ಸಲಿಂಗಕಾಮː ಅಮೀರ್ ಖಾನ್ ಗೆ ಲೀಗಲ್ ನೋಟಿಸ್
ಮುಂಬೈ, ನ. 3: ಸತ್ಯಮೇವ ಜಯತೆ ಕಾರ್ಯಕ್ರಮದಲ್ಲಿ ಸಲಿಂಗಕಾಮವನ್ನು ಪ್ರಚೋದಿಸಿದ್ದಾರೆ ಎಂಬ ಆರೋಪದಡಿ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ಗೆ ಚಂಢೀಗಡ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಅಕ್ಟೋಬರ್ 19 ರಂದು ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾದ ಸತ್ಯಮೇವ ಜಯತೆ ಶೋ ಗೆ ಸಂಬಂಧಿಸಿ ನೋಟಿಸ್ ನೀಡಲಾಗಿದೆ. ಅಮೀರ್ ಖಾನ್ ತಮ್ಮ ನಿರೂಪಣೆಯಲ್ಲಿ ಮೂಡಿಬಂದ ಸತ್ಯಮೇವ ಜಯತೆ ಶೋ ನಲ್ಲಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಮಾತನಾಡಿದ್ದಾರೆ ಎಂದು ವಕೀಲರೊಬ್ಬರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.[ಮೋದಿ ಟೀಕಿಸಿದ್ದ ಅಮೀರ್ ಹೊಡೆದ್ರು 'ಯೂ ಟರ್ನ್']
ವಕೀಲರಾದ ಮನ್ ದೀಪ್ ಕೌರ್ ಎಂಬುವರು ಸಲ್ಲಿಸದ್ದ ದೂರನ್ನು ಆಲಿಸಿದ ನ್ಯಾಯಾಧೀಶ ಜಸ್ವಿಂದರ್ ಸಿಂಗ್ ಅಮೀರ್ ಖಾನ್ ಅವರಿಗೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಅಮೀರ್ ಖಾನ್ ಮಾತನಾಡುತ್ತ ಸಲಿಂಗ ಕಾಮವನ್ನು ಪ್ರಚೋದಿಸುವ ಹೇಳಿಕೆ ನೀಡಿದ್ದರು. ಅಲ್ಲಿ ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದು ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರು ಕೌರ್ ದಾಖಲಿಸಿದ್ದರು.[ಈತನಿಗೆ ಸಲಿಂಗ ಕಾಮ ಹೆಮ್ಮೆ ಪಡುವ ವಿಷಯǃ]
ಅಲ್ಲದೇ ತಮ್ಮ ಮಾತಿನ ಮೂಲಕ ಅಮೀರ್ ಖಾನ್ ಸಂವಿಧಾನದ 377 ಕಲಂ ಆಧಾರವಾಗಿಟ್ಟುಕೊಂಡು ಸಲಿಂಗಕಾಮಿಗಳ ಹಕ್ಕುಗಳನ್ನು ಪ್ರತಿಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ಕೌರ್ ಅಮೀರ್ ಖಾನ್ ಗೆ ಲೀಗಲ್ ನೋಟಿಸ್ ಕಳಿಸಿದ್ದರು. ಆದರೆ ಅಮೀರ್ ಅದಕ್ಕೆ ಯಾವ ಉತ್ತರ ನೀಡಿರಲಿಲ್ಲ. ನಂತರ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.