ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹವಾಮಾನ ವೈಪರೀತ್ಯ: 2018ರಲ್ಲಿ 1,425ಕ್ಕೂ ಹೆಚ್ಚು ಬಲಿ
ಬೆಂಗಳೂರು, ಜನವರಿ 17: ಹವಾಮಾನ ವೈಪರೀತ್ಯದಿಂದಾಗಿ 2018ರಲ್ಲಿ 1,425ಕ್ಕೂ ಹೆಚ್ಚುಮಂದಿ ಮೃತಪಟ್ಟಿದ್ದಾರೆ ಎಂದು ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ಆಂಧ್ರಕ್ಕೆ ಚಂಡಮಾರುತ ಹೊಡೆತ
2018ರಲ್ಲಿ ಭಾರಿ ಮಳೆ, ನೆರೆ, ಶೀತಗಾಳಿ ಸೇರಿ ತೀವ್ರ ಸ್ವರೂಪದ ಹವಾಮಾನ ವೈಪರೀತ್ಯಕ್ಕೆ ದೇಶಾದ್ಯಂತ 1425ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಒಟ್ಟು ಆರು ಚಂಡಮಾರುತ ಸೃಷ್ಟಿಯಾಗಿತ್ತು, ತಿತ್ಲಿ, ಗಜ, ಪೆಥಾಯ್ ಚಂಡಮಾರುತದಿಂದ ಆಸ್ತಿಪ್ರಾಣ ಹಾನಿ ಸಂಭವಿಸಿದೆ. ಚಂಡಮಾರುತ, ವಾಯುಭಾರ ಕುಸಿತದಿಂದಾಗಿ ಕೇರಳ, ತಮಿಳುನಾಡು ಹಾಗೂ ಕೊಡಗಿನ ಹಲವು ಪ್ರದೇಶಗಳಲ್ಲಿ ಕುಂಭದ್ರೋಣ ಮಳೆಯಿಂದ ಹೆಚ್ಚಿನ ಹಾನಿಯಾಗಿತ್ತು.
ಮುಂಗಾರು-ಹಿಂಗಾರು ಸಂದರ್ಭದಲ್ಲಿ 800ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅ. 8ರಿಂದ 23ರವರೆಗೆ ಉಂಟಾಗಿದ್ದ ಮೇಘಸ್ಫೋಟಕ್ಕೆ223 ಜನ ಬಲಿಯಾಗಿದ್ದರು. ನೆರೆಗೆ ಉತ್ತರ ಪ್ರದೇಶದಲ್ಲಿ 116 ಮಂದಿ ಸಾವನ್ನಪ್ಪಿದ್ದರು.
English summary
Year 2018 turned out to be the sixth warmwest year in India since 1901 and an estimated 1425 people were killed due to extreme weather events like floods, dust storm, heavy rain in last year.
Story first published: Thursday, January 17, 2019, 16:59 [IST]