ಕೇರಳಕ್ಕೆ ಮತ್ತೆ ಅಪ್ಪಳಿಸಲಿದೆ ಧಾರಾಕಾರ ಮಳೆ: yellow alert ಘೋಷಣೆ
Recommended Video
ತಿರುವನಂತಪುರಂ, ಸೆಪ್ಟೆಂಬರ್ 24: ಆಗಸ್ಟ್ ತಿಂಗಳಾರಂಭದಿಂದ ಕೇರಳವನ್ನು ಕಾಡಿದ್ದ ಧಾರಾಕಾರ ಮಳೆ ಮತ್ತೆ ಕೇರಳಕ್ಕೆ ಅಪ್ಪಳಿಸಲಿದೆ. ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಈಗಾಗಲೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಅಂತೆಯೇ ಕೇರಳದಲ್ಲೂ ಸೆ.25 ಮತ್ತು 26 ರಂದು ಧಾರಾಕಾರ ಮಳೆ ಸುರಿಯಲಿದ್ದು, ರಾಜ್ಯದ ಪಠಾನ್ತಿಟ್ಟ, ಇಡುಕ್ಕಿ, ಪಲಕ್ಕಾಡ್, ತ್ರಿಶೂರ್ ಮತ್ತು ವಯ್ನಾಡ್ ಜಿಲ್ಲೆಯ ಜನರಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...
ಈ ಕುರಿತು ಸ್ವತಃ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದು, "ಪಠಾನ್ತಿಟ್ಟ, ಇಡುಕ್ಕಿ, ಪಲಕ್ಕಾಡ್, ತ್ರಿಶೂರ್ ಮತ್ತು ವಯ್ನಾಡ್ ಜಿಲ್ಲೆಗಳಲ್ಲಿ Yellow alert ಘೋಷಣೆ ಮಾಡಲಾಗಿದ್ದು, ಸುಮಾರು 64.4 ರಿಂದ 124.4 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ" ಎಂದಿದ್ದಾರೆ.
Yellow alert for Pathanamthitta, Idukki & Wayanad districts for 25th. In addition, yellow alert has been issued for Palakkad, Idukki, Thrissur and Wayanad districts for 26th. Met Centre has predicted heavy rainfall (64.4mm to 124.4mm) in these districts.
— CMO Kerala (@CMOKerala) September 23, 2018
ಜೊತೆಗೆ ಈಗಾಗಲೇ ರಾಹ್ಯ ವಿಪತ್ತು ನಿರ್ವಹಣಾ ದಳ ಕ್ಕೆ ಮಳೆ ಮುನ್ಸೂಚನೆ ಇರುವ ಎಲ್ಲಾ ಜಿಲ್ಲೆಗಳಲ್ಲೂ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೊಚ್ಚಿಹೋದದ್ದು ಸೂರೊಂದೇ ಅಲ್ಲ,ಕನಸೂ!ಪ್ರವಾಹ ಸಂತ್ರಸ್ತನ ಕಣ್ಣೀರ ಕತೆ
ಕೇರಳದಲ್ಲಿ ಆಗಸ್ಟ್ ತಿಂಗಳ ಮೊದಲೆರಡು ವಾರ ಸುರಿದ ನಿರಂತರ ಮಳೆಗೆ ಸುಮಾರು 350 ಕ್ಕೂ ಹೆಚ್ಚು ಜನರು ಮೃತರಾಗಿದ್ದು, ಇದುವರೆಗೂ 19512 ನಷ್ಟ ಸಂಭವಿಸಿತ್ತು. ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದು, ದೇಶದಾದ್ಯಂತ ಹರಿದುಬಂದ ದೇಣಿಗೆಯ ನೆರವಿನಿಂದ ಕೇರಳವನ್ನು ಮತ್ತೆ ಕಟ್ಟುವ ಕೆಲಸ ನಡೆಯುತ್ತಿದೆ. ಆದರೆ ಈ ನಡುವೆ ಮತ್ತೊಮ್ಮೆ ಮಳೆಯ ಮುನ್ಸೂಚನೆ ದೊರೆತಿದ್ದು ದೇವರ ನಾಡಿನ ಜನರ ನಿದ್ದೆ ಕೆಡಿಸಿದೆ.