ಬುಧವಾರ ಭಾರತದಲ್ಲಿ ಏನೇನಾಯ್ತು? ಚಿತ್ರದಲ್ಲಿ ನೋಡಿ
ಬೆಂಗಳೂರು, ಫೆ. 18: ಭಾರತ ಹಾಗೂ ಇತರ ದೇಶಗಳಲ್ಲಿ ಬುಧವಾರ ನಡೆದ ವಿವಿಧ ಪ್ರಮುಖ ಘಟನಾವಳಿಗಳ ಚಿತ್ರ ಸಹಿತ ಸುದ್ದಿಯನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಮುಂಬೈನಲ್ಲಿ ಸರೋದ್ ಮಾಂತ್ರಿಕ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರು ಸರೋದ್ ಘರ್ ನುಡಿಸಿದರು. ಗಣರಾಜ್ಯೋತ್ಸವದಂದು ಭಾರತಕ್ಕೆ ಬರಾಕ್ ಒಬಾಮ ಬಂದಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಧರಿಸಿದ್ದ 10 ಲಕ್ಷ ರು. ಮೌಲ್ಯದ ಸೂಟ್ ಅನ್ನು ಸೂರತ್ನಲ್ಲಿ ಹರಾಜು ಹಾಕಲಾಯಿತು.
ಪಾಕಿಸ್ತಾನದ ಪೇಶಾವರದಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಯಿತು. ಪೋಲಿಯೋ ಲಸಿಕೆ ಹಾಕಲು ಉಗ್ರರ ವಿರೋಧ ಇರುವ ಕಾರಣ ಆರೋಗ್ಯ ಸೇವಕರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಮುಂಬೈನಲ್ಲಿ ಕೋಸ್ಟ್ ಗಾರ್ಡ್ ಸೈನಿಕರು ದೋಣಿಯೊಂದರಲ್ಲಿ ಸಿಕ್ಕಿಬಿದ್ದಿದ್ದ ಪ್ರಯಾಣಿಕರನ್ನು ರಕ್ಷಿಸಿದರು. ಮುಂಬೈನಲ್ಲಿ ಆಯೋಜಿಸಿದ್ದ ಬಿಎಂಡಬ್ಲ್ಯೂ ಐ8 ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಸಚಿನ್ ತೆಂಡುಲ್ಕರ್ ಭಾಗವಹಿಸಿದ್ದರು.
ಐಐಎಸ್ಸಿಯಲ್ಲಿ ಪ್ರಧಾನಿ
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು.
ಸರೋದ್ ಘರ್
ಮುಂಬೈನಲ್ಲಿ ಸರೋದ್ ಮಾಂತ್ರಿಕ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರು ಸರೋದ್ ಘರ್ ನುಡಿಸಿದರು.
ಮೋದಿ ಸೂಟ್ ಹರಾಜು
ಗಣರಾಜ್ಯೋತ್ಸವದಂದು ಭಾರತಕ್ಕೆ ಬರಾಕ್ ಒಬಾಮ ಬಂದಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಧರಿಸಿದ್ದ 10 ಲಕ್ಷ ರು. ಮೌಲ್ಯದ ಸೂಟ್ ಅನ್ನು ಸೂರತ್ನಲ್ಲಿ ಹರಾಜು ಹಾಕಲಾಯಿತು.
ನೈಸ್ ಕಾರ್ನಿವಲ್
ಫ್ರಾನ್ಸ್ನಲ್ಲಿ ನಡೆಯುತ್ತಿರುವ ನೈಸ್ ಕಾರ್ನಿವಲ್ 2015ರಲ್ಲಿ ಕಂಡುಬಂದ ದೃಷ್ಯ. ಕಿಂಗ್ ಆಫ್ ಮ್ಯೂಸಿಕ್ ಹೆಸರಿನಲ್ಲಿ ಈ ಕಾರ್ನಿವಲ್ ಮಾರ್ಚ್ 1ರ ವರೆಗೆ ನಡೆಯಲಿದೆ.
ಹಿಮದ ಮೇಲೆ ಜಾರುವಾಟ
ವಾಷಿಂಗ್ಟನ್ನಲ್ಲಿನ ಕ್ಯಾಪಿಟಲ್ ಹಿಲ್ ಮೇಲೆ ಬಿದ್ದಿರುವ ಹಿಮದ ಮೇಲೆ ಎರಡು ವರ್ಷದ ಬಾಲಕನೋರ್ವ ಜಾರುವ ಆಟ ಆಡಿ ಸಂಭ್ರಮಿಸಿದ್ದು ಹೀಗೆ.
ಪೋಲಿಯೋ ಲಸಿಕೆಗೆ ಭದ್ರತೆ
ಪಾಕಿಸ್ತಾನದ ಪೇಶಾವರದಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಯಿತು. ಪೋಲಿಯೋ ಲಸಿಕೆ ಹಾಕಲು ಉಗ್ರರ ವಿರೋಧ ಇರುವ ಕಾರಣ ಆರೋಗ್ಯ ಸೇವಕರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.
