ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಧವ್ಯದ ಹಬ್ಬ, ರಕ್ಷಾಬಂಧನ ಸಂಭ್ರಮಾಚರಣೆ

By Mahesh
|
Google Oneindia Kannada News

ಬೆಂಗಳೂರು, ಆ.10: ಸಹೋದರ ಮತ್ತು ಸಹೋದರಿಯರ ನಡುವಿನ ಅನುಬಂಧವನ್ನು ಹೆಚ್ಚಿಸುವ ರಕ್ಷಾ ಬಂಧನ ಹಬ್ಬವನ್ನು ಭಾನುವಾರ ದೇಶದೆಲ್ಲೆಡೆ ಆಚರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೆಹಲಿಯ ಶಾಲಾ ಮಕ್ಕಳು ರಾಖಿ ಕಟ್ಟುವ ಮೂಲಕ ಸಂಭ್ರಮಪಟ್ಟರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ದೇಶದ ಜನತೆಗೆ ರಕ್ಷಾ ಬಂಧನ ಹಬ್ಬದ ಶುಭ ಹಾರೈಸಿದ್ದಾರೆ.

ರಕ್ಷಾ ಬಂಧನವನ್ನು ಆಚರಿಸುವ ರಾಖಿ ಶ್ರಾವಣ ಹುಣ್ಣಿಮೆ ಭಾರತದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ರಾಖಿ ಕಟ್ಟುವುದರ ಜೊತೆಗೆ ಈ ಪೌರ್ಣಮಿಯಂದು ಹಲವಾರು ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ. ಉತ್ತರ ಭಾರತದಲ್ಲಿ ರಾಖಿ ಪೂರ್ಣಿಮೆಯನ್ನು ಕಜರಿ ಪೂರ್ಣಿಮೆಯೆಂದು ಸಹ ಕರೆಯುತ್ತಾರೆ.

ಈ ಸಮಯದಲ್ಲಿ ಗೋಧಿ ಮತ್ತು ಬಾರ್ಲಿಯನ್ನು ಬಿತ್ತಲಾಗುತ್ತದೆ ಮತ್ತು ಭಗವತಿ ದೇವಿಯನ್ನು ಆರಾಧಿಸಲಾಗುತ್ತದೆ. ಪಶ್ಚಿಮ ಭಾರತದಲ್ಲಿ ಇದನ್ನು ನಾರಿಯಲ್ ಪೂರ್ಣಿಮಾ ಎಂದು ಆಚರಿಸುತ್ತಾರೆ. ಅಂದು ಸಮುದ್ರ ದೇವನಾದ ವರುಣನಿಗೆ ತೆಂಗಿನ ಕಾಯಿಯನ್ನು ಅರ್ಪಿಸಲಾಗುತ್ತದೆ. ಇನ್ನು ದಕ್ಷಿಣ ಭಾರತದಲ್ಲಿ ಇದನ್ನು ಶ್ರಾವಣ ಪೌರ್ಣಮಿಯೆಂದು ಆಚರಿಸಲಾಗುತ್ತದೆ. ಈ ದಿನವು ಅತ್ಯಂತ ಮಂಗಳಕರವೆಂದು ಪ್ರತೀತಿ. ಈ ಬಾರಿ ಬ್ರಾಹ್ಮಣ ಪವಿತ್ರ ಹಬ್ಬ ಎನಿಸಿರುವ ಉಪಕರ್ಮ ಕೂಡಾ ಇದೇ ದಿನ ಎಲ್ಲೆಡೆ ಆಚರಿಸಲಾಗಿದೆ. ಹಬ್ಬದ ಚಿತ್ರಗಳನ್ನು ಮುಂದೆ ನೋಡಿ..

ಮಕ್ಕಳಿಂದ ರಾಖಿ ಕಟ್ಟಿಸಿಕೊಂಡ ಮೋದಿ

ಮಕ್ಕಳಿಂದ ರಾಖಿ ಕಟ್ಟಿಸಿಕೊಂಡ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಿದ ಪುಟಾಣಿಗಳು PTI Photo/PIB

ದೀದಿಯಿಂದ ಶಾರುಖ್ ಗೆ ರಾಖಿ

ದೀದಿಯಿಂದ ಶಾರುಖ್ ಗೆ ರಾಖಿ

ಕೋಲ್ಕತ್ತಾ: ಕಿಂಗ್ ಖಾನ್ ಶಾರುಖ್ ಗೆ ನಿನ್ನೆಯೇ ರಾಖಿ ಕಟ್ಟಿದ ದೀದಿ ಮಮತಾ ಬ್ಯಾನರ್ಜಿ

ಆರೆಸ್ಸೆಸ್ ನಿಂದ ರಕ್ಷಾ ಬಂಧನ ಆಚರಣೆ

ಆರೆಸ್ಸೆಸ್ ನಿಂದ ರಕ್ಷಾ ಬಂಧನ ಆಚರಣೆ

ಹುಬ್ಬಳ್ಳಿಯ ಗೋಕುಲ್ ಗಾರ್ಡನ್ ನಲ್ಲಿ ಆರೆಸ್ಸೆಸ್ ನಿಂದ ರಕ್ಷಾ ಬಂಧನ ಆಚರಣೆ ನಡೆದಿದ್ದು ಹೀಗೆ, ಪಿಟಿಐ ಚಿತ್ರ

