ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಸಿಎಂ ಗಾದಿಗೆ ಹಕ್ಕು ಸ್ಥಾಪಿಸಿದ ವಿಜಯನ್

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮೇ, 20: ಕೇರಳದ ಮುಖ್ಯಮಂತ್ರಿ ಹುದ್ದೆಗೆ ಉಂಟಾಗಿದ್ದ ಗೊಂದಲಗಳಿಗೆ ಸಿಪಿಐಎಂ ಅಂತ್ಯ ಹಾಡಿದೆ. ಪಿಣರಾಯಿ ವಿಜಯನ್(72ವರ್ಷ) ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುವುದು ಪಕ್ಕಾ ಆಗಿದೆ.

ಚುನಾವಣೆ ಆರಂಭದಲ್ಲಿ ವಿಜಯನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರತಿಬಿಂಬಿಸಲಾಗಿತ್ತು. ಆದರೆ ಚುನಾವಣೆ ಹತ್ತಿರ ಬಂದಾಗ ಕೊನೆ ಘಳಿಗೆಯಲ್ಲಿ 'ನಾನು ರೇಸ್ ನಲ್ಲಿ ಇದ್ದೇನೆ' ಎಂದು ಹೇಳುವ ಮೂಲಕ ಅಚ್ಯುತಾನಂದನ್ ಕುತೂಹಲ ಹುಟ್ಟುಹಾಕಿದ್ದರು. ಈ ಬಾರಿಯೂ 92ವರ್ಷದ ಅಚ್ಯುತಾನಂದನ್ ಅವರಿಗೆ ಸಿಎಂ ಪಟ್ಟ ಎಂದು ಹೇಳಲಾಗಿತ್ತು. ಇದೀಗ ವಿಜಯನ್ ಅವರನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಲಾಗಿದೆ.[ಕೇರಳ ಎಡರಂಗದ ಕೈ ಸೇರಿದ್ದು ಹೇಗೆ?]

kerala

ಅಚ್ಯುತಾನಂದನ್ ಅಸಮಾಧಾನ:
ಆದರೆ ಈ ನಿರ್ಧಾರಕ್ಕೆ ಅಚ್ಯುತಾನಂದನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲ ಆರು ತಿಂಗಳು ತನಗೆ ಮುಖ್ಯಮಂತ್ರಿ ಹುದ್ದೆ ನೀಡಿ ನಂತರ ಅಧಿಕಾರ ಹಸ್ತಾಂತರ ಮಾಡಿ ಎಂಬ ಇರಾದೆಯನ್ನು ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ. [ಪಂಚರಾಜ್ಯಗಳ ಚುನಾವಣೆಯಲ್ಲಿ ಗೆದ್ದವರು-ಬಿದ್ದವರು]

ಇಬ್ಬರು ನಾಯಕರ ನಡುವೆ ಹಿಂದೆಯೂ ಭಿನ್ನಾಭಿಪ್ರಾಯಗಳು ಉದ್ಘವವಾಗಿದ್ದವು. 2006 ರಿಂದ 2011 ರ ಅವಧಿಯಲ್ಲಿ ಅಚ್ಯುತಾನಂದನ್ ಮುಖ್ಯಮಂತ್ರಿಯಾಗಿದ್ದಾಗ ಪಕ್ಷದಲ್ಲಿ ಅನೇಕ ಸಾರಿ ಆಂತರಿಕ ಸಂಘರ್ಷ ಎದುರಾಗಿತ್ತು.

English summary
The CPI(M) has decided to go ahead with Pinrayi Vijayan as the Chief Minister. However the next big challenge for the party would be to ensure that a repeat of the 2006 to 2011 scenario does not happen once again. Both Pinrayi Vijayan and V S Achuthanandan had to be sent out of the politburo after embarrassing face off between the two were reported. This time for the CPI(M) the call was a tough one.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X