ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳವಾರ ಭಾರತದಲ್ಲಿ ಏನೆಲ್ಲಾ ಆಯ್ತು ಗೊತ್ತಾ?

By Kiran B Hegde
|
Google Oneindia Kannada News

ಬೆಂಗಳೂರು, ಫೆ. 17: ಭಾರತ ಹಾಗೂ ಇತರ ದೇಶಗಳಲ್ಲಿ ಮಂಗಳವಾರ ನಡೆದ ವಿವಿಧ ಘಟನಾವಳಿಗಳ ಸಂಕ್ಷಿಪ್ತ ಸುದ್ದಿಯನ್ನು ಚಿತ್ರ ಸಹಿತ ಇಲ್ಲಿ ನೀಡಲಾಗಿದೆ.

ಬೆಂಗಳೂರಿನ ಯಲಹಂಕ ವಿಮಾನ ನಿಲ್ದಾಣದಲ್ಲಿ ಬುಧವಾರ ಆರಂಭವಾಗಲಿರುವ 10ನೇ ಅಂತಾರಾಷ್ಟ್ರೀಯ ಏರೋ ಇಂಡಿಯಾ 2015 ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಯುದ್ಧ ವಿಮಾನಗಳು ಸಜ್ಜಾಗಿ ನಿಂತಿವೆ. ಪಟಿಯಾಲಾದಲ್ಲಿ ಆಯೋಜಿಸಿದ್ದ ಮಹಾಶಿವರಾತ್ರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತರು ಹಾಗೂ ಪಲ್ಲಕ್ಕಿ. ಬೋಧಗಯಾದಲ್ಲಿರುವ ಬೌದ್ಧ ದೇಗುಲದಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಯಾ ಸಿರಿಸೇನಾ ಅವರು ಪತ್ನಿ ಜೊತೆ ಪ್ರಾರ್ಥನೆ ಸಲ್ಲಿಸಿದರು.

ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯೂನಿವರ್ಸಲ್ ಸಿರಿಯನ್ ಆರ್ಥೊಡೊಕ್ಸ್ ಚರ್ಚ್‌ನ ಮುಖ್ಯಸ್ಥ ಎಚ್.ಎಚ್. ಮೊರಾನ್ ಮೊರ್ ಇಗ್ನೇಶಿಯಸ್ ಅಫ್ರೆಮ್ ದ್ವಿತೀಯ ಹಾಗೂ ಇತರರು ಭೇಟಿಯಾದರು. ಬಿಹಾರದ ಪಾಟ್ನಾ ನಗರದಲ್ಲಿ ಸಾರಿಗೆ ಸಂಸ್ಥೆ ಬಸ್ ಒಂದಕ್ಕೆ ಉದ್ರಿಕ್ತ ಜನರ ಗುಂಪೊಂದು ಬೆಂಕಿ ಹಚ್ಚಿತು. ಇನ್ನಿತರ ಸುದ್ದಿಗಳನ್ನು ಓದಲು ಕೆಳಗೆ ಕ್ಲಿಕ್ ಮಾಡಿ.

ಪ್ರದರ್ಶನಕ್ಕೆ ಯುದ್ಧ ವಿಮಾನ ಸಜ್ಜು

ಪ್ರದರ್ಶನಕ್ಕೆ ಯುದ್ಧ ವಿಮಾನ ಸಜ್ಜು

ಬೆಂಗಳೂರಿನ ಯಲಹಂಕ ವಿಮಾನ ನಿಲ್ದಾಣದಲ್ಲಿ ಬುಧವಾರ ಆರಂಭವಾಗಲಿರುವ 10ನೇ ಅಂತಾರಾಷ್ಟ್ರೀಯ ಏರೋ ಇಂಡಿಯಾ 2015 ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಸಜ್ಜಾಗಿ ನಿಂತಿರುವ ಯುದ್ಧ ವಿಮಾನ ರಫಾಲೆ.

ಬೆಂಗಳೂರಲ್ಲಿ ಯುದ್ಧ ವಿಮಾನ

ಬೆಂಗಳೂರಲ್ಲಿ ಯುದ್ಧ ವಿಮಾನ

ಬೆಂಗಳೂರಿನ ಯಲಹಂಕ ವಿಮಾನ ನಿಲ್ದಾಣದಲ್ಲಿ ಬುಧವಾರ ಆರಂಭವಾಗಲಿರುವ 10ನೇ ಅಂತಾರಾಷ್ಟ್ರೀಯ ಏರೋ ಇಂಡಿಯಾ 2015 ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಸಜ್ಜಾಗಿ ನಿಂತಿರುವ ಯುದ್ಧ ವಿಮಾನಗಳು.

ಶಿವರಾತ್ರಿ ಪಲ್ಲಕ್ಕಿ

ಶಿವರಾತ್ರಿ ಪಲ್ಲಕ್ಕಿ

ಪಟಿಯಾಲಾದಲ್ಲಿ ಆಯೋಜಿಸಿದ್ದ ಮಹಾಶಿವರಾತ್ರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತರು ಹಾಗೂ ಪಲ್ಲಕ್ಕಿ.

ಪ್ರಾರ್ಥನೆ

ಪ್ರಾರ್ಥನೆ

ಬೋಧಗಯಾದಲ್ಲಿರುವ ಬೌದ್ಧ ದೇಗುಲದಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಯಾ ಸಿರಿಸೇನಾ ಅವರು ಪತ್ನಿ ಜೊತೆ ಪ್ರಾರ್ಥನೆ ಸಲ್ಲಿಸಿದರು.

ಗಂಟೆ ಬಾರಿಸಿದ ಸಿರಿಸೇನಾ

ಗಂಟೆ ಬಾರಿಸಿದ ಸಿರಿಸೇನಾ

ಬೋಧಗಯಾದ ಮಹಾಬೋಧಿ ದೇಗುಲದಲ್ಲಿರುವ ಬೃಹತ್ ಗಂಟೆಯನ್ನು ಶ್ರೀಲಂಕಾ ಅಧ್ಯಕ್ಷ ಮೈತ್ರಿಯಾ ಸಿರಿಸೇನಾ ಅವರು ಬಾರಿಸಿದರು.

ಆರ್ಥೊಡೊಕ್ಸ್ ಚರ್ಚ್‌ ಮುಖ್ಯಸ್ಥರು

ಆರ್ಥೊಡೊಕ್ಸ್ ಚರ್ಚ್‌ ಮುಖ್ಯಸ್ಥರು

ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯೂನಿವರ್ಸಲ್ ಸಿರಿಯನ್ ಆರ್ಥೊಡೊಕ್ಸ್ ಚರ್ಚ್‌ನ ಮುಖ್ಯಸ್ಥ ಎಚ್.ಎಚ್. ಮೊರಾನ್ ಮೊರ್ ಇಗ್ನೇಶಿಯಸ್ ಅಫ್ರೆಮ್ ದ್ವಿತೀಯ ಹಾಗೂ ಇತರರು ಭೇಟಿಯಾದರು.

ಸಭೆ

ಸಭೆ

ನವದೆಹಲಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹಿಟಾಚಿ ಲಿಮಿಟೆಡ್ ಕಂಪನಿ ಅಧ್ಯಕ್ಷ ತೋಶಿಯಾಕಿ ಹಿಗಾಶಿಹರ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚಿಸಿದರು.

ನಾಯಿ ಮುದ್ದು

ನಾಯಿ ಮುದ್ದು

ಅಮೆರಿಕದ ನ್ಯೂಯಾರ್ಕ್‌ನ ವೆಸ್ಟ್‌ಮಿನಸ್ಟರ್ ಕೆನಲ್ ಕ್ಲಬ್ ಪ್ರದರ್ಶದಲ್ಲಿ ಬಹುಮಾನ ಗಳಿಸಿದ ತನ್ನ ಶ್ವಾನಕ್ಕೆ ಮುದ್ದಿಸಿದ ಒಡತಿ.

