ರಕ್ಷಾ ಬಂಧನ ಸಂಭ್ರಮಕ್ಕೆ ಸಾಕ್ಷಿಯಾದ ಅಖಂಡ ಭಾರತ
ಬೆಂಗಳೂರು, ಆಗಸ್ಟ್ 18: ದೇಶದಲ್ಲಿ ಗುರುವಾರ ರಕ್ಷಾ ಬಂಧನ ಸಂಭ್ರಮ. ಸಹೋದರಿಯರಾದ ಸಾಕ್ಷಿ ಮಲ್ಲಿಕ್ ಮತ್ತು ಪಿ ವಿ ಸಿಂಧು ಅವರೇ ದೇಶಕ್ಕೆ ಒಲಿಂಪಿಕ್ಸ್ ಪದಕದ ಕೊಡುಗೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಅನೇಕರು ರಾಖಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹ ರಕ್ಷಾ ಬಂಧನದಲ್ಲಿ ಪಾಲ್ಗೊಂಡರು. ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಹ ಹಬ್ಬದ ಸಡಗರಕ್ಕೆ ಸಾಕ್ಷಿಯಾದರು.[ದೇಶ ಕಾಯುವ ವೀರ ಯೋಧರಿಗೆ ರಕ್ಷಾ ಬಂಧನ ಸಂಭ್ರಮ]
ಇಡೀ ಭಾರತದಾದ್ಯಂತ ಸಹೋದರರಿಗೆ ರಾಖಿ ಕಟ್ಟಿದ ಸಹೋದರಿಯರು ಅಣ್ಣಂದಿರ ಆಶಿರ್ವಾದ ಪಡೆದರು. ಗಡಿ ಕಾಯುವ ಯೋಧರಿಗೂ ರಾಖಿ ಕಟ್ಟಿದ ಮಹಿಳೆಯರು ದೇಶದ ಒಳಿತಿಗೆ ಪ್ರಾರ್ಥಿಸಿದರು. ರಕ್ಷಾ ಬಂಧನದ ಸಂಭ್ರಮವನ್ನು ವಿತ್ರಗಳಲ್ಲಿ ನೋಡಿ(ಪಿಟಿಐ ಚಿತ್ರಗಳು)....
ಸೈನಿಕರಿಗೆ ರಾಖಿ
ದೇಶದ ಗಡಿ ಕಾಯುವ ಸೈನಿಕರಿಗೆ ರಾಖಿ ಕಟ್ಟಿದ ಮಹಿಳೆಯರು
ಪ್ರಧಾನಿ ಮೋದಿ
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿಗೆ ರಾಖಿ ಕಟ್ಟಿದ ಬಾಲಕಿ.
ಅಖಿಲೇಶ್ ಯಾದವ್
ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗೆ ರಾಖಿ ಬಂಧನ
ರಾಂಚಿ
ರಾಂಚಿಯಲ್ಲಿ ರಾಖಿ ಹಬ್ಬ ಆಚರಿಸಿದ ಸಹೋದರ ಸಹೋದರಿ.
ಅಣ್ಣ-ತಂಗಿಯರ ಈ ಬಂಧ
ಅಮೃತಸರದಲ್ಲಿ ಕಂಡು ಬಂದ ರಕ್ಷಾ ಬಂಧನದ ದೃಶ್ಯ ಅಣ್ಣ-ತಂಗಿಯರ ಬಾಂಧವ್ಯವನ್ನು ಸಾರುತ್ತಿತ್ತು.