ಅಮರಾವತಿಯಿಂದ ರಾಹುಲ್ ರೈತರ ಜೊತೆ ನಡಿಗೆ
ನವದೆಹಲಿ, ಏ.30: ದೇಶದ ಅತ್ಯಂತ ಬರಪೀಡಿತ ಪ್ರದೇಶ ಎನಿಸಿರುವ ವಿದರ್ಭದ ಅಮರಾವತಿ ಜಿಲ್ಲೆಯ ರೈತರ ಜೊತೆ ನಡಿಗೆ ಇಡುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಾದಯಾತ್ರೆ ಆರಂಭಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶಾಶ್ವತ ಬರ ಪೀಡಿತ ಪ್ರದೇಶ ವಿದರ್ಭ ವಲಯದ ಅಮರಾವತಿ ಜಿಲ್ಲೆಯ ಗುಂಜ್ ಗ್ರಾಮಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ರೈತರ ಜೊತೆ ಕಲೆತು ಬೆರೆತರು. ಅವರ ಜೊತೆ ಕುಳಿತು ಸಂಕಷ್ಟ ಆಲಿಸಿದರು. ದಣಿವಾದಾಗ ನೀರು ಕೇಳಿ ಪಡೆದರು. 15 ಕಿ.ಮೀ ಪಾದಯಾತ್ರೆ ಪ್ಲಸ್ ಸಂವಾದ ಸಾಂಗವಾಗಿ ಜರುಗಿತು.[ರಾಹುಲ್ ರೈಲು ಯಾತ್ರೆಗೆ ಟ್ವೀಟ್ ಪ್ರತಿಕ್ರಿಯೆ]
ಉದ್ಯಮಿಗಳ ಪರವಾಗಿರುವ ಮಸೂದೆ ನಮಗೆ ಬೇಕಿಲ್ಲ. ಕೆಲವು ಜನರ ಹಿತ ಕಾಪಾಡಲು ಮಸೂದೆಯನ್ನು ಜಾರಿ ಮಾಡಲು ಮೋದಿ ಸರ್ಕಾರ ಮುಂದಾಗಿದೆ. ಪರಿಹಾರ ಧನ ಪಡೆದುಕೊಂಡು ರೈತರು ಜೀವನ ಸಾಗಿಸುವುದು ಹೇಗೆ ಎಂದು ಎಲ್ಲೆಡೆ ರಾಹುಲ್ ಪ್ರಶ್ನಿಸಿದರು. ರಾಹುಲ್ ಗಾಂಧಿ ಪಾದಯಾತ್ರೆ ಚಿತ್ರಗಳು ಇಲ್ಲಿವೆ...
ಪಾದಯಾತ್ರೆ ಪ್ಲಸ್ ಸಂವಾದ
ದೇಶದ ಅತ್ಯಂತ ಬರಪೀಡಿತ ಪ್ರದೇಶ ಎನಿಸಿರುವ ವಿದರ್ಭದ ಅಮರಾವತಿ ಜಿಲ್ಲೆಯ ರೈತರ ಜೊತೆ ನಡಿಗೆ ಇಟ್ಟರು. ಜಿಲ್ಲಾ ಕೇಂದ್ರದಿಂದ 15 ಕಿ.ಮೀ ಪಾದಯಾತ್ರೆಯಲ್ಲಿ ಪಾಲ್ಗೊಂಡರು.
