ಭಾರತ ಸ್ಟಾರ್ಟ್ ಅಪ್ ರಾಜಧಾನಿ ಆಗಲಿದೆ: ಮೋದಿ
ಬೆಂಗಳೂರು, ಡಿ. 27: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಆಕಾಶವಾಣಿ ಕಾರ್ಯಕ್ರಮದಲ್ಲಿ ಸ್ಟಾರ್ಟ್ ಅಪ್ ಕಂಪನಿಗಳ ಬಗ್ಗೆ ಮಾತನಾಡಿ, ವಿಶ್ವದ ಸ್ಟಾರ್ಟ್ ಅಪ್ ರಾಜಧಾನಿಯಾಗಿ ಭಾರತವನ್ನು ಬೆಳಸಬೇಕಿದೆ ಎಂದರು.ಈ ಬಗ್ಗೆ ಹೊಸ ಯೋಜನೆಯನ್ನು ಜನವರಿ 16ರಂದು ಘೋಷಿಸುವುದಾಗಿ ಹೇಳಿದರು.
ಪ್ರಧಾನಿ ಅವರು ತಮ್ಮ 15ನೇ ಮನದ ಮಾತು ಕಾರ್ಯಕ್ರಮದಲ್ಲಿ ಮೊದಲಿಗೆ ಸಮಸ್ತ ನಾಗರಿಕರಿಗೆ ಕ್ರಿಸ್ ಮಸ್ ಹಾಗೂ ಹೊಸ್ ವರ್ಷಾಚರಣೆಯ ಶುಭ ಹಾರೈಕೆ ಸಲ್ಲಿಸಿದರು.
ನಂತರ ಪ್ರವಾಸಿ ತಾಣಗಳಲ್ಲಿನ ಸ್ವಚ್ಛತೆ, ಗ್ರಾಮಗಳ ನೈರ್ಮಲೀಕರಣ, ವಿದ್ಯುತೀಕರಣ, ನರೇಂದ್ರ ಮೋದಿ ಅಪ್ಲಿಕೇಷನ್, ರಾಷ್ಟ್ರೀಯ ಯುವ ದಿನ, ವಿಕಲಾಂಗರನ್ನು ಯಾವ ಹೆಸರಿನಲ್ಲಿ ಕರೆಯಬೇಕು? ಪಹಲ್ ಯೋಜನೆ ಗಿನ್ನಿಸ್ ದಾಖಲೆ ಬಗ್ಗೆ, ಮುದ್ರಾ ಯೋಜನೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದರು.
ಸ್ಟಾರ್ಟ್ ಅಪ್ ಇಂಡಿಯಾ: ಸ್ಟಾರ್ಟ್ ಅಪ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ ಯೋಜನೆ ಬಗ್ಗೆ ಜನವತರಿ 16ರಂದು ಪ್ರಕಟಣೆ ಹೊರಡಿಸಲಾಗುತ್ತದೆ.
ವಿಶ್ವದ ಸ್ಟಾರ್ಟ್ ಅಪ್ ಕಂಪನಿಗಳ ರಾಜಧಾನಿಯಾಗಿ ಭಾರತವನ್ನು ರೂಪಿಸುವತ್ತ ನಾವು ಹೆಜ್ಜೆ ಹಾಕಬೇಕಿದೆ. ದೇಶದ ಐಐಟಿ, ಐಐಎಂ ಇನ್ನಿತರ ವಿದ್ಯಾಸಂಸ್ಥೆಗಳ ಜೊತೆ ನೇರ ಸಂಪರ್ಕ ಒದಗಿಸಲಾಗುವುದು ಎಂದರು. 15ನೇಮನ್ ಕಿ ಬಾತ್ ಕಾರ್ಯಕ್ರಮದ ವಿಡಿಯೋ:
*
ಡಾ.
ಬಾಬಾಸಾಹೇಬ್
ಅಂಬೇಡ್ಕರ್
ಅವರ
125ನೇ
ಜನ್ಮದಿನಾಚರಣೆಯನ್ನು
ಉತ್ತಮ
ಚರ್ಚೆಯೊಂದಿಗೆ
ಸಂಸತ್ತಿನಲ್ಲಿ
ಆವರಿಸಲಾಗುವುದು.
*
ದೇಶದ
ನೂರಾರು
ಕೋಟಿ
ಮಂದಿ
ತಮ್ಮ
ಕರ್ತವ್ಯವನ್ನು
ನಿಭಾಯಿಸುವ
ಅವಶ್ಯಕತೆ
ಇದೆ.