ಪ್ರತಿಭಟನೆ

ಪ್ರತಿಭಟನೆ

ಚರ್ಚ್ ಮೇಲೆ ನಡೆದ ದಾಳಿಯನ್ನು ಖಂಡಿಸಿ ಮೀರತ್‌ನಲ್ಲಿ ಕ್ರೈಸ್ತ ಸಮುದಾಯದವರು ಪ್ರತಿಭಟನೆ ನಡೆಸಿದರು.

ಶಾರುಕ್ ಖಾನ್

ಶಾರುಕ್ ಖಾನ್

ನವದೆಹಲಿಯಲ್ಲಿ ಆಯೋಜಿಸಿದ್ದ 'ಇಂಡಿಯಾ ಪೂಚೇಗಾ - ಸಬ್ಸೆ ಶಾಣಾ ಕೌನ್' ಕಾರ್ಯಕ್ರಮದಲ್ಲಿ ನರ್ತಿಸಿದ ಬಾಲಿವುಡ್ ನಟ ಶಾರುಕ್ ಖಾನ್.

ಔತಣಕೂಟ

ಔತಣಕೂಟ

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದ ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಹಾಗೂ ಎನ್ಎಸ್ಎ ಅಜಿತ್ ಧೋವಲ್ ಭಾಗವಹಿಸಿದ್ದರು.

ಕ್ರೈಸ್ತರ ಕಾರ್ಯಕ್ರಮ

ಕ್ರೈಸ್ತರ ಕಾರ್ಯಕ್ರಮ

ನವದೆಹಲಿಯಲ್ಲಿ ಆಯೋಜಿಸಿದ್ದ ಕ್ರೈಸ್ತ ಸಮುದಾಯದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವ ಅರುಣ್ ಜೈಟ್ಲಿ, ಅಲ್ಪಸಂಖ್ಯಾತ ಖಾತೆ ಸಚಿವೆ ನಜ್ಮಾ ಹೆಫ್ತುಲ್ಲಾ ಹಾಗೂ ರಾಜ್ಯಸಭಾ ಉಪಾಧ್ಯಕ್ಷ ಪಿ.ಜೆ. ಕುರಿಯನ್ ಭಾಗವಹಿಸಿದ್ದರು.

ಜೆಡಿಯು ಪ್ರತಿಭಟನೆ

ಜೆಡಿಯು ಪ್ರತಿಭಟನೆ

ಜೆಡಿಯು ಪಕ್ಷದ ಕಾರ್ಯಕರ್ತರು ಬಿಹಾರದ ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ನಡೆಸಿದರು.

ಸಚಿವರ ಚರ್ಚೆ

ಸಚಿವರ ಚರ್ಚೆ

ನವದೆಹಲಿಯಲ್ಲಿ ಆಯೋಜಿಸಿದ್ದ 'ರಿ-ಇನ್ವೆಸ್ಟ್ 2015' ಕಾರ್ಯಕ್ರಮದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೈಟ್ಲಿ ಹಾಗೂ ರೈಲ್ವೆ ಸಚಿವ ಸುರೇಶ್ ಪ್ರಭು ಗಹನ ಚರ್ಚೆ ನಡೆಸಿದರು.

ಮನೆಯಲ್ಲಿ

ಮನೆಯಲ್ಲಿ

ನವದೆಹಲಿಯಲ್ಲಿ ಆಯೋಜಿಸಿದ್ದ ಡೆಲ್ಲಿ ಪೊಲೀಸ್ ರೈಸಿಂಗ್ ಡೆ ಕಾರ್ಯಕ್ರಮ 'ಮನೆಯಲ್ಲಿ' ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹಾಗೂ ನವದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾಗವಹಿಸಿದ್ದರು.

ಬಸ್‌ಗೆ ಬೆಂಕಿ

ಬಸ್‌ಗೆ ಬೆಂಕಿ

ಬಿಹಾರದ ಪಾಟ್ನಾ ನಗರದಲ್ಲಿ ಸಾರಿಗೆ ಸಂಸ್ಥೆ ಬಸ್ ಒಂದಕ್ಕೆ ಉದ್ರಿಕ್ತ ಜನರ ಗುಂಪೊಂದು ಬೆಂಕಿ ಹಚ್ಚಿತು.

English summary
Here are the news happened in India and around the nations on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X