ರೈತರ ಸಂಕಷ್ಟಗಳನ್ನು ಆಲಿಸಿದ ರಾಹುಲ್
ರೈತರ ಸಮಸ್ಯೆಗಳ ಬಗ್ಗೆ ಆಲಿಸಿದ ರಾಹುಲ್ ಅವರು ಗುಂಜ್ ಗ್ರಾಮದಿಂದ ದಮನ್ ಗ್ಯಾನ್, ರಜನಾ ಹಳ್ಳಿ , ತೋಂಗ್ಲಾ ಬಾದ್ ಗ್ರಾಮಗಳಿಗೂ ಭೇಟಿ ನೀಡಿದರು. ಎಲ್ಲೆಡೆ ಭೂ ಸ್ವಾಧೀನ ಮಸೂದೆ ಬೆಂಬಲ ನೀಡಬಾರದೆಂದು ರೈತರಿಗೆ ಮನವರಿಕೆ ಮಾಡಿಕೊಟ್ಟರು
ಅನುಮತಿ ಇಲ್ಲದೆ ನಿಮ್ಮ ಭೂ ಸ್ವಾದೀನ
ರೈತರ ಜಮೀನನ್ನು ವಶಪಡಿಸಿಕೊಳ್ಳುವಾಗ ಅವರ ಅನುಮತಿಯನ್ನು ಕೇಳದೆ ಸ್ವಾಧೀನ ಪಡಿಸಿಕೊಂಡರೆ ನಾಡಿನ ಅನ್ನದಾತ ಉಳಿಯಲು ಸಾಧ್ಯವೇ? ನಾಲ್ಕು ಪಟ್ಟು ಪರಿಹಾರ ಕೊಟ್ಟರೆ ರೈತರ ಜೀವನ ಸಾಗಿಸುವುದು ಹೇಗೆ ಎಂದು ಹರಿಹಾಯ್ದರು.
ಕಾರ್ಪೊರೇಟ್ ಸಂಸ್ಥೆ ಪರ ಮಸೂದೆ
ಕಾರ್ಪೊರೇಟ್ ಸಂಸ್ಥೆಗಳು, ಕೈಗಾರಿಕೋದ್ಯಮಗಳು, ರಿಯಲ್ ಎಸ್ಟೇಟ್ ಉದ್ಯಮಗಳ ಪರವಾಗಿ ಮಸೂದೆ ರೂಪಿಸಲಾಗಿದೆ. ಇದರಿಂದ ರೈತರಿಗೆ ಬಿಡುಗಾಸಿನ ಪ್ರಯೋಜನವಾಗುವುದಿಲ್ಲ. ಈ ಮಸೂದೆ ರೈತರ ಹಿತಕಾಪಾಡುವಲ್ಲಿ ವಿಫಲವಾಗಿದೆ ಎಂದು ರೈತರು ಹೇಳಿದರು.
ವಿದರ್ಭ ಪ್ರವಾಸದಲ್ಲಿ ರಾಹುಲ್ ಜೊತೆ ಮಾಜಿ ಸಿಎಂ
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ನ ಅನೇಕ ನಾಯಕರು ಸಾಥ್ ನೀಡಿದರು. ಮಾಜಿ ಮುಖ್ಯಮಂತ್ರಿಗಳಾದ ಪೃಥ್ವಿರಾಜ್ ಚೌಹಾಣ್, ಅಶೋಕ್ ಚೌಹಾಣ್ ಮತ್ತಿತರರು ಹಾಜರಿದ್ದರು.
|
ರಾಹುಲ್ ತೆಲಂಗಾಣಕ್ಕೆ ಭೇಟಿ
ವಿದರ್ಭ ಪ್ರವಾಸ ಮುಗಿಸಲಿರುವ ರಾಹುಲ್ ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ
|
ವಿದರ್ಭ ಆಯ್ಕೆ ಮಾಡಿಕೊಂಡಿದ್ದೇಕೆ?
ಸುಮಾರು 300 ರೈತರ ಆತ್ಮಹತ್ಯೆಗೆ ಸಾಕ್ಷಿಯಾಗಿರುವ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯ ದೇಶದ ಅತ್ಯಂತ ಬರಪೀಡಿತಗಳಲ್ಲಿ ಒಂದಾಗಿದೆ. ಹೀಗಾಗಿ ವಿದರ್ಭದ ಗುಂಜ್ ಗ್ರಾಮದಿಂದ ರಾಮ್ಗಾವ್ನಲ್ಲಿ ತಮ್ಮ ಪಾದಯಾತ್ರೆ ಮುಕ್ತಾಯಗೊಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ರಾಹುಲ್ ಪಾದಯಾತ್ರೆ
ಮುಂದಿನ ದಿನಗಳಲ್ಲಿ ರಾಹುಲ್ ಉತ್ತರಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತಿತರ ರಾಜ್ಯಗಳತ್ತ ಪಾದ ಬೆಳೆಸಲಿದ್ದಾರೆ.