ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕಿತ್ತು : ಜಡ್ಜ್
ಬೆಂಗಳೂರು, ಡಿಸೆಂಬರ್ 13: 'ಭಾರತವನ್ನು ಮತ್ತೊಂದು ಇಸ್ಲಾಂ ರಾಷ್ಟ್ರವನ್ನಾಗಿಸಲು ಯಾರು ಕೂಡಾ ಯತ್ನಿಸಬಾರದು' ಎಂದು ಮೇಘಾಲಯ ಹೈಕೋರ್ಟಿನ ಜಡ್ಜ್ ಸುದೀಪ್ ರಂಜನ್ ಹೇಳಿದ್ದಾರೆ.
ಬಹಿರಂಗವಾಗಿ ಡೊನಾಲ್ಡ್ ಟ್ರಂಪ್ ಕಾಲೆಳೆದ ಅಸ್ಸಾಂ ಹುಡುಗಿ!
ಅಸ್ಸಾಂನ ಎನ್ ಆರ್ ಸಿ ಅಪ್ಡೇಟ್ ಪ್ರಕ್ರಿಯೆ ಬಗ್ಗೆ ಕೂಡಾ ಪ್ರತಿಕ್ರಿಯಿಸಿದ ನ್ಯಾ. ಸುದೀಪ್, ಇಂಥ ಪ್ರಕ್ರಿಯೆಗೆ ದೋಷರೂಪಿತವಾಗಿದೆ, ನಿಜವಾದ ಮೂಲ ಭಾರತೀಯ ಹೊರಗುಳಿಯಲಿದ್ದು, ವಿದೇಶಿಯರು, ಭಾರತೀಯರಾಗಿ ಪಟ್ಟಿ ಸೇರುತ್ತಿದ್ದಾರೆ ಎಂದರು.
ಅಸ್ಸಾಂ: ಎನ್ ಆರ್ ಸಿ ಆಕ್ಷೇಪ, ಅಹವಾಲಿಗೆ ಡಿ. 15 ಕೊನೆ ದಿನ: ಸುಪ್ರೀಂ
ಹಿಂದು, ಸಿಖ್, ಜೈನ, ಬೌದ್ಧ, ಕ್ರೈಸ್ತ, ಪಾರ್ಸಿ, ಖಾಸಿ, ಗರೊ ಹೀಗೆ ಎಲ್ಲರ ರಕ್ಷಣೆ ಮಾಡಲು ಬೇಕಾದ ಸೂಕ್ತ ಕಾನೂನು ತಿದ್ದುಪಡಿಯನ್ನು ಮೋದಿ ಸರ್ಕಾರ ತರುವ ಭರವಸೆ ಇದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂಡ ಬರುವ ಭಾರತೀಯ ಮೂಲದವರನ್ನು ಸ್ವಾಗತಿಸಬೇಕಿದೆ ಎಂದರು.
ಬರಾಕ್ ಕಣಿವೆ ಹಾಗೂ ಅಸ್ಸಾಂ ಕಣಿವೆಯ ಜನರು ಒಗ್ಗೂಡಲು ಕಾರಣ ನಮ್ಮ ಸಂಸ್ಕೃತಿ, ಸಂಪ್ರದಾಯ ಎನ್ನಬಹುದು. ಭಾಷೆ, ಧರ್ಮದ ಹೆಸರಿನಲ್ಲಿ ಯಾರೂ ಕೂಡಾ ಕಚ್ಚಾಡಬಾರದು ಎಂದು ಹೇಳಿದರು.
ಪಾಕಿಸ್ತಾನ ತನ್ನ ದೇಶವನ್ನು ಇಸ್ಲಾಂ ರಾಷ್ಟ್ರ ಎಂದು ಕರೆದುಕೊಳ್ಳುವುದಾದರೆ, ಭಾರತವನ್ನು ಹಿಂದು ರಾಷ್ಟ್ರ ಎಂದು ಕರೆಯುವುದರಲ್ಲಿ ತಪ್ಪೇನಿಲ್ಲ. ಆದರೆ, ಭಾರತ ಜಾತ್ಯಾತೀತ ರಾಷ್ಟ್ರವಾಗಿ ಮುಂದುವರಿದೆ. ನಾನು ಮುಸ್ಲಿಂ ಸೋದರ, ಸೋದರಿಯರ ವಿರೋಧಿಯಲ್ಲ, ಎಲ್ಲರು ಶಾಂತಿಯುತವಾಗಿ ಬಾಳಬೇಕು ಎಂದರು.