ಸುರಕ್ಷತೆ ಮತ್ತು ಕಿರಿಕಿರಿರಹಿತ ಪ್ರಯಾಣವೇ ರೈಲ್ವೆ ಇಲಾಖೆಯ ಗುರಿ
ನವದೆಹಲಿ, ಅಕ್ಟೋಬರ್ 24 : ಭಾರತದ ರೈಲಿನಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಮತ್ತು ಕಿರಿಕಿರಿ ರಹಿತವಾದ ಪ್ರಯಾಣವನ್ನು ಕಲ್ಪಿಸುವುದೇ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ಮೂಲ ಉದ್ದೇಶವಾಗಿದೆ.
ಈ ಪ್ರಯತ್ನದ ಫಲಶ್ರುತಿಯಾಗಿ, 2014ರಿಂದೀಚೆಗೆ ಹಲವಾರು ರೈಲು ಅಪಘಾತಗಳು ಸಂಭವಿಸಿದ್ದರೂ, 2017-18ರಲ್ಲಿ ಅಪಘಾತಗಳ ಸಂಖ್ಯೆ 73ಕ್ಕೆ ಇಳಿದಿದೆ. 2013-14ರಲ್ಲಿ 118 ರೈಲು ಅಪಘಾತಗಳು ಸಂಭವಿಸಿದ್ದರೆ, 2017-18ರಲ್ಲಿ ಕೇವಲ 73 ರೈಲು ಅಪಘಾತಗಳು ಸಂಭವಿಸಿವೆ.
ಮೇಕ್ ಇನ್ ಇಂಡಿಯಾ ಕೂಸಾಗಿರುವ ಈ ರೈಲಿನಲ್ಲಿ ಏನೇನುಂಟು ಗೊತ್ತಾ?
ಇದರ ಜೊತೆಗೆ, ಹಳೆಯ ಹಳಿಗಳನ್ನು ನಿರ್ವಹಿಸುವ ಮತ್ತು ಬದಲಾಯಿಸುವ ಕ್ರಿಯೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 2013-14ರಿಂದೀಚೆಗೆ ಶೇ.50ರಷ್ಟು ಹಳೆಯ ಹಳಿಗಳನ್ನು ಬದಲಾಯಿಸಲಾಗಿದೆ. 2013-14ರಲ್ಲಿ 2,926 ಕಿ.ಮೀ.ನಷ್ಟು ಹಳಿಗಳನ್ನು ಬದಲಾಯಿಸಲಾಗಿದ್ದರೆ, 2017-18ರಲ್ಲಿ 4,405 ಕಿ.ಮೀ.ನಷ್ಟು ಹಳೆಯ ಹಳಿಗಳು ಬದಲಾಗಿ ಹೊಸ ಹಳಿಗಳು ಬಂದಿವೆ.
ಸಿಗ್ನಲ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿದ್ದರಿಂದ ದೇಶದ ರಾಜಧಾನಿ ದೇಹಲಿ ಮತ್ತು ಹೌರಾ ನಡುವೆ ಸಂಚರಿಸುವ ರಾಜಧಾನಿ ಎಕ್ಸ್ ಪ್ರೆಸ್ ಮತ್ತು ಪಟ್ನಾ ಮತ್ತು ದೆಹಲಿ-ಅಮೃತಸರ ನಡುವೆ ಸಂಚರಿಸುವ ಶತಾಬ್ದಿ ಎಕ್ಸ್ ಪ್ರೆಸ್ ರೈಲು ಸೇರಿದಂತೆ 14 ಪ್ರಮುಖ ರೈಲುಗಳ ಸಂಚಾರ ಸಮಯವನ್ನು ಕಡಿಮೆಗೊಳಿಸಲಾಗಿದೆ.
ಏನಿದು ಹೈಡ್ರೋಜನ್ ಟ್ರೈನ್? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
ಎಲ್ಲ ಅಡೆತಡೆಗಳನ್ನು ನಿವಾರಿಸಲಾಗಿದ್ದರಿಂದ ಮತ್ತು ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದರಿಂದ 2016ರಲ್ಲಿ 350 ಮೇಲ್/ಎಕ್ಸ್ ಪ್ರೆಸ್, 74 ಸೂಪರ್ ಫಾಸ್ಟ್ ರೈಲು, ರಾಜಧಾನಿ ಮತ್ತು ಶತಾಬ್ದಿ ಎಕ್ಸ್ ಪ್ರೆಸ್ ಗಳು ತಮ್ಮ ಗಮ್ಯವನ್ನು ತಲುಪಬೇಕಾದ ಅವಧಿಗಿಂತ 5ರಿಂದ 25 ನಿಮಿಷಗಳೊಳಗೆ ತಲುಪುತ್ತಿವೆ.
ಕೋಲ್ಕತ್ತಾದ ಸಂತ್ರಗಚಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಇಬ್ಬರು ಸಾವು
ಪ್ರಸ್ತುತ ವರ್ಷ, ರೈಲ್ವೆ ಇಲಾಖೆ 'ಟ್ರೈನ್ಸ್ ಅಟ್ ಎ ಗ್ಲಾನ್ಸ್ (ಟಿಎಜಿ)' ಎಂಬ ಅಖಿಲ ಭಾರತ ಸಮಗ್ರ ರೈಲ್ವೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು 2018ರ ಆಗಸ್ಟ್ 15ರಿಂದ ಜಾರಿಗೆ ಬಂದಿದೆ. ಇದರ ಜೊತೆಗೆ, ಎಲ್ಲ 17 ಪ್ರಾಂತೀಯ ರೈಲ್ವೆ ಕೇಂದ್ರಗಳು ಪ್ರತ್ಯೇಕವಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿವೆ.
2017-18ರಲ್ಲಿ ಒಟ್ಟು 90 ಹೊಸ ಸೇವೆಗಳನ್ನು ಆರಂಭಿಸಲಾಗಿದೆ. ಆಗಸ್ಟ್ 15ರಿಂದ 35 ಹೊಸ ಸೇವೆಗಳನ್ನು ಜಾರಿಗೆ ತರಲಾಗಿದೆ ಮತ್ತು 28 ಸೇವೆಗಳನ್ನು ವಿಸ್ತರಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲತೆಗಳಾಗಿವೆ.