ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೇರಳ ಪ್ರವಾಹ: ಯುಎಇ ನೆರವಿನ ಮನವಿ ತಿರಸ್ಕರಿಸಿದ ಭಾರತ
ನವದೆಹಲಿ, ಆಗಸ್ಟ್ 23: ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ 100 ಮಿಲಿಯನ್ ಅಮೆರಿಕನ್ ಡಾಲರ್ ನೀಡಲು ಮುಂದಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಸರ್ಕಾರದ ಆಫರ್ ಅನ್ನು ಭಾರತ ಸರ್ಕಾರ ತಿರಸ್ಕರಿಸಿದೆ.
ಪ್ರವಾಹದಿಂದ ಆಗಿರುವ ನಷ್ಟವನ್ನು ತುಂಬಿಕೊಳ್ಳುವುದಕ್ಕೆ ಯುಎಇ ಮನವಿಯನ್ನು ಪುರಸ್ಕರಿಸಿ, ಆ ಹಣವನ್ನು ಸ್ವೀಕರಿಸುವಂತೆ ಕೇರಳ ಸರ್ಕಾರ ಕೇಂದ್ರ ಸರ್ಕಾರವನ್ನು ಮನವಿ ಮಾಡಿದರೂ ಅದನ್ನು ಕಿವಿಗೆ ಹಾಕಿಕೊಳ್ಳದ ಕೇಂದ್ರ ಸರ್ಕಾರ ಮನವಿಯನ್ನು ವಿನಮ್ರವಾಗಿಯೇ ತಿರಸ್ಕರಿಸಿದೆ.
ಕೇರಳ ಪ್ರವಾಹ: ಯುಎಇ ನೆರವು ಕೇಂದ್ರ ತಿರಸ್ಕರಿಸಿದ್ದೇಕೆ ಗೊತ್ತೇ?
ಈ ಸಂದರ್ಭದಲ್ಲಿ ವಿದೇಶಗಳಿಂದ ಹಣ ಸಹಾಯ ಪಡೆದು ಮುಲಾಜಿಗೆ ಬೀಳುವ ಸನ್ನಿವೇಶವನ್ನು ತಪ್ಪಿಸಿಕೊಳ್ಳುವ ದೀರ್ಘಕಾಲದ ನೀತಿಗೆ ಬದ್ಧವಾಗಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಸದ್ಯಕ್ಕೆ ದೇಶದ ಆಂತರಿಕ ಪ್ರಯತ್ನಗಳಿಂದಲೇ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು ಎಂದು ಯುಎಇ ನೀಡಿದ ಆಫರ್ ಅನ್ನು ವಿನಮ್ರವಾಗಿಯೇ ಭಾರತ ತಳ್ಳಿಹಾಕಿದೆ.
Comments
English summary
India rejects United Arab Emirates(UAE) government's US dollar 100 million disaster fund offer for Kerala floods.