ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇತಿಹಾಸ ತಪ್ಪಾಗಿ ಉಲ್ಲೇಖಿಸಿ ಪೇಚಿಗೆ ಸಿಕ್ಕ ರಾಜಸ್ಥಾನ ಬಿಜೆಪಿ ಅಧ್ಯಕ್ಷ

|
Google Oneindia Kannada News

ಜೈಪುರ, ಜುಲೈ 26: ಗೋವುಗಳ ರಕ್ಷಣೆ ವಿಚಾರದಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಇತಿಹಾಸವನ್ನು ತಪ್ಪಾಗಿ ಉಲ್ಲೇಖಿಸಿದ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ಲಾಲ್ ಸೈನಿ ಪೇಚಿಗೆ ಸಿಲುಕಿದ್ದಾರೆ.

ಮರಣಶಯ್ಯೆಯಲ್ಲಿದ್ದ ಮೊಘಲ್ ಸಾಮ್ರಾಟ ಹುಮಾಯೂನ್, ಭಾರತದಲ್ಲಿ ಆಡಳಿತ ಮುಂದುವರಿಸಬೇಕಾದರೆ ಗೋವುಗಳು, ಬ್ರಾಹ್ಮಣರು ಮತ್ತು ಮಹಿಳೆಯರನ್ನು ಗೌರವಿಸುವಂತೆ ತನ್ನ ತಂದೆಗೆ ಸಲಹೆ ನೀಡಿದ್ದ ಎಂಬ ಸೈನಿ ಹೇಳಿಕೆ ವ್ಯಾಪಕ ಲೇವಡಿಗೆ ಗುರಿಯಾಗಿದೆ.

ಹೈನುಗಾರಿಗೆ, ಗೋ ವ್ಯಾಪಾರದಿಂದ ಮುಸ್ಲಿಮರು ದೂರವಿರಿ: ಅಜಂ ಖಾನ್ ಸಲಹೆಹೈನುಗಾರಿಗೆ, ಗೋ ವ್ಯಾಪಾರದಿಂದ ಮುಸ್ಲಿಮರು ದೂರವಿರಿ: ಅಜಂ ಖಾನ್ ಸಲಹೆ

'ಹುಮಾಯೂನ್ ಸಾಯುವಾಗ ಆತ ಬಾಬರ್‌ನನ್ನು ಕರೆದು, ನೀವು ಹಿಂದೂಸ್ತಾನದಲ್ಲಿ ಆಡಳಿತ ಮುಂದುವರಿಸಬೇಕು ಎಂಬ ಬಯಸಿದ್ದರೆ ಮೂರು ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಗೋವುಗಳು, ಬ್ರಾಹ್ಮಣರು ಮತ್ತು ಮಹಿಳೆಯರನ್ನು ಗೌರವಿಸಬೇಕು' ಎಂದು ಸಲಹೆ ನೀಡಿದ್ದಾಗಿ ಸೈನಿ ಹೇಳಿದ್ದಾರೆ.

humayun advised babur to respect cows: bjp madan lal saini

ತಂದೆ ನಿಧನದ 25 ವರ್ಷದ ಬಳಿಕ ಮರಣಹೊಂದಿದ ಹುಮಾಯೂನ್, ಯಾವಾಗ ಮರಣಶಯ್ಯೆಯಲ್ಲಿದ್ದ ಎಂಬ ಪ್ರಶ್ನೆ ಉದ್ಭವಿಸಿದೆ.

ಗೋಹತ್ಯೆ ನಿಂತರೆ ಗುಂಪು ಹತ್ಯೆಯೂ ನಿಲ್ಲುತ್ತದೆ: ಆರೆಸ್ಸೆಸ್ ಮುಖಂಡನ ವಿವಾದಗೋಹತ್ಯೆ ನಿಂತರೆ ಗುಂಪು ಹತ್ಯೆಯೂ ನಿಲ್ಲುತ್ತದೆ: ಆರೆಸ್ಸೆಸ್ ಮುಖಂಡನ ವಿವಾದ

ಬಾಬರ್ 1531ರಲ್ಲಿ ಮೃತಪಟ್ಟಿದ್ದರೆ, ಹುಮಾಯೂನ್ 1556ರಲ್ಲಿ ಕೊನೆಯುಸಿರೆಳೆದಿದ್ದ. ಇತಿಹಾಸದ ಮಾಹಿತಿ ಅರಿಯದೆ ಸೈನಿ ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.

ರಾಜಸ್ಥಾನದ ಅಲ್ವಾರ್‌ನಲ್ಲಿ ಗೋಸಾಗಾಣಿಕೆ ಮಾಡುತ್ತಿದ್ದವರನ್ನು ಕಳ್ಳರೆಂದು ಭಾವಿಸಿ ಜನರ ಗುಂಪೊಂದು ಒಬ್ಬಾತನನ್ನು ಹೊಡೆದು ಕೊಂದ ಘಟನೆ ನಡೆದು ಕೆಲವು ದಿನಗಳ ಬಳಿಕ ಸೈನಿ ಈ ಹೇಳಿಕೆ ನೀಡಿದ್ದಾರೆ.

English summary
Rajasthan BJP President Madan Lal Saini claimed that when Mughal emperor Humayun was on his deathbed, he told his father Babur to respect cows, brahmins and women in order to continue ruling India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X