ಪ್ರಯಾಣಿಕರ ರಕ್ಷಣೆ
ಮುಂಬೈನಲ್ಲಿ ಕೋಸ್ಟ್ ಗಾರ್ಡ್ ಸೈನಿಕರು ದೋಣಿಯೊಂದರಲ್ಲಿ ಸಿಕ್ಕಿಬಿದ್ದಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದು ಹೀಗೆ.
ಬಾಲಕನ ದೇಹಕ್ಕೆ ಬೆಂಕಿ
ಅಲಹಾಬಾದ್ನಲ್ಲಿ ನಡೆದ ಮಹಾಶಿವರಾತ್ರಿ ಆಚರಣೆ ಸಂದರ್ಭ ಬಾಲಕನೋರ್ವನ ದೇಹಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಆಗ ಜನರು ಈ ಬೆಂಕಿಯನ್ನು ಆರಿಸಿದರು.
ಜನತಾ ದರ್ಬಾರ್
ನವದೆಹಲಿಯ ಗಾಜಿಯಾಬಾದ್ನಲ್ಲಿರುವ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಜನತಾ ದರ್ಬಾರ್ನಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜನರತ್ತ ಕೈಬೀಸಿದರು.
ಮಾರುಕಟ್ಟೆಗೆ ಬಿಎಂಡಬ್ಲ್ಯೂ ಐ8 ಕಾರು
ಮುಂಬೈನಲ್ಲಿ ಆಯೋಜಿಸಿದ್ದ ಬಿಎಂಡಬ್ಲ್ಯೂ ಐ8 ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಸಚಿನ್ ತೆಂಡುಲ್ಕರ್ ಕಾಣಿಸಿಕೊಂಡಿದ್ದು ಹೀಗೆ.
ಮಾರುಕಟ್ಟೆಗೆ ಬಿಎಂಡಬ್ಲ್ಯೂ ಐ8 ಕಾರು
ಮುಂಬೈನಲ್ಲಿ ಆಯೋಜಿಸಿದ್ದ ಬಿಎಂಡಬ್ಲ್ಯೂ ಐ8 ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಸಚಿನ್ ತೆಂಡುಲ್ಕರ್ ಕಾಣಿಸಿಕೊಂಡಿದ್ದು ಹೀಗೆ.
ಜನತಾ ದರ್ಬಾರ್
ನವದೆಹಲಿಯ ಗಾಜಿಯಾಬಾದ್ನಲ್ಲಿರುವ ಆಮ್ ಆದ್ಮಿ ಪಕ್ಷದ ಕೌಶಂಬಿ ಕಚೇರಿಯಲ್ಲಿ ಆಯೋಜಿಸಿದ್ದ ಜನತಾ ದರ್ಬಾರ್ನಲ್ಲಿ ಉಂಟಾಗಿದ್ದ ಜನಜಂಗುಳಿ.
ಕರೀನಾ ಕಪೂರ್
ನವದೆಹಲಿಯಲ್ಲಿ ಆಯೋಜಿಸಿದ್ದ ಮಗ್ನಮ್ ಐಸಿ ಕ್ರೀಂ ಬಿಡುಗಡೆ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದು ಹೀಗೆ.
ವೆಂಕಟೇಶನಿಗೆ ನಮನ
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ತಮ್ಮ ಪತ್ನಿ ಜಯಂತಿ ಪುಷ್ಪಾ ಕುಮಾರಿ ಜೊತೆ ತಿರುಪತಿ ತಿರುಮಲದ ವೆಂಕಟೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದರು.
ವೆಂಕಟೇಶನಿಗೆ ನಮನ
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ತಮ್ಮ ಪತ್ನಿ ಜಯಂತಿ ಪುಷ್ಪಾ ಕುಮಾರಿ ಜೊತೆ ತಿರುಪತಿ ತಿರುಮಲದ ವೆಂಕಟೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದರು.
ಸಂಭ್ರಮದ ಸ್ವಾಗತ
ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಬಂಧನದಲ್ಲಿದ್ದ ಮಾಜಿ ಐಪಿಎಸ್ ಅಧಿಕಾರಿ ಡಿಜಿ ವಂಜಾರಾ ಅವರು ಅಹಮದಾಬಾದ್ನ ಸಾಬರಮತಿ ಜೈಲ್ನಿಂದ ಹೊರಬಂದಾಗ ಅವರ ಪತ್ನಿ ಸಂಭ್ರಮದಿಂದ ಸ್ವಾಗತಿಸಿದರು.
ಪ್ರಜಾಪ್ರಭುತ್ವ ಕಾಪಾಡಿ
ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಕೋಲ್ಕತ್ತದಲ್ಲಿ ಪ್ರಜಾಪ್ರಭುತ್ವ ಕಾಪಾಡಿ ವೇದಿಕೆಯ ಸದಸ್ಯರು ಪ್ರತಿಭಟನೆ ಜಾಥಾ ನಡೆಸಿದರು.