ಈ ಬಾರಿ ಮುಂಗಾರು ಅವಧಿಯಲ್ಲಿ ಸಾಮಾನ್ಯ ಮಳೆ; IMD
ನವದೆಹಲಿ, ಸೆಪ್ಟೆಂಬರ್ 30: ಈ ಬಾರಿ ಮುಂಗಾರು ಅವಧಿಯಲ್ಲಿ, ಅಂದರೆ ಜೂನ್ ತಿಂಗಳಿನಿಂದ ಸೆಪ್ಟೆಂಬರ್ವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ ದೇಶದಲ್ಲಿ ಸಾಮಾನ್ಯ ಮಟ್ಟದ ಮಳೆಯಾಗಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಗುರುವಾರ ಮಾಹಿತಿ ನೀಡಿದೆ.
ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ದೇಶದ ದಕ್ಷಿಣ ರಾಜ್ಯಗಳಲ್ಲಿ ಈಶಾನ್ಯ ಮುಂಗಾರು ಅವಧಿಯಲ್ಲಿ ಕೂಡ ಸಾಮಾನ್ಯ ಮಳೆ ದಾಖಲಾಗಲಿದೆ ಎಂದು ಮಾಹಿತಿ ನೀಡಿದೆ.
ಚಂಡಮಾರುತ ದುರ್ಬಲವಾದರೂ ಈ ರಾಜ್ಯಗಳಲ್ಲಿ ಅ.3ರವರೆಗೂ ಭಾರೀ ಮಳೆ
ಈ ಮುಂಗಾರು ಋತುವಿನಲ್ಲಿ, ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ಒಟ್ಟಾರೆಯಾಗಿ 87 ಸೆ.ಮೀ.ನಷ್ಟು ದೀರ್ಘಾವಧಿಯ ಸರಾಸರಿ ಮಳೆ ದಾಖಲಾಗಿದೆ. ನೈಋತ್ಯ ಮುಂಗಾರು ಅವಧಿಯಲ್ಲಿ ಸಾಮಾನ್ಯ ಮಟ್ಟದಲ್ಲಿ ಮಳೆ ದಾಖಲಾಗಿದೆ. ಮುಂಗಾರು ದೀರ್ಘಾವಧಿ ಮಳೆ (ದೀರ್ಘಾವಧಿ ಸರಾಸರಿ ಮಳೆ ಪ್ರಮಾಣದ 96- 106%) ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ತಿಳಿಸಿದ್ದಾರೆ.
ಸತತ ಮೂರನೇ ವರ್ಷ ದೇಶದಲ್ಲಿ ಸಾಮಾನ್ಯ ಮಳೆ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ದಾಖಲಿಸಿದೆ. 2019 ಹಾಗೂ 2020ರಲ್ಲಿ ಕೂಡ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ದಾಖಲಾಗಿದೆ ಎಂದು ತಿಳಿಸಿದೆ.
ಅಕ್ಟೋಬರ್
6ರಂದು
ಮುಂಗಾರು
ಅಂತ್ಯ
ಸೂಚನೆ:
ಅಕ್ಟೋಬರ್
6ರ
ವೇಳೆಗೆ
ದೇಶದ
ವಾಯವ್ಯ
ಭಾಗದಲ್ಲಿ
ನೈಋತ್ಯ
ಮುಂಗಾರು
ಅಂತ್ಯವಾಗಲು
ಹವಾಮಾನ
ಪರಿಸ್ಥಿತಿ
ಅನುಕೂಲಕರವಾಗಿದೆ
ಎಂದು
ಭಾರತೀಯ
ಹವಾಮಾನ
ಇಲಾಖೆ
ತಿಳಿಸಿದೆ.
ಇದಾಗ್ಯೂ
ಶಾಹೀನ್
ಚಂಡಮಾರುತ
ಪ್ರಭಾವದಿಂದ
ದೇಶದ
ಹಲವೆಡೆ
ಮಳೆಯಾಗಲಿದೆ.
