ಸೆ.18ರವರೆಗೂ ಈ 10 ರಾಜ್ಯಗಳಲ್ಲಿ ವ್ಯಾಪಕ ಮಳೆ ಮುನ್ಸೂಚನೆ
ನವದೆಹಲಿ, ಸೆಪ್ಟೆಂಬರ್ 14: ಉತ್ತರ ಒಡಿಶಾದಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತದ ಪರಿಣಾಮವಾಗಿ ಮುಂದಿನ ಐದು ದಿನಗಳ ಕಾಲ ದೇಶದಾದ್ಯಂತ ಸುಮಾರು ಹತ್ತು ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮಧ್ಯ ಹಾಗೂ ವಾಯವ್ಯ ಭಾರತದಲ್ಲಿ ಶನಿವಾರ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ಮಾರುತಗಳು 13 ಕಿ.ಮೀ ವೇಗದಲ್ಲಿ ಪಶ್ಚಿಮ ಹಾಗೂ ವಾಯವ್ಯ ದಿಕ್ಕಿಗೆ ಚಲಿಸಲಿವೆ. ಇದರಿಂದಾಗಿ ಮುಂದಿನ 48 ಗಂಟೆಗಳಲ್ಲಿ ಉತ್ತರ ಛತ್ತೀಸ್ಗಡ, ಮಧ್ಯ ಪ್ರದೇಶದಲ್ಲಿ ಅಧಿಕ ಮಳೆ ಉಂಟಾಗಲಿದೆ ಎಂದು ತಿಳಿಸಿದೆ. ಒಡಿಶಾದಲ್ಲಿ ಭಾರೀ ಮಳೆ ಆಗುತ್ತಿದ್ದು, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕರಾವಳಿ ತೀರಗಳಲ್ಲಿ ಎಚ್ಚರಿಕೆ ರವಾನಿಸಲಾಗಿದೆ.
ಬುಧವಾರದ ನಂತರ ಮಾರುತಗಳು ದುರ್ಬಲಗೊಳ್ಳಲಿವೆ. ಇದರ ಮಧ್ಯೆ ಗುಜರಾತ್ನಲ್ಲಿ ಮತ್ತೊಂದು ವಾಯುಭಾರ ಕುಸಿತ ಸಂಭವಿಸಲಿದ್ದು, ಮುಂದಿನ ಮೂರ್ನಾಲ್ಕು ದಿನಗಳವರೆಗೂ ಇದರ ಪ್ರಭಾವ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಿದೆ. ಇದರಿಂದಾಗಿ ಸೆಪ್ಟೆಂಬರ್ 18ರವರೆಗೂ ಕೆಲವೆಡೆ ಮಳೆಯಾಗುವ ಸೂಚನೆ ನೀಡಲಾಗಿದೆ. ಮುಂದೆ ಓದಿ...
ವಾಯುಭಾರ ಕುಸಿತ; ಮುಂದಿನ 3-4 ದಿನ ಈ ರಾಜ್ಯಗಳಲ್ಲಿ ಭಾರೀ ಮಳೆ
ಸೆ.17ರವರೆಗೂ ಈ ರಾಜ್ಯಗಳಲ್ಲಿ ಮಳೆ
ಭಾನುವಾರ
ಗುಜರಾತ್ನಲ್ಲಿ
13
ಇಂಚು
ಮಳೆಯಾಗಿದೆ.
ಸೋಮವಾರ
ಮಳೆ
ಮುಂದುವರೆದಿದ್ದು,
ಮಂಗಳವಾರ
ಕೂಡ
ಅಧಿಕ
ಮಳೆಯಾಗುವ
ಸೂಚನೆ
ನೀಡಲಾಗಿದೆ.
1400
ಜನರನ್ನು
ಸುರಕ್ಷಿತ
ಜಾಗಗಳಿಗೆ
ಸ್ಥಳಾಂತರಿಸಲಾಗಿದೆ
ಎಂದು
ಎಎನ್ಐ
ಸುದ್ದಿ
ಸಂಸ್ಥೆ
ತಿಳಿಸಿದೆ.
ಮಹಾರಾಷ್ಟ್ರ,
ಗುಜರಾತ್,
ರಾಜಸ್ಥಾನ,
ಮಧ್ಯ
ಪ್ರದೇಶ
ಹಾಗೂ
ಉತ್ತರ
ಕೊಂಕಣದಲ್ಲಿ
ಸೆಪ್ಟೆಂಬರ್
17ರವರೆಗೂ
ಮಳೆಯಾಗುವ
ಸೂಚನೆಯನ್ನು
ನೀಡಲಾಗಿದೆ.
ಸೆಪ್ಟೆಂಬರ್
15ರಂದು
ಮಧ್ಯಪ್ರದೇಶ,
ಗುಜರಾತ್ನಲ್ಲಿ
ಭಾರೀ
ಮಳೆಯಾಗುವ
ಸೂಚನೆ
ನೀಡಲಾಗಿದೆ.
ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಮಳೆ
ಕರ್ನಾಟಕದ ಕರಾವಳಿ, ಉತ್ತರ ಒಳನಾಡು, ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಸೆಪ್ಟೆಂಬರ್ 15ರವರೆಗೂ ಮಳೆ ಮುಂದುವರೆಯುವುದಾಗಿ ಹೇಳಿದೆ. ನೈಋತ್ಯ ಭಾರತದಲ್ಲಿ ಮಳೆ ಪ್ರಮಾಣ ಹೆಚ್ಚಲಿದ್ದು, ಪಶ್ಚಿಮ ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನದಲ್ಲಿ ಸೆಪ್ಟೆಂಬರ್ 16ರ ನಂತರ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವುದಾಗಿ ತಿಳಿಸಿದೆ.
ಸೆ. 15ರ ತನಕ ಮಳೆ; ವಿವಿಧ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಚಂಡಮಾರುತ ಪ್ರಭಾವದಿಂದ ಮಳೆ
ಸೆಪ್ಟೆಂಬರ್ 17ರಂದು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ತೀವ್ರತೆ ಹೆಚ್ಚಾಗಲಿದೆ. ಒಡಿಶಾ, ಪಶ್ಚಿಮ ಬಂಗಾಳ ಕರಾವಳಿ ತೀರಗಳಿಗೆ ಈ ಮಾರುತಗಳು ಚಲಿಸಲಿದ್ದು, ಈ ರಾಜ್ಯಗಳಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ. ಆನಂತರ ಮಳೆ ತಗ್ಗಲಿದೆ ಎಂದು ತಿಳಿಸಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಅಧಿಕ ಮಟ್ಟದ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಬಿಹಾರ, ದೆಹಲಿ, ಒಡಿಶಾ ಹಾಗೂ ಮಹಾರಾಷ್ಟ್ರದಲ್ಲಿ ಈಗಾಗಲೇ ಅಧಿಕ ಮಳೆ ದಾಖಲಾಗಿದೆ.
ಒಡಿಶಾ, ಮಹಾರಾಷ್ಟ್ರ ಹೊರತುಪಡಿಸಿ ಪಂಜಾಬ್, ಹರಿಯಾಣ, ದೆಹಲಿಯಲ್ಲಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗುವುದಾಗಿ ಮುನ್ಸೂಚನೆ ನೀಡಲಾಗಿದೆ. ಸೆಪ್ಟೆಂಬರ್ 15ರವರೆಗೂ ಉತ್ತರಾಖಂಡದಲ್ಲಿ, ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶ, ಹಿಮಾಲಚ ಪ್ರದೇಶ, ಜಮ್ಮು, ರಾಜಸ್ಥಾನದಲ್ಲಿ ಮಳೆಯಾಗುವುದಾಗಿ ಮಾಹಿತಿ ನೀಡಿದೆ. ಸೆಪ್ಟೆಂಬರ್ 16ರವರೆಗೂ ಬಿಹಾರದಲ್ಲಿ ವ್ಯಾಪಕ ಮಳೆಯಾಗುವುದಾಗಿ ಹೇಳಿದೆ. ಈ ವಾರ ದೆಹಲಿಯಲ್ಲಿ ಮಳೆಯಾಗುವುದಾಗಿ ತಿಳಿಸಿದೆ.
ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನ ಮಳೆ
ಬಂಗಾಳಕೊಲ್ಲಿಯಲ್ಲಿ
ವಾಯುಭಾರ
ಕುಸಿತ
ಪ್ರಭಾವದಿಂದಾಗಿ
ರಾಜ್ಯದಲ್ಲಿ
ಮುಂದಿನ
ನಾಲ್ಕು
ದಿನಗಳವರೆಗೂ
ಮಳೆಯಾಗುವುದಾಗಿ
ಹವಾಮಾನ
ಇಲಾಖೆ
ತಿಳಿಸಿದೆ.
ಉತ್ತರ
ಕನ್ನಡ,
ದಕ್ಷಿಣ
ಕನ್ನಡ,
ಚಿಕ್ಕಮಗಳೂರು,
ಉಡುಪಿ,
ಹಾಸನ,
ಶಿವಮೊಗ್ಗ
ಕೊಡಗು
ಜಿಲ್ಲೆಗಳಲ್ಲಿ
ಸೆಪ್ಟೆಂಬರ್
15ರವರೆಗೆ
ಯೆಲ್ಲೋ
ಅಲರ್ಟ್
ಘೋಷಣೆ
ಮಾಡಲಾಗಿದೆ.
ಮೂರ್ನಾಲ್ಕು
ದಿನಗಳವರೆಗೂ
ಅಧಿಕ
ಮಳೆಯಾಗುವುದಾಗಿ
ತಿಳಿಸಿದೆ.