ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಣಿವೆ ರಾಜ್ಯದಲ್ಲಿ ಹಿಂಸಾಚಾರ: ರಾಜನಾಥ್ ಭೇಟಿಯಾಗಲಿರುವ ಮೆಹಬೂಬಾ
ನವದೆಹಲಿ, ಜುಲೈ 15: ರಾಜಧಾನಿ ದೆಹಲಿಗೆ ಭೇಟಿ ನೀಡಿರುವ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮಫ್ತಿ, ಇಂದು ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಕಣಿವೆ ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆ ಮತ್ತು ಹಿಂಸಾಚಾರದ ಕುರಿತು ಚರ್ಚೆ ನಡೆಸಲಿದ್ದಾರೆ.
ಕಾಶ್ಮೀರದ ಸಂಬಾಲ್ ನಲ್ಲಿ ಜೀವಂತ ಸೆರೆ ಸಿಕ್ಕ ಭಯೋತ್ಪಾದಕ
ಅಮರಾಥ್ ಯಾತ್ರಿಕರ ಮೇಲಾದ ಭಯೋತ್ಪಾದಕ ದಾಳಿಯಲ್ಲಿ 7 ಜನ ಮೃತರಾಗಿದ್ದು, ಸೈನಿಕರ ವೀರಮರಣ, ಕಾಶ್ಮೀರದಲ್ಲಿ ಡಿವೈಎಸ್ಪಿಯೊಬ್ಬರ ಹತ್ಯೆ, ಕಲ್ಲುತೂರಾಟದ ಘಟನೆಗಳು ಮುಂತಾದ ವಿಷಯಗಳ ಕುರಿತು ಇಬ್ಬರೂ ನಾಯಕರೂ ಚರ್ಚೆ ನಡೆಸಲಿದ್ದಾರೆ.
ಕಣಿವೆ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಹಿಂಸಾಚಾರ ಕೇಂದ್ರ ಮತ್ತು ಕಾಶ್ಮೀರ ರಾಜ್ಯ ಸರ್ಕಾರಕ್ಕೂ ತಲೆನೋವಾಗಿದ್ದು, ಈ ಮಾತುಕತೆ ಮಹತ್ವದ್ದೆನ್ನಿಸಿದೆ.
Comments
English summary
Mehbooba Mufti, Jammu and Kashmir Chief Minister , who is in the national capital, will meet Union Home Minister Rajnath Singh today(July 15th). They are expected to speak about recent violence in the Valley.
Story first published: Saturday, July 15, 2017, 9:49 [IST]