ಶಾಹೀನ್
ಚಂಡಮಾರುತದ
ಪರಿಣಾಮದಿಂದ
ಗುಜರಾತ್,
ಮಹಾರಾಷ್ಟ್ರ,
ಕೊಂಕಣ,
ಮರಾಠವಾಡ
ಮತ್ತು
ಗೋವಾ
ಭಾಗದಲ್ಲಿ
ವಿಪರೀತ
ಮಳೆಯಾಗಲಿದೆ
ಎಂದು
ತಿಳಿಸಿದೆ.
ಅಕ್ಟೋಬರ್ 6ರಂದು ವಾಯವ್ಯ ಭಾರತದಲ್ಲಿ ಮುಂಗಾರು ಅಂತ್ಯ ಸೂಚನೆ
ಸೆಪ್ಟೆಂಬರ್
ತಿಂಗಳಿನಲ್ಲಿ
ಹೆಚ್ಚಿನ
ಮಳೆ:
ದೇಶದಲ್ಲಿ
ಈ
ಬಾರಿ
ಸೆಪ್ಟೆಂಬರ್
ತಿಂಗಳಲ್ಲಿ
ವಾಡಿಕೆಗಿಂತ
27%
ಹೆಚ್ಚಿನ
ಮಳೆಯಾಗಿದೆ.
ಬಂಗಾಳ
ಕೊಲ್ಲಿಯಲ್ಲಿ
ರೂಪುಗೊಂಡಿರುವ
ವಾಯುಭಾರ
ಕುಸಿತ
ಮಳೆ
ಪ್ರಮಾಣದ
ಏರಿಕೆಗೆ
ಕಾರಣವಾಗಲಿದೆ.
ಇದರಿಂದಾಗಿ
ಸಾಮಾನ್ಯವಾಗಿ
ಸೆಪ್ಟೆಂಬರ್
17ರಿಂದ
ಕಡಿಮೆಯಾಗಬೇಕಿದ್ದ
ಮಳೆ
ಇನ್ನೂ
ಮುಂದುವರೆಯಲಿದೆ
ಎಂದು
ಹವಾಮಾನ
ಇಲಾಖೆ
ಮಾಹಿತಿ
ನೀಡಿದೆ.
ಈ
ಬಾರಿ
ಸೆಪ್ಟೆಂಬರ್
1-20ರವರೆಗೆ
ದೇಶದ
ಎಲ್ಲೆಡೆಯೂ
ಅಧಿಕ
ಮಳೆಯಾಗಿದೆ.
ಮಧ್ಯ
ಭಾರತದಲ್ಲಿ
ವಾಡಿಕೆಗಿಂತ
71%
ಅಧಿಕ
ಮಳೆಯಾಗಿದ್ದು,
ನೈಋತ್ಯ
ಭಾರತದಲ್ಲಿ
26%
ಅಧಿಕ
ಮಳೆ
ದಾಖಲಾಗಿದೆ.
ಈ
ಅಕ್ಟೋಬರ್
ಮಧ್ಯದವರೆಗೂ
ಮಳೆ
ಮುಂದುವರೆಯಲಿದ್ದು,
ಆನಂತರ
ಮುಂಗಾರು
ಅಂತ್ಯವಾಗಲಿದೆ
ಎಂದು
ಹವಾಮಾನ
ಇಲಾಖೆ
ಮುನ್ಸೂಚನೆ
ನೀಡಿದೆ.
ಚಂಡಮಾರುತ ಪ್ರಭಾವದಿಂದಾಗಿ ಅಕ್ಟೋಬರ್ 3ರವರೆಗೂ ಕೆಲವು ರಾಜ್ಯಗಳಲ್ಲಿ ಮಳೆ ಮುಂದುವರೆಯುವುದಾಗಿ ತಿಳಿಸಿದೆ. ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಸೆಪ್ಟೆಂಬರ್ 30ರಿಂದ ಆರಂಭಗೊಂಡು ಅಕ್ಟೋಬರ್ 2ರವರೆಗೂ ಅಧಿಕ ಮಳೆಯಾಗಲಿದೆ ಎಂದು ತಿಳಿಸಿದೆ.