ವಾರಣಾಸಿಯಲ್ಲಿ ಉಪಕರ್ಮ ಹಬ್ಬ

ವಾರಣಾಸಿಯಲ್ಲಿ ಉಪಕರ್ಮ ಹಬ್ಬ

ವಾರಣಾಸಿಯಲ್ಲಿ ಹೊಸ ಯಜ್ಞೋಪವಿತ ಧಾರಣೆ ಮಹೋತ್ಸವ ಹೋಮ ಹವನ ಉಪಕರ್ಮ ಆಚರಣೆ

ನಾಗಪುರದಲ್ಲಿ ಖೈದಿಗೆ ರಾಖಿ

ನಾಗಪುರದಲ್ಲಿ ಖೈದಿಗೆ ರಾಖಿ

ನಾಗಪುರದಲ್ಲಿ ಖೈದಿಗೆಯಾಗಿರುವ ಅಣ್ಣನಿಗೆ ರಾಖಿ ಕಟ್ಟಿ ರೋದಿಸಿದ ಸೋದರಿಯರು.

ಯೋಧರಿಗೆ ರಾಖಿ ಕಟ್ಟಿದ ಯುವತಿ

ಯೋಧರಿಗೆ ರಾಖಿ ಕಟ್ಟಿದ ಯುವತಿ

ಗಡಿಭದ್ರತಾ ಪಡೆ ಯೋಧರಿಗೆ ರಾಖಿ ಕಟ್ಟಿದ ಯುವತಿಯರು. PTI Photo

ಸಾಧ್ವಿ ರಿತಾಂಬರ ಅವರಿಂದ ರಾಖಿ

ಸಾಧ್ವಿ ರಿತಾಂಬರ ಅವರಿಂದ ರಾಖಿ

ಸಾಧ್ವಿ ರಿತಾಂಬರ ಅವರಿಂದ ರಾಖಿ ಕಟ್ಟಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ

ಲಕ್ನೋದಲ್ಲಿ ಉಪಕರ್ಮ ಆಚರಣೆ

ಲಕ್ನೋದಲ್ಲಿ ಉಪಕರ್ಮ ಆಚರಣೆ

ಉತ್ತರಪ್ರದೇಶದಲ್ಲಿ ಬ್ರಾಹ್ಮಣ ಬಾಲಕರಿಂದ ಉಪಕರ್ಮ ಆಚರಣೆ

ಹೈದರಾಬಾದಿನಲ್ಲಿ ರಾಜ್ಯಪಾಲರಿಗೆ ರಾಖಿ

ಹೈದರಾಬಾದಿನಲ್ಲಿ ರಾಜ್ಯಪಾಲರಿಗೆ ರಾಖಿ

ಹೈದರಾಬಾದಿನಲ್ಲಿ ರಾಜ್ಯಪಾಲ ಇಎಸ್ ಎಲ್ ನರಸಿಂಹನ್ ಅವರಿಗೆ ರಾಖಿ ಕಟ್ಟಿದ ಶಾಲಾ ಮಕ್ಕಳು.

ರಾಷ್ಟ್ರಪತಿಗಳಿಗೆ ರಾಖಿ ಕಟ್ಟಿದ ಮಕ್ಕಳು

ರಾಷ್ಟ್ರಪತಿಗಳಿಗೆ ರಾಖಿ ಕಟ್ಟಿದ ಮಕ್ಕಳು

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರಾಖಿ ಕಟ್ಟಿದ ಮಕ್ಕಳು

ಸಂಗಮದಲ್ಲಿ ಹುಣ್ಣಿಮೆ ಆರತಿ ಬೆಳಕು

ಸಂಗಮದಲ್ಲಿ ಹುಣ್ಣಿಮೆ ಆರತಿ ಬೆಳಕು

ಅಲಹಾಬಾದಿನ ಸಂಗಮದಲ್ಲಿ ಹುಣ್ಣಿಮೆ ಆರತಿ ಬೆಳಕು ಪ್ರಜ್ವಲಿಸಿದೆ. ರಕ್ಷಾಬಂಧನ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಗಿದೆ

English summary
In Pictures: President Pranab Mukherjee and Prime Minister Narendra Modi Sunday greeted the nation on the occasion of Raksha Bandhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X