ಟೊಮ್ಯಾಟೋ ಕಾಯಲು ಭದ್ರತಾ ಸಿಬ್ಬಂದಿ
ಇಂದೋರ್, ಜುಲೈ 23: ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು, ಮಾರುಕಟ್ಟೆಯಲ್ಲಿ ಒಂದು ಕೆ.ಜಿಗೆ ನೂರರ ಗಡಿ ದಾಟಿದೆ. ಜತೆಗೆ ಅಂಗಡಿಕಾರರಿಗೆ ಕಳ್ಳರ ಭೀತಿ ಎದುರಾಗಿದೆ. ಅಲ್ಪಾಯುಷಿ ಟೊಮ್ಯಾಟೋಗೆ ಈಗ ಎಲ್ಲಿಲ್ಲದ ಬೆಲೆ ಬಂದಿದೆ.
ಮುಂಬೈನ
ದಾಹಿಸರ್
ಮಾರ್ಕೆಟ್
ನಲ್ಲಿ
900
ಕೆ.ಜಿ
ಟೊಮೆಟೊಗಳನ್ನು
ಕಳ್ಳರು
ಕದ್ದ
ಸುದ್ದಿ
ಹಬ್ಬಿದ
ಬೆನ್ನಲ್ಲೇ
ಮಧ್ಯಪ್ರದೇಶದ
ಇಂದೋರ್
ನಲ್ಲಿ
ಭಾರಿ
ಆತಂಕ
ಶುರುವಾಗಿದೆ.
ಜುಲೈ
20ರಂದು
ಮುಂಬೈನ
ದಾಹಿಸರ್
ಮಾರ್ಕೆಟ್ನಲ್ಲಿ
900
ಕೆ.ಜಿ
ಟೊಮ್ಯಾಟೋ
ಕದ್ದವರ
ಸುಳಿವು
ಇನ್ನೂ
ಸಿಕ್ಕಿಲ್ಲ.
ಈ ನಡುವೆ ಇಂದೋರ್ ನಲ್ಲಿ ಆತಂಕಕ್ಕೊಳಗಾಗಿರುವ ವ್ಯಾಪಾರಿಗಳು ಟೊಮೆಟೊಗೆ ಬಂದೂಕುಧಾರಿಯ ಭದ್ರತೆ ನೀಡಿದ್ದಾರೆ. ಮಾರ್ಕೆಟ್ ಗೆ ಟೊಮೆಟೊ ಟ್ರಕ್ ಗಳು ಬರುತ್ತಿದಂತೆ ಭದ್ರತಾ ಸಿಬ್ಬಂದಿ, ಟೊಮೆಟೊವನ್ನು ಗನ್ ಗಳನ್ನು ಹಿಡಿದುಕೊಂಡು ಭದ್ರತೆ ನೀಡುತ್ತಿದ್ದಾರೆ.
ಕರ್ನಾಟಕ,
ಮಧ್ಯಪ್ರದೇಶ,
ಆಂಧ್ರಪ್ರದೇಶ,
ತೆಲಂಗಾಣ,
ಪಶ್ಚಿಮ
ಬೆಂಗಾಲ
ಹಾಗೂ
ಒಡಿಶಾ
ರಾಜ್ಯಗಳು
ದೇಶದಲ್ಲಿ
ಹೆಚ್ಚು
ಟೊಮ್ಯಾಟೊ
ಉತ್ಪಾದಿಸುವ
ರಾಜ್ಯಗಳಾಗಿವೆ.
Madhya Pradesh: Men with arms guard tomatoes at Indore vegetable market due to fear of them being stolen as prices soar. pic.twitter.com/czyCAPRcqE
— ANI (@ANI_news) July 22, 2017
ಸರಿಯಾದ ಪೂರೈಕೆ ಇಲ್ಲದ ಕಾರಣ, ಮಾರುಕಟ್ಟೆಯಲ್ಲಿ ದಿಢೀರ್ ಆಗಿ ಬೆಲೆ ವ್ಯತ್ಯಾಸ ಕಂಡು ಬಂದಿದೆ. ಇನ್ನು ಹರ್ಯಾಣ, ಪಂಜಾಬ್ ಸೇರಿದಂತೆ ಹಲವೆಡೆ ಅಕಾಲಿಕ ಮಳೆಗೆ ಟೊಮ್ಯಾಟೊ ಬೆಳೆ ಹಾಳಾಗಿದೆ. ಉತ್ತರ ಭಾರತದಲ್ಲಿ ಕಳೆದ ತಿಂಗಳು ಬಿಸಿಲಿಗೂ ಟೊಮ್ಯಾಟೊ ಬಾಡಿ ಹೋಗಿದೆ.
ಈರುಳ್ಳಿಗೆ ಹೋಲಿಸಿದರೆ ಟೊಮ್ಯಾಟೊಗೆ ಆಯಸ್ಸು ಕಮ್ಮಿ. ಚಟ್ನಿ, ಸಾರು, ಜಾಮ್, ಗೊಜ್ಜು ಹೀಗೆ ಮಾರುಕಟ್ಟೆಯಿಂದ ತಂದ ದಿನವೇ ಬಳಸುವುದು ಮಾಮೂಲಿ. ಹೀಗಾಗಿ ಕಳೆದ ವಾರದ ಟೊಮ್ಯಾಟೊ ಯಾರು ಇಟ್ಟುಕೊಳ್ಳುವುದಿಲ್ಲ. ಹೀಗಾಗಿ ಮಾರಾಟಗಾರರು ಹಾಗೂ ಗ್ರಾಹಕರಿಬ್ಬರಿಗೂ ಆತಂಕ ಸಹಜವಾಗಿದೆ.(ಎಎನ್ಐ)