ಜನವರಿ
26ರಂದು
ಈ
ಬಗ್ಗೆ
ಶಾಲೆಗಳಲ್ಲಿ
ಪ್ರಬಂಧ,
ಚರ್ಚಾ
ಸ್ಪರ್ಧೆ
ಏರ್ಪಡಲಿದೆ.
*
ಎಲ್
ಪಿಜಿ
ಸಬ್ಸಿಡಿ
ಹಿಂತಿರುಗಿಸುವ
ಕ್ರಿಯೆ,
ಪಹಲ್
ಯೋಜನೆ
ಮೂಲಕ
15ಕೋಟಿ
ಜನರಿಗೆ
ಉಪಯೋಗವಾಗಿದೆ.
*
ಎಂನರೇಗಾ
ಯೋಜನೆ
ಮೊತ್ತ
ನೇರವಾಗಿ
ಬ್ಯಾಂಕ್
ಖಾತೆಗೆ
ಸೇರಲಿದೆ.
ಒಟ್ಟಾರೆ
40,000
ಕೋಟಿ
ಮೊತ್ತ
ನೇರವಾಗಿ
ಬ್ಯಾಂಕ್
ಸೇರುತ್ತಿದ್ದು
ಹೊಸ
ದಾಖಲೆಯಾಗಿದೆ.
*
ವಿಕಲಾಂಗರು
ಎನ್ನಬೇಡಿ
ಅವರನ್ನು
ದಿವ್ಯಾಂಗರು
ಎಂದು
ಕರೆಯಿರಿ.
ವಿಶೇಷ
ಚೇತನವುಳ್ಳ
ಇವರನ್ನು
ಎಲ್ಲರಂತೆ
ಕಾಣಬೇಕಿದೆ.
ತಂತ್ರಜ್ಞಾನದ
ನೆರವಿನಿಂದ
ಇವರು
ಕೂಡಾ
ನೆಮ್ಮದಿಯ
ಬದುಕು
ಕಾಣಬಹುದಾಗಿದೆ.
*
ಈ
ಬಾರಿಯ
ಯುವ
ದಿನ(ಸ್ವಾಮಿ
ವಿವೇಕಾನಂದರ
ಜನ್ಮದಿನ)ಜನವರಿ
12ರಂದು
ಆಚರಣೆಗೂ
ಮುನ್ನ
ನಿಮ್ಮ
ಸಲಹೆ
ಸೂಚನೆಯನ್ನು
ನಾನು
ನರೇಂದ್ರ
ಮೋದಿ
ಅಪ್ಲಿಕೇಷನ್
ಮೂಲಕ
ಪಡೆಯಲು
ಬಯಸಿದ್ದೇನೆ.
*
ಗ್ರಾಮಗಳಲ್ಲಿನ
ಶೌಚಾಲಯ
ನೈರ್ಮಲೀಕರಣದಲ್ಲಿ
ಕ್ರಾಂತಿಕಾರಿ
ಹೆಜ್ಜೆ
ಇರಿಸಿರುವ
ದಿಲಿಪ್
ಸಿಂಗ್
ಮಾಳವೀಯ
ಅವರನ್ನು
ಅಭಿನಂದಿಸುತ್ತೇನೆ.
ಪ್ರವಾಸಿ
ತಾಣಗಳು,
ಹಳ್ಳಿಗಳಲ್ಲಿನ
ಸ್ವಚ್ಛತೆಗಾಗಿ
ನಾವು
ಶ್ರಮಿಸಬೇಕಿದೆ.
'ಅತಿಥಿ
ದೇವೋ
ಭವ'
ಉಕ್ತಿಯನ್ನು
ಸಾಕಾರಗೊಳಿಸಬೇಕಿದೆ.
*
ಹಬ್ಬದ
ಆಚರಣೆ
ಜೊತೆಗೆ
ಆರ್ಥಿಕ
ಪ್ರಗತಿ,
ಉದ್ಯೋಗಕ್ಕೂ
ಹೊಸ
ವರ್ಷ
ಹೊಸ
ಅವಕಾಶಗಳನ್ನು
ತರಲಿ
ಎಂದು
ಆಶಿಸುತ್ತೇನೆ.
(ಒನ್ ಇಂಡಿಯಾ ಸುದ್ದಿ)