ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೈನಿಕರ ಸಾವಿಗೆ ಪ್ರತೀಕಾರ: ನಾಲ್ವರು ಭಯೋತ್ಪಾದಕರ ಹತ್ಯೆ
ಬಂಡೀಪೊರ, ಜೂನ್ 18: ಜಮ್ಮು ಕಾಶ್ಮೀರದ ಬಂಡಿಪೊರದಲ್ಲಿ ಭಾರತೀಯ ಸೈನಿಕರು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಹೊಡೆದುಹಾಕುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಜೂನ್ 14 ರಂದು ಭಾರತೀಯ ಸೈನಿಕ ಔರಂಗಜೇಬ್ ಎಂಬುವವರ ಗುಂಡು ತುಂಬಿದ ಮೃತದೇಹ ಪತ್ತೆಯಾಗಿತ್ತು. ಅವರನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಕೊಲ್ಲಲಾಗಿತ್ತು. ಈ ಘಟನೆಯ ನಂತರ ಮಾತನಾಡಿದ್ದ ಔರಂಗಜೇಬ್ ತಂದೆ, 'ನನ್ನ ಮಗನ ಸಾವಿಗೆ ಕಾರಣರಾದವರ ವಿರುದ್ದ 32 ಗಂಟೆಗಳೊಳಗೆ ಸೇಡು ತೀರಿಸಿಕೊಳ್ಳಿ' ಎಂದು ಆಕ್ರೋಶಭರಿತರಾಗಿ ಹೇಳಿದ್ದರು.
ಪುತ್ರನ ಸಾವಿಗೆ 32 ಗಂಟೆಯಲ್ಲಿ ಪ್ರತೀಕಾರ: ಹುತಾತ್ಮ ಯೋಧನ ತಂದೆಯ ಆಕ್ರೋಶ
ಕೊನೆಗೂ ಭಾರತೀಯ ಸೇನೆ ಔರಂಗಜೇಬ್ ಸಾವಿಗೆ ಸೇಡು ತೀರಿಸಿಕೊಂಡಿದೆ. ಭಯೋತ್ಪಾದಕರನ್ನು ಹೊಡೆದುರುಳಿಸುವುದಕ್ಕೆ ಮತ್ತು ಗಡಿಯಲ್ಲಿ ಹಿಂಸೆ, ಅಮಾಯಕರ ಹತ್ಯೆಯನ್ನು ತಡೆಯುವುದಕ್ಕೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬಹುದೋ, ಕೈಗೊಳ್ಳಿ ಎಂದು ಈಗಾಗಲೇ ಗ್ರಹ ಸಚಿವಾಲಯ ಸೇನೆಗೆ ತಿಳಿಸಿತ್ತು.
Comments
English summary
At least four terrorists were killed in Jammu and Kashmir's Bandipora town in an encounter with security forces on Mandya. Operations between the terrorists and security forces are underway. Further details are awaited.
Story first published: Monday, June 18, 2018, 12:53 [IST]