ಆಶೀರ್ವಾದ ಪಡೆಯಲು ಹಾವಿನ ಹೆಡೆಯ ಮೇಲೆ ಕಂದಮ್ಮ: ಮುಂದೇನಾಯ್ತು?
ರಾಯಪುರ, ಅ 17: ಜೀವಂತ ನಾಗರಹಾವಿನ ಆಶೀರ್ವಾದ ಪಡೆಯಲು ಹೋದ ದಂಪತಿಗಳ ಮೂರ್ಖತನದಿಂದ, ಐದು ತಿಂಗಳ ಕಂದಮ್ಮ ಸಾವನ್ನಪ್ಪಿದ ಘಟನೆ, ಛತ್ತೀಸಗಢದ ರಾಜಧಾನಿ ರಾಯಪುರ ಬಳಿಯ ಹಳ್ಳಿಯಿಂದ ವರದಿಯಾಗಿದೆ.
ರಾಯಪುರದಿಂದ 72ಕಿ.ಮೀ ದೂರದ ರಜ್ನಾನಂದಗಾವ್ ಎನ್ನುವ ಹಳ್ಳಿಯ ದಂಪತಿಗಳು, ಹಾವಾಡಿಗನೊಬ್ಬನ ಮಾತನ್ನು ನಂಬಿ ತಮ್ಮ ಮಗುವನ್ನು ಕಳೆದುಕೊಂಡಿದ್ದಾರೆ. ಮಗುವಿಗೆ ಪದೇಪದೇ ಆರೋಗ್ಯದ ಸಮಸ್ಯೆ ಎದುರಾಗುತ್ತಿದ್ದರಿಂದ, ಬಿಲ್ಲುರಾಮ್ ಎನ್ನುವ ಹಾವಾಡಿಗನ ಬಳಿಗೆ ದಂಪತಿಗಳು ಬಂದಿದ್ದಾರೆ.
ವೈರಲ್ ವಿಡಿಯೋ: ಮೀಟಿಂಗ್ ನಡೆವಾಗ ಬಿತ್ತು ಐದಡಿ ಉದ್ದದ ಹಾವು!
ನಾಗಪೂಜೆಯನ್ನು ಮಾಡಿದರೆ ನಿಮ್ಮ ಮಗುವಿನ ಆರೋಗ್ಯದ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹಾವಾಡಿಗ ಹೇಳಿದ ನಂತರ, ನಾಗಪೂಜೆಯನ್ನು ದಂಪತಿಗಳು ನೆರವೇರಿಸಿದ್ದಾರೆ. ನಂತರ, ಜೀವಂತ ನಾಗರಹಾವಿನ ಆಶೀರ್ವಾದ ಪಡೆಯಲು ಸೂಚಿಸಿದ್ದಾನೆ.
ತನ್ನ ಬಳಿಯಿರುವ ನಾಗರಹಾವಿನ ಹೆಡೆಯ ಮೇಲೆ, ಮಗುವಿನ ತಲೆಯನ್ನು ಇಟ್ಟು ಆಶೀರ್ವಾದ ಪಡೆದುಕೊಳ್ಳಿ ಎನ್ನುವ ಹಾವಾಡಿಗನ ಸೂಚನೆಯಂತೆ ದಂಪತಿಗಳು ನಡೆದುಕೊಂಡಿದ್ದಾರೆ. ಆದರೆ, ನಾಗಪ್ಪ ಮಗುವನ್ನು ಕಚ್ಚಿ ಬಿಟ್ಟಿದೆ.
ಮೈಜುಮ್ಮೆನಿಸ್ಸುವ ಎರಡು ತಲೆಯ ಹಾವು: ವೈರಲ್ ವಿಡಿಯೋ
ಇದರಿಂದ ಗಾಭರಿಗೊಳಗಾದ ದಂಪತಿಗಳಿಗೆ ಇದೊಂದು ಹಲ್ಲುಕಿತ್ತ ನಾಗರಹಾವು ಎಂದು ದಂಪತಿಗಳನ್ನು ಹಾವಾಡಿಗ ಸಾಗಹಾಕಿದ್ದಾನೆ. ಆದರೆ, ಇದಾದ ಒಂದು ಗಂಟೆಯಲ್ಲಿ ಮಗುವಿಗೆ ಉಸಿರಾಟದ ತೊಂದರೆ ಉಂಟಾಗಿದೆ.
ಮಂಡೆಕೋಲು ಗ್ರಾ.ಪಂ. ಕಚೇರಿಗೆ ಬಂದ ಹತ್ತು ಅಡಿ ಉದ್ದದ ಕಾಳಿಂಗ ಸರ್ಪ
ಕೂಡಲೇ, ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ದಂಪತಿಗಳು ಹೋಗುವಷ್ಟರಲ್ಲಿ ಮಗುವಿನ ದೇಹಕ್ಕೆ ವಿಷ ಸಂಪೂರ್ಣವಾಗಿ ಆವರಿಸಿ, ಮಗು ಸಾವನ್ನಪ್ಪಿದೆ. ಪೊಲೀಸರು, ಹಾವಾಡಿಗನನ್ನು ಬಂಧಿಸಿದ್ದಾರೆ. ಆದರೆ, ಮೂಢನಂಬಿಕೆಯಿಂದ ಮಗು ಕಳೆದುಕೊಂಡ ದಂಪತಿಗಳಿಗೆ, ತಮ್ಮ ಮಗು ವಾಪಸ್ ಬರುತ್ತಾ...