ಪೆಟ್ರೋಲ್-ಡೀಸೆಲ್ ದರ ಇಳಿಕೆ: ನಮಗೆ ಜನರೇ ಮೊದಲು ಎಂದು ಮೋದಿ ಟ್ವೀಟ್
ನವದೆಹಲಿ,
ಮೇ
21:
ದೇಶದಲ್ಲಿ
ಪೆಟ್ರೋಲ್-ಡೀಸೆಲ್
ಮೇಲಿನ
ಅಬಕಾರಿ
ಸುಂಕವನ್ನು
ಕಡಿತಗೊಳಿಸಿರುವುದಕ್ಕೆ
ಸಂಬಂಧಿಸಿದಂತೆ
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಟ್ವೀಟ್
ಮಾಡಿದ್ದು,
"ನಮಗೆ
ಯಾವಾಗಲೂ
ಜನರು
ಮೊದಲು,"
ಎಂದು
ಬರೆದುಕೊಂಡಿದ್ದಾರೆ.
"ಇಂದಿನ
ನಿರ್ಧಾರಗಳು,
ವಿಶೇಷವಾಗಿ
ಪೆಟ್ರೋಲ್
ಮತ್ತು
ಡೀಸೆಲ್
ಬೆಲೆಗಳಲ್ಲಿನ
ಗಮನಾರ್ಹ
ಇಳಿಕೆಗೆ
ಸಂಬಂಧಿಸಿದ
ನಿರ್ಧಾರಗಳು
ವಿವಿಧ
ಕ್ಷೇತ್ರಗಳ
ಮೇಲೆ
ಧನಾತ್ಮಕವಾಗಿ
ಪರಿಣಾಮ
ಬೀರುತ್ತವೆ,
ನಮ್ಮ
ನಾಗರಿಕರಿಗೆ
ಪರಿಹಾರ
ಒದಗಿಸುವುದರ
ಜೊತೆಗೆ
ಜನಜೀವನವನ್ನು
ಮತ್ತಷ್ಟು
ಸುಲಭಗೊಳಿಸುತ್ತದೆ,"
ಎಂದು
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಟ್ವೀಟ್
ಮಾಡಿದ್ದಾರೆ.
Breaking: ಅಬಕಾರಿ ಸುಂಕ ಕಡಿತ; ಪೆಟ್ರೋಲ್ ಬೆಲೆ 9.5ರೂ., ಡೀಸೆಲ್ ಬೆಲೆ 7 ರೂ. ಇಳಕೆ
ಕೇಂದ್ರ ಸರ್ಕಾರವು ಶನಿವಾರ ಪೆಟ್ರೋಲ್ ಮೇಲೆ 8 ರೂಪಾಯಿ ಹಾಗೂ ಡೀಸೆಲ್ ಮೇಲೆ 6 ರೂಪಾಯಿ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಇದರಿಂದಾಗಿ ದೇಶದಲ್ಲಿ ಪೆಟ್ರೋಲ್ ದರ ಪ್ರತಿ ಲೀ.ಗೆ 9.50 ರೂಪಾಯಿ ಹಾಗೂ ಡೀಸೆಲ್ ದರ ಪ್ರತಿ ಲೀ.ಗೆ 7 ರೂಪಾಯಿ ಇಳಿಕೆಯಾಗಲಿದೆ.
ಉಜ್ವಲ
ಯೋಜನೆ
ಬಗ್ಗೆಯೂ
ಮೋದಿ
ಟ್ವೀಟ್:
"ಉಜ್ವಲಾ
ಯೋಜನೆಯು
ಕೋಟಿಗಟ್ಟಲೆ
ಭಾರತೀಯರಿಗೆ,
ವಿಶೇಷವಾಗಿ
ಮಹಿಳೆಯರಿಗೆ
ಸಹಾಯಕವಾಗಿದೆ.
ಉಜ್ವಲಾ
ಸಬ್ಸಿಡಿ
ಕುರಿತು
ಇಂದಿನ
ನಿರ್ಧಾರವು
ಕುಟುಂಬದ
ಬಜೆಟ್ಗಳನ್ನು
ಹೆಚ್ಚು
ಸರಾಗಗೊಳಿಸುತ್ತದೆ,"
ಎಂದು
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಟ್ವೀಟ್
ಮಾಡಿದ್ದಾರೆ.
It is always people first for us!
— Narendra Modi (@narendramodi) May 21, 2022
Today’s decisions, especially the one relating to a significant drop in petrol and diesel prices will positively impact various sectors, provide relief to our citizens and further ‘Ease of Living.’ https://t.co/n0y5kiiJOh
ಪ್ರಧಾನಮಂತ್ರಿ ಉಜ್ವಲ ಯೋಜನೆ 9 ಕೋಟಿ ಫಲಾನುಭವಿಗಳಿಗೆ ಕೇಂದ್ರ ಬಂಪರ್ ಕೊಡುಗೆ ನೀಡಿದೆ. ಪ್ರತಿ ಗ್ಯಾಸ್ ಸಿಲಿಂಡರ್ ಮೇಲೆ 200 ರೂಪಾಯಿ ಸಬ್ಸಿಡಿ ನೀಡುವುದಾಗಿ ಘೋಷಿಸಿದೆ. ಪ್ರತಿವರ್ಷ ಉಜ್ವಲ ಯೋಜನೆಯ ಅಡಿಯಲ್ಲಿ 12 ಗ್ಯಾಸ್ ಸಿಲಿಂಡರ್ ಅನ್ನು ನೀಡುತ್ತೇವೆ. "ಈ ವರ್ಷ ನಾವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 9 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ನೀಡುವ ಪ್ರತಿ ಗ್ಯಾಸ್ ಸಿಲಿಂಡರ್ಗೆ 200 ಸಬ್ಸಿಡಿ ನೀಡುತ್ತೇವೆ," ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಹಣದುಬ್ಬರಕ್ಕೆ
ಕಾರಣ
ತಿಳಿಸಿದ
ನಿರ್ಮಲಾ
ಸೀತಾರಾಮನ್:
ಇಂದು
ಜಗತ್ತು
ಕಷ್ಟದ
ಕಾಲವನ್ನು
ದಾಟುತ್ತಿದೆ.
ಕೋವಿಡ್
-19
ಸಾಂಕ್ರಾಮಿಕ
ರೋಗದಿಂದ
ಜಗತ್ತು
ಚೇತರಿಸಿಕೊಳ್ಳುತ್ತಿರುವಾಗಲೂ,
ಉಕ್ರೇನ್
ಸಂಘರ್ಷವು
ಪೂರೈಕೆ
ಸರಪಳಿ
ಸಮಸ್ಯೆಗಳನ್ನು
ಮತ್ತು
ವಿವಿಧ
ಸರಕುಗಳ
ಕೊರತೆಯನ್ನು
ತಂದಿದೆ.
ಇದು
ಬಹಳಷ್ಟು
ದೇಶಗಳಲ್ಲಿ
ಹಣದುಬ್ಬರ
ಮತ್ತು
ಆರ್ಥಿಕ
ಸಂಕಷ್ಟಕ್ಕೆ
ಕಾರಣವಾಗುತ್ತಿದೆ
ಎಂದು
ಕೇಂದ್ರ
ಸಚಿವೆ
ನಿರ್ಮಲಾ
ಸೀತಾರಾಮನ್
ಹೇಳಿದ್ದಾರೆ