ರೈಲ್ವೆ ಪ್ರಯಾಣ ದರದಲ್ಲಿ ಶೇ.25ರಷ್ಟು ರಿಯಾಯಿತಿ
ನವದೆಹಲಿ, ಆಗಸ್ಟ್ 28: ರಸ್ತೆ ಸಾರಿಗೆ ಮತ್ತು ವಿಮಾನಯಾನ ಪ್ರಯಾಣ ದರ ಸಮರಕ್ಕೆ ಭಾರಿ ಪೈಪೋಟಿ ನೀಡಲು ಸಜ್ಜಾಗಿರುವ ಭಾರತೀಯ ರೈಲ್ವೆ, ಶತಾಬ್ಧಿ ಎಕ್ಸ್ಪ್ರೆಸ್ , ತೇಜಸ್ ಹಾಗೂ ಗಟಿ ಮಾನ್ ಎಕ್ಸ್ಪ್ರೆಸ್ ರೈಲುಗಳ ಪ್ರಯಾಣದರದಲ್ಲಿ ಶೇ.25ರಷ್ಟು ಕಡಿತಗೊಳಿಸಲು ಸಿದ್ಧವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
5 ತಾಸು ತಡವಾದರೂ ಪಾಕಿಸ್ತಾನದಿಂದ ದೆಹಲಿ ತಲುಪಿದ ಸಂಜೋತಾ ಎಕ್ಸ್ಪ್ರೆಸ್
ಟಿಕೆಟ್ ವಹಿವಾಟಿನಲ್ಲಿ ಹೆಚ್ಚಳದ ಉದ್ದೇಶದಿಂದ ರೈಲ್ವೆ ಇಲಾಖೆ ಈ ನೂತನ ನಿರ್ಧಾರಕ್ಕೆ ಮುಂದಾಗಿದೆ ಎಂದು ತಿಳಿಸಿದ್ದಾರೆ.ಎಸಿ ಚೇರ್ ಹಾಗೂ ಎಕ್ಸಿಕ್ಯೂಟಿವ್ ಟಿಕೆಟ್ಗಳ ಮೂಲ ದರದ ಮೇಲೆ ರಿಯಾಯಿತಿ ನೀಡಲಾಗುವುದು . ಜಿಎಸ್ಟಿ , ಮುಂಗಡ ಕಾಯ್ದಿರಿಸುವಿಕೆ ಶುಲ್ಕ , ಸೂಪರ್ಫಾಸ್ಟ್ ದರ ಮತ್ತಿತರೆ ದರದಲ್ಲಿ ರಿಯಾಯಿತಿಗಳನ್ನು ರೈಲ್ವೆ ಘೋಷಿಸಿದೆ ಎಂದು ತಿಳಿದುಬಂದಿದೆ.
ನಿಗದಿ ರೈಲುಗಳ ಟಿಕೆಟ್ ದರದಲ್ಲಿ ರಿಯಾಯಿತಿ ನಿಗದಿಪಡಿಸಲು ಪ್ರಾಂತ್ಯ ಪ್ರಿನ್ಸಿಪಾಲ್ ಕಮರ್ಷಿಯಲ್ ಮ್ಯಾನೇಜರ್ಗಳಿಗೆ ರೈಲ್ವೆ ಸಚಿವಾಲಯ ಅಧಿಕಾರವನ್ನು ನೀಡಿದೆ. ಅಲ್ಲದೆ, ಹೊಸ ಯೋಜನೆ ಜಾರಿಯಾದ ನಾಲ್ಕು ತಿಂಗಳ ವರದಿಯನ್ನೂ ನೀಡಲು ಸೂಚಿಸಿದೆ.