ದೇಶದ ಅಭಿವೃದ್ಧಿಗಾಗಿ ಮುಂದಿನ 25 ವರ್ಷಗಳನ್ನು ಮೀಸಲಿಡಿ: ಪ್ರಧಾನಿ ಮೋದಿ
ನವದೆಹಲಿ, ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಮುಂಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂಬತ್ತನೇ ಬಾರಿಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು.
ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಯುವಜನರು ತಮ್ಮ ಜೀವನದ ಮುಂದಿನ 25 ವರ್ಷಗಳನ್ನು ರಾಷ್ಟ್ರದ ಅಭಿವೃದ್ಧಿಗಾಗಿ ಮೀಸಲಿಡುವಂತೆ ಒತ್ತಾಯಿಸಿದರು. ತಮ್ಮ ಭಾಷಣದಲ್ಲಿ ''ಭಾರತವು ಹೊಸ ಹಾದಿಯನ್ನು, ನವೀಕೃತ ಶಕ್ತಿಯೊಂದಿಗೆ ಹೊಸ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಐತಿಹಾಸಿಕ ದಿನವಾಗಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಏನನ್ನು ಕನಸು ಕಂಡಿದ್ದಾರೋ ಅದನ್ನು ಸಾಧಿಸುವ ದೃಷ್ಟಿಯೊಂದಿಗೆ ನಾವು ಕೆಲಸ ಮಾಡಬೇಕು'' ಎಂದು ಕರೆ ನೀಡಿದರು.
ಮನೆ ಮನೆ ಮೇಲೆ ತಿರಂಗಾ, ಪ್ರಮಾಣ ಪತ್ರ ಡೌನ್ ಲೋಡ್ ಮಾಡ್ಕೊಳ್ಳಿ!
ಸ್ವಾತಂತ್ರ್ಯದ 100 ವರ್ಷಗಳ ಹೊತ್ತಿಗೆ, ಮುಂದಿನ 25 ವರ್ಷಗಳ ಕಾಲ ನಾವು 5 ಸಂಕಲ್ಪಗಳ ಮೇಲೆ ಕೇಂದ್ರೀಕರಿಸಬೇಕಾಗಿದೆ. ಅವುಗಳೆಂದರೆ 1. ವಿಕ್ಷಿತ್ ಭಾರತ್ (ಅಭಿವೃದ್ಧಿ ಹೊಂದಿದ ಭಾರತ), 2. ನಮ್ಮಲ್ಲಿರುವ ಪ್ರತಿಯೊಂದು ಗುಲಾಮಿ ತೆಗೆದುಹಾಕುವುದು (ಗುಲಾಮಗಿರಿ), 3. ನಮ್ಮ ಭವ್ಯ ಪರಂಪರೆಯ ಹೆಮ್ಮೆಯ ಕೆಲಸ, 4. ಎಲ್ಲರಲ್ಲಿ ಏಕತೆಯನ್ನು ಖಾತ್ರಿಪಡಿಸುವುದು, 5. ನಮ್ಮ ಮೂಲಭೂತ ಕರ್ತವ್ಯಗಳನ್ನು ಪೂರೈಸುವುದು ಎಂದು ಪ್ರಧಾನಿ ಮೋದಿ ಹೇಳಿದರು.
ಕನಸುಗಳು ದೊಡ್ಡದಾದಾಗ ಶ್ರಮವೂ ಅಷ್ಟೇ ಶ್ರಮದಾಯಕವಾಗಿರುತ್ತದೆ ಎಂದು ಹೇಳಿದ ಪ್ರಧಾನಿ, ಮುಕ್ತ ಭಾರತದ ಕನಸು ಕಂಡ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಸಂಕಲ್ಪ ಮತ್ತು ಆ ಸಂಕಲ್ಪದಿಂದ ನಾವು ಸ್ಪೂರ್ತಿ ಪಡೆಯಬೇಕು. ರಾಷ್ಟ್ರದ ಅಭಿವೃದ್ಧಿಗಾಗಿ ಅವರ ಜೀವನದ ಮುಂದಿನ 25 ವರ್ಷಗಳನ್ನು ಮುಡಿಪಾಗಿಡಲು ನಾನು ಯುವಕರನ್ನು ಒತ್ತಾಯಿಸುತ್ತೇನೆ. ನಾವು ಇಡೀ ಮಾನವಕುಲದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ. ಅದು ಭಾರತದ ಶಕ್ತಿಯಾಗಿರುತ್ತದೆ ಎಂದರು.
