತದಲ್ಲಿ ಎಂದಿಗೂ ರೈತರಾಗಲೀ, ಸೈನಿಕರಾಗಲೀ ಸುರಕ್ಷಿತವಾಗಿರಲಿಲ್ಲ" ಎಂದು ಮೋದಿ ಹೇಳಿದರು.

'ಬೆಚೇಂದ್ರ ಮೋದಿ' ಎಂದು ಪ್ರಧಾನಿ ಮೋದಿಯ ಕಾಲೆಳೆದ ರಾಹುಲ್ ಗಾಂಧಿ'ಬೆಚೇಂದ್ರ ಮೋದಿ' ಎಂದು ಪ್ರಧಾನಿ ಮೋದಿಯ ಕಾಲೆಳೆದ ರಾಹುಲ್ ಗಾಂಧಿ

ಹರ್ಯಾಣದಲ್ಲಿ ಅಕ್ಟೋಬರ್ 21 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 24 ರಂದು ಫಲಿತಾಂಶ ಹೊರಬೀಳಲಿದೆ.

English summary
PM Narendra Modi In Haryana Blames Congress leaders For Their Statement On Jammu And Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X