ಭಾರತದಲ್ಲಿ ಸಾವಿರದ ಗಡಿ ದಾಟಿದ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ
ನವದೆಹಲಿ,ಏಪ್ರಿಲ್ 29: ಭಾರತದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಸಾವಿರದ ಗಡಿ ದಾಟಿದೆ.
ಇನ್ನು ದೇಶದಲ್ಲಿ ಸೋಂಕಿತರ ಸಂಖ್ಯೆ ಕೂಡ ಏರಿಕೆಯಾಗುತ್ತಲೇ ಇದ್ದು, ಈವರೆಗೂ 31,000 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ನಡುವಲ್ಲೇ ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿದ್ದು, 31,000 ಮಂದಿಯ ಪೈಕಿ 7,696 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಅದರಂತೆ ದೇಶದಲ್ಲಿ ಗುಣಮುಖರಾಗುತ್ತಿರುವ ಶೇಕಡಾವಾರು ಸಂಖ್ಯೆ 24.56ಕ್ಕೆ ಏರಿಕೆಯಾಗಿದೆ.
ಉದ್ದಿಮೆದಾರರ ಸಾಲ WRITE OFF: ರಾಜಕೀಯ ನಾಯಕರ ಪ್ರತಿಕ್ರಿಯೆ
ಲಾಕ್ ಡೌನ್ ಜಾರಿಯಲ್ಲಿದ್ದರೂ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕೇವಲ 24 ಗಂಟೆಗಳಲ್ಲಿ ಮಹಾಮಾರಿಗೆ 73 ಮಂದಿ ಬಲಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಸಾವಿನ ಸಂಖ್ಯೆ 1,007ಕ್ಕೆ ಏರಿಕೆಯಾಗಿದೆ.
ಈ
ನಡುವೆ
ಹೇಳಿಕೆ
ನೀಡಿರುವ
ಕೇಂದ್ರ
ಆರೋಗ್ಯ
ಸಚಿವ
ಹರ್ಷವರ್ಧನ್
ಅವರು,
ದ್ವಿಗುಣಗೊಳ್ಳುತ್ತಿರುವ
ಸೋಂಕಿತರ
ಸಂಖ್ಯೆ
ಶೇ.10.9ರಷ್ಟು
ಇಳಿಕೆಯಾಗಿದೆ
ಎಂದು
ಹೇಳಿದ್ದಾರೆ.
ನಿನ್ನೆಯಷ್ಟೇ
ಪ್ಲಾಸ್ಮಾ
ಥೆರಪಿ
ಬಗ್ಗೆ
ಹೇಳಿಕೆ
ನೀಡಿದ್ದ
ಕೇಂದ್ರ
ಸರ್ಕಾರ,
ಕೊರೊನಾಗೆ
ಈ
ವರೆಗೂ
ಯಾವುದೇ
ನಿರ್ದಿಷ್ಟ
ಚಿಕಿತ್ಸೆಗಳಿಲ್ಲ.
ಮಾರಕ
ವೈರಾಣು
ವ್ಯಾಧಿಗೆ
ಪ್ಲಾಸ್ಮಾ
ಚಿಕಿತ್ಸೆ
ಬಳಸಿಕೊಳ್ಳಬಹುದು
ಎಂದು
ಹೇಳುವುದಕ್ಕೆ
ಸಾಕಷ್ಟು
ಸಾಕ್ಷ್ಯಗಳೂ
ಇಲ್ಲ.
ಸೊಮಾಲಿಯಾದಲ್ಲಿ ಕೊರೊನಾ ಸೋಂಕಿತರ ಪತ್ತೆಯೇ ದೊಡ್ಡ ತಲೆನೋವು
ಅದಕ್ಕೆಂದೇ ಭಾರತೀಯ ವೈದ್ಯಕೀಯ ಸಂಶೋದನಾ ಸಂಸ್ಥೆಯು ಪ್ಲಾಸ್ಮಾ ಥೆರಪಿಯ ಕ್ಷಮತೆ ಬಗ್ಗೆ ರಾಷ್ಟ್ರೀಯ ಮಟ್ಟದ ಅಧ್ಯಯನ ಆರಂಭಿಸಿದೆ. ಐಸಿಎಂಆರ್ ಅಧ್ಯಯನ ಪೂರ್ಣಗೊಳ್ಳುವವರೆಗೆ ಹಾಗೂ ಬಲವಾದ ವೈಜ್ಞಾನಿಕ ಪುರಾವೆ ಸಿಗುವವರೆಗೆ, ಪ್ಲಾಸ್ಮಾ ಚಿಕಿತ್ಸೆಯನ್ನು ಕೇವಲ ಪ್ರಾಯೋಗಿಕವಾಗಿ ಹಾಗೂ ಸಂಶೋಧನೆಯ ಉದ್ದೇಶದಿಂದ ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿಕೆ ನೀಡಿದ್ದರು.