ಜಗತ್ತು ಭಾರತವನ್ನು ಹೆಮ್ಮೆಯಿಂದ ನೋಡುತ್ತಿದೆ
ನಾಗರಿಕರು ಒಗ್ಗೂಡಿದ ಉದಾಹರಣೆಯಾಗಿ ಕೋವಿಡ್-19 ಸಾಂಕ್ರಾಮಿಕವು ಒಂದು ಉದಾಹರಣೆಯಾಗಿದೆ. ವೈದ್ಯರನ್ನು ಬೆಂಬಲಿಸುವುದರಿಂದ ಹಿಡಿದು ಸಂಶೋಧನೆಯನ್ನು ಮುಂದೂಡುವವರೆಗೆ ಲಸಿಕೆಗಳನ್ನು ದೂರದ ಭಾಗಗಳಿಗೆ ಕೊಂಡೊಯ್ಯುವವರೆಗೆ ನಾವು ಒಟ್ಟಿಗೆ ನಿಂತಿದ್ದೇವೆ. ಜಗತ್ತು ಇಂದು ಭಾರತವನ್ನು ಹೆಮ್ಮೆಯಿಂದ, ಭರವಸೆಯಿಂದ ಮತ್ತು ಸಮಸ್ಯೆ ಪರಿಹಾರಕನಾಗಿ ನೋಡುತ್ತಿದೆ. ಜಗತ್ತು ಭಾರತವನ್ನು ಆಕಾಂಕ್ಷೆಗಳನ್ನು ಪೂರೈಸುವ ತಾಣವಾಗಿ ನೋಡುತ್ತದೆ. ಭಾರತದ ಆತ್ಮದ ಬಗ್ಗೆ ನನ್ನ ತಿಳುವಳಿಕೆ, ನವಭಾರತದ ಬೆಳವಣಿಗೆಗಾಗಿ ನಾವು ರಾಷ್ಟ್ರದಾದ್ಯಂತ ಅಂತರ್ಗತ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ನನಗೆ ಅರಿವಾಯಿತು. ಇದು ಮಹಾತ್ಮ ಗಾಂಧಿಯವರಿಂದ ಪ್ರಿಯವಾದ ದೃಷ್ಟಿಕೋನವಾಗಿದೆ ಮೋದಿ ಹೇಳಿದರು.
ಸಿಯಾಚಿನ್ನಲ್ಲಿ 38 ವರ್ಷಗಳ ನಂತರ ಯೋಧನ ಅವಶೇಷ ಪತ್ತೆ!
ಆಡಳಿತದಲ್ಲಿ ಸ್ಥಿರತೆ ಇದ್ದಾಗ ತ್ವರಿತ ನಿರ್ಧಾರ
ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ರಾಷ್ಟ್ರ ಪರವಾದ ನೀತಿಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ಅಭಿವೃದ್ಧಿಯನ್ನು ಕೊನೆಯ ಮೈಲಿಗೆ ಕೊಂಡೊಯ್ಯಲು ಮೂಲಾಧಾರವಾಯಿತು. ಆಡಳಿತದಲ್ಲಿ ಸ್ಥಿರತೆ ಇದ್ದಾಗ ತ್ವರಿತ ನಿರ್ಧಾರ ತೆಗೆದುಕೊಳ್ಳುವುದು, ರಾಷ್ಟ್ರದ ಅಭಿವೃದ್ಧಿಗೆ ಜನ ಪಾಲುದಾರಿಕೆಯ ಮನೋಭಾವವು ಮೇಲುಗೈ ಸಾಧಿಸುತ್ತದೆ. ನಾವು 75 ವರ್ಷಗಳನ್ನು ಆಚರಿಸುತ್ತಿರುವಾಗ ನಾವು ಹೊಸ ಗಮನ ಮತ್ತು ಮುಂದಿನ 25 ವರ್ಷಗಳವರೆಗೆ ಸಂಕಲ್ಪ ಮಾಡಬೇಕಾಗಿದೆ. 130 ಕೋಟಿ ಭಾರತೀಯರ ಶಕ್ತಿ ಮತ್ತು ನಿರ್ಣಯದ ಮೂಲಕ ಇದನ್ನು ಸಾಧ್ಯವಾಗಿಸಬಹುದು ಮೋದಿ ತಿಳಿಸಿದರು.
ಮಹಿಳೆಯರ ಶಕ್ತಿಯಿಂದ ಭಾರತಕ್ಕೆ ಹೆಮ್ಮೆ
ಭಾರತದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಪ್ರಧಾನಿ ಮೋದಿ ಸ್ಮರಿಸಿದರು. ರಾಣಿ ಲಕ್ಷ್ಮೀಬಾಯಿ, ಝಲ್ಕರಿ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಬೇಗನ್ ಹಜರತ್ ಮಹಾ ಭಾರತದ ಮಹಿಳೆಯರ ಶಕ್ತಿಯನ್ನು ನೆನಪಿಸಿಕೊಂಡಾಗ ಪ್ರತಿ ಭಾರತವೂ ಹೆಮ್ಮೆಯಿಂದ ಬೀಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಕೆಂಪು ಕೋಟೆಯಲ್ಲಿ ತಮ್ಮ ಭಾಷಣದ ಮೊದಲು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜವನ್ನು ಹಾರಿಸಿದರು. ಇದಾದ ನಂತರ ಹೆಲಿಕಾಪ್ಟರ್ಗಳಿಂದ ಹೂವಿನ ದಳಗಳ ಸುರಿಮಳೆಯಾಯಿತು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ರಾಜ್ಘಾಟ್ಗೆ ಭೇಟಿ ನೀಡಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು.
ತರಬೇತಿ ಪಡೆದ ಭದ್ರತಾ ಸಿಬ್ಬಂದಿ ನಿಯೋಜನೆ
ಕೆಂಪುಕೋಟೆಯ ಪ್ರತಿ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಫೇಸ್ ರೆಕಗ್ಸಿಷನ್ ಸಿಸ್ಟಮ್ ಕ್ಯಾಮೆರಾಗಳೊಂದಿಗೆ ಹಲವು ಭದ್ರತಾ ಮಾನದಂಡಗಳೊಂದಿಗೆ ಸ್ಥಾಪಿಸಲಾಗಿತ್ತು. ಧ್ವಜಾರೋಹಣದ ವೇಳೆ ಆವರಣವು ಮಂಗಗಳಿಂದ ಮುಕ್ತವಾಗಿರುವುದಕ್ಕಾಗಿ ಭದ್ರತಾ ಸಿಬ್ಬಂದಿ ತರಬೇತಿ ಪಡೆದ ಕ್ಯಾಚರ್ಗಳನ್ನು ನಿಯೋಜಿಸಲಾಗಿತ್ತು.