ಗುಜರಾತ್ ಸರಣಿ ಸ್ಫೋಟದ ರೂವಾರಿ, ಮೋಸ್ಟ್ ವಾಂಟೆಡ್ ಭಯೋತ್ಪಾದಕ ಬಂಧನ
ನವದೆಹಲಿ, ಜನವರಿ 22: ಗುಜರಾತ್ ಸರಣಿ ಸ್ಫೋಟದ ರೂವಾರಿ, ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಅಬ್ದುಲ್ ಸುಭಾನ್ ಖುರೇಶಿ ಅಲಿಯಾಸ್ ತಾಖೀರ್ ನನ್ನು ಸೆರೆಹಿಡಿಯುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದೆ.
ಬಾಂಬ್ ತಯಾರಿಕೆಯಲ್ಲಿ ನಿಪುಣನಾಗಿದ್ದ ಖುರೇಶಿಯನ್ನು ಭಾರತದ ಒಸಾಮಾ ಬಿನ್ ಲಾಡೆನ್ ಎಂದೇ ಕರೆಯಲಾಗುತ್ತಿತ್ತು. 2008 ರ ಗುಜರಾತ್ ಸರಣಿ ಸ್ಫೋಟ ಮತ್ತು 2006 ರಲ್ಲಿ ಮುಂಬೈನ ರೈಲಿನಲ್ಲಿ ಬಾಂಬ್ ಸ್ಫೋಟದ ಹಿಂದಿನ ರೂವಾರಿ ಈತನೇ ಎಂಬುದು ದೃಢವಾಗಿದ್ದರೂ, ತಲೆಮರೆಸಿಕೊಂಡಿದ್ದ ಆತನನ್ನು ಹಿಡಿಯಲು ಭಾರತಕ್ಕೆ ಸಾಧ್ಯವಾಗಿರಲಿಲ್ಲ. ಕೊನೆಗೂ ದಶಕದ ನಂತರ ಆತನನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದೆ.
ಅಮರನಾಥ ಯಾತ್ರಿಗಳ ಮೇಲೆ ದಾಳಿ ಮಾಡಿದ್ದ 3 LeT ಉಗ್ರರ ಹತ್ಯೆ
ಜುಲೈ 26, 2008 ರಂದು ಗುಜರಾತಿನ ಅಹ್ಮದಾಬಾದಿನಲ್ಲಿ 21 ಕಡೆಗಳಲ್ಲಿ ಬಾಂಬ್ ಸ್ಫೋಟಿಸಲಾಗಿತ್ತು. 70 ನಿಮಿಷಗಳ ಕಾಲ ನಡೆದ ಈ ಸ್ಫೋಟದಲ್ಲಿ 56 ಮಂದಿ ಸಾವಿಗೀಡಾಗಿದ್ದರೆ, 200 ಮಂದಿ ಗಾಯಗೊಂದಿದ್ದರು.
ಜುಲೈ 11 2006 ರಂದು ಮುಂಬೈಯ ಸಬ್ ಅರ್ಬನ್ ರೈಲ್ವೆಯಲ್ಲಿ 7 ಕಡೆಗಳಲ್ಲಿ 11 ನಿಮಿಷಗಳ ಕಾಲ ನಡೆಸಿದ ಬಾಂಬ್ ದಾಳಿಯಲ್ಲಿ 200 ಜನ ಮೃತರಾಗಿದ್ದರೆ, 700 ಗಾಯಗೊಂಡಿದ್ದರು.
ಈ ಕಹಿ ಘಟನೆಗಳು ನಡೆದು ದಶಕಕ್ಕೂ ಹೆಚ್ಚು ವರ್ಷಗಳಾದ ಮೇಲೆ ಕೊನೆಗೂ ಕುಖ್ಯಾತ ಭಯೋತ್ಪಾದಕನನ್ನು ಸೆರೆಹಿಡಿಯಲಾಗಿದೆ. ಸಿಮಿ(Students Islamic Movement of India) ಮತ್ತು ಇಂದಿಯನ್ ಮುಜಾಹಿದ್ದಿನ್ ಸಂಘಟನೆಯ ಸದಸ್ಯನಾಗಿದ್ದ ಖುರೇಶಿ, ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲೂ ಇದ್ದ.