ತುರ್ತು ಪರಿಸ್ಥಿತಿ ಹೇರಿಕೆಗೆ ಸಾಕ್ಷಿಯಾಗಿದ್ದ ಇಂದಿರಾ ಆಪ್ತ ಆರ್.ಕೆ. ಧವನ್ ನಿಧನ
ನವದೆಹಲಿ, ಆಗಸ್ಟ್ 6: ತುರ್ತು ಪರಿಸ್ಥಿತಿ ಹಾಗೂ ಇಂದಿರಾಗಾಂಧಿ ಅವರ ಹತ್ಯೆಯ ಸಾಕ್ಷಿಯಾಗಿದ್ದ ಕಾಂಗ್ರೆಸ್ನ ಹಿರಿಯ ಮುಖಂಡ ರಾಜೇಂದ್ರ ಕುಮಾರ್ ಧವನ್ (81) ಸೋಮವಾರ ಸಂಜೆ ಏಳು ಗಂಟೆ ಸುಮಾರಿಗೆ ನಿಧನರಾದರು.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಕಳೆದ ಮಂಗಳವಾರ ಬಿಎಲ್ ಕಪೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೇಂದ್ರದ ಮಾಜಿ ಸಚಿವರಾಗಿದ್ದ ಆರ್.ಕೆ. ಧವನ್, ಇಂದಿರಾಗಾಂಧಿ ಅವರಿಗೆ ಪರಮಾಪ್ತರಾಗಿದ್ದರು. 1962ರಲ್ಲಿ ಇಂದಿರಾಗಾಂಧಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಧವನ್, 1984ರಲ್ಲಿ ಇಂದಿರಾ ಹತ್ಯೆಯಾಗುವವರೆಗೂ ಅವರ ಜತೆಗಿದ್ದರು.
Deeply shocked at passing away of Shri RK Dhawan. Though he was ailing I had never expected that the end will come so soon. A close associate and colleague in Party and Government, he will forever be fondly remembered.
— Pranab Mukherjee (@CitiznMukherjee) 6 August 2018
1975-77ರ ಅವಧಿಯಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಸರ್ಕಾರ ನಡೆಸುವಲ್ಲಿ ಅಂಬಿಕಾ ಸೋನಿ ಹಾಗೂ ಕಮಲ್ ನಾಥ್ ಅವರೊಂದಿಗೆ ಧವನ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು.
ಈಗ ಪಾಕಿಸ್ತಾನಕ್ಕೆ ಸೇರಿರುವ ಚಿನಿಯೋಟ್ನಲ್ಲಿ 1937ರಲ್ಲಿ ಜನಿಸಿದ್ದರು. ಜೀವನದುದ್ದಕ್ಕೂ ಅವಿವಾಹಿತರಾಗಿದ್ದ ಧವನ್ 2012ರ ಜುಲೈ 16ರಂದು 74ನೇ ವಯಸ್ಸಿನಲ್ಲಿ ಅಚಲಾ ಅವರನ್ನು ವಿವಾಹವಾಗಿದ